ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಸತತ ಒಂಬತ್ತನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. 2019ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಸತತ ಕನಿಷ್ಠ ಐದು ಬಜೆಟ್ಗಳನ್ನು ಮಂಡಿಸಿದ ಕೆಲವೇ ಕೆಲವು ಹಣಕಾಸು ಸಚಿವರ ಪಟ್ಟಿಗೆ ಸೀತಾರಾಮನ್ ಸೇರ್ಪಡೆಗೊಂಡಿದ್ದಾರೆ. ಈ ವಿಶಿಷ್ಟ ಗುಂಪಿನಲ್ಲಿ ಮೊರಾರ್ಜಿ ದೇಸಾಯಿ, ಮನಮೋಹನ್ ಸಿಂಗ್, ಪಿ. ಚಿದಂಬರಂ, ಯಶವಂತ್ ಸಿನ್ಹಾ ಮತ್ತು ಅರುಣ್ ಜೇಟ್ಲಿ ಅವರಂತಹ ಪ್ರಮುಖ ಭಾರತೀಯ ನಾಯಕರು ಸೇರಿದ್ದಾರೆ.

2016ರ ಮೊದಲು, ಕೇಂದ್ರ ಬಜೆಟ್ ಅನ್ನು ಸಾಂಪ್ರದಾಯಿಕವಾಗಿ ಪ್ರತಿ ವರ್ಷ ಫೆಬ್ರವರಿ ಕೊನೆಯ ದಿನಾಂಕದಂದು ಮಂಡಿಸಲಾಗುತ್ತಿತ್ತು. ಆದರೆ, 2017ರಿಂದ ಈ ದಿನಾಂಕವನ್ನು ಫೆಬ್ರವರಿ 1ಕ್ಕೆ ಬದಲಾಯಿಸಲಾಯಿತು. ಬಜೆಟ್ ಮಂಡನೆಯಲ್ಲಿ ಮತ್ತೊಂದು ಮಹತ್ವದ ಬದಲಾವಣೆಯು 2021ರ ಕೇಂದ್ರ ಬಜೆಟ್ನೊಂದಿಗೆ ಬಂದಿತು, ಆಗ ನಿರ್ಮಲಾ ಸೀತಾರಾಮನ್ ಅವರು ಕಾಗದರಹಿತ ಸ್ವರೂಪವನ್ನು ಪರಿಚಯಿಸಿದರು.
ಸಾಂಪ್ರದಾಯಿಕ ಬಹಿ ಖಾತಾ (ಲೆಕ್ಕಪತ್ರ ಪುಸ್ತಕ) ಸ್ವರೂಪದಿಂದ ಭಿನ್ನವಾಗಿ, ಅವರು ಕೆಂಪು ಹೊದಿಕೆಯ ಟ್ಯಾಬ್ಲೆಟ್ ಅನ್ನು ಬಳಸಿದ್ದರು, ಅದರ ಮೇಲೆ ಚಿನ್ನದ ರಾಷ್ಟ್ರೀಯ ಲಾಂಛನವನ್ನು ಅಳವಡಿಸಲಾಗಿತ್ತು. ಅಂದಿನಿಂದ ಡಿಜಿಟಲ್ ಬಜೆಟ್ ಮಂಡನೆಯು ಸಂಸತ್ತಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ, ದಶಕಗಳಷ್ಟು ಹಳೆಯ ಸಂಪ್ರದಾಯದಲ್ಲಿ ತಾಂತ್ರಿಕ ಬದಲಾವಣೆಯನ್ನು ಗುರುತಿಸಿದೆ.
ಕೇಂದ್ರ ಬಜೆಟ್ ಸಿದ್ಧತೆಯು ಅತ್ಯಂತ ಸೂಕ್ಷ್ಮ ಮತ್ತು ದೀರ್ಘ ಪ್ರಕ್ರಿಯೆಯಾಗಿದೆ. ಇದು ಬಜೆಟ್ ಮಂಡನೆಗೂ ಕೆಲವು ತಿಂಗಳುಗಳ ಮುಂಚೆ, ಸಾಮಾನ್ಯವಾಗಿ ಸೆಪ್ಟೆಂಬರ್ನಲ್ಲಿ, ಪ್ರಾರಂಭವಾಗುತ್ತದೆ. ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳ ನಡುವೆ ವ್ಯಾಪಕ ಸಮನ್ವಯ, ಚರ್ಚೆಗಳು ಮತ್ತು ವಿಶ್ಲೇಷಣೆಗಳನ್ನು ಇದು ಒಳಗೊಂಡಿರುತ್ತದೆ.
ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿನ ಬಜೆಟ್ ವಿಭಾಗವು ಸಚಿವಾಲಯಗಳು, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ರಕ್ಷಣಾ ಪಡೆಗಳು ಮತ್ತು ಇತರ ಘಟಕಗಳಿಗೆ ಸುತ್ತೋಲೆಗಳನ್ನು ನೀಡುವ ಮೂಲಕ ಈ ಪ್ರಕ್ರಿಯೆಯನ್ನು ಆರಂಭಿಸುತ್ತದೆ. ಈ ಘಟಕಗಳು ತಮ್ಮ ಅಂದಾಜು ವೆಚ್ಚಗಳು ಮತ್ತು ಮುಂದಿನ ಹಣಕಾಸು ವರ್ಷದ ಆದಾಯಗಳಿಗೆ ಸಂಬಂಧಿಸಿದ ಅಂದಾಜುಗಳನ್ನು, ಹಾಗೆಯೇ ಪ್ರಸ್ತುತ ಹಣಕಾಸು ವರ್ಷಕ್ಕೆ ಪರಿಷ್ಕೃತ ಅಂದಾಜುಗಳನ್ನು ಸಲ್ಲಿಸಬೇಕಾಗುತ್ತದೆ.
ಈ ಅಂದಾಜುಗಳು ಸ್ವೀಕೃತವಾದ ನಂತರ, ಹಿರಿಯ ಅಧಿಕಾರಿಗಳು, ಆದಾಯ ಕಾರ್ಯದರ್ಶಿ ಸೇರಿದಂತೆ, ದಾಖಲೆಗಳ ಸಮಗ್ರ ಪರಿಶೀಲನೆ ನಡೆಸುತ್ತಾರೆ. ಸಚಿವಾಲಯಗಳು ಮತ್ತು ಇಲಾಖೆಗಳು ತಮ್ಮ ಆರ್ಥಿಕ ಚಟುವಟಿಕೆಗಳ ಬಗ್ಗೆ ವಿವರವಾದ ಒಳನೋಟಗಳನ್ನು ನೀಡುತ್ತವೆ, ಅವುಗಳನ್ನು ಬಜೆಟ್ ಕೊರತೆಯನ್ನು ಅಂದಾಜು ಮಾಡಲು ಮತ್ತು ಸಾಲದ ಅವಶ್ಯಕತೆಗಳನ್ನು ನಿರ್ಧರಿಸಲು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ. ನಂತರ ಆರ್ಥಿಕ ಸವಾಲುಗಳನ್ನು ನಿರ್ವಹಿಸುವಲ್ಲಿ ಮಾರ್ಗದರ್ಶನ ನೀಡಲು ಮುಖ್ಯ ಆರ್ಥಿಕ ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ.
ಹಣಕಾಸು ಸಚಿವಾಲಯವು ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳ ನಡುವೆ ನಿಧಿಗಳ ಹಂಚಿಕೆಯನ್ನು ನಿರ್ಧರಿಸುತ್ತದೆ. ಹಂಚಿಕೆಗಳ ಬಗ್ಗೆ ಭಿನ್ನಾಭಿಪ್ರಾಯ ಮೂಡಿದರೆ, ಸಚಿವಾಲಯವು ಕೇಂದ್ರ ಸಚಿವ ಸಂಪುಟ ಅಥವಾ ಪ್ರಧಾನಮಂತ್ರಿಗಳಿಂದ ಮಾರ್ಗದರ್ಶನ ಪಡೆಯುತ್ತದೆ. ಬಜೆಟ್ ಸಿದ್ಧತೆ ಪ್ರಕ್ರಿಯೆಯಲ್ಲಿ ಇದು ಅತ್ಯಂತ ನಿರ್ಣಾಯಕ ಹಂತಗಳಲ್ಲಿ ಒಂದಾಗಿದೆ.
ನಂತರ, ಹಣಕಾಸು ಸಚಿವರು ಅರ್ಥಶಾಸ್ತ್ರಜ್ಞರು, ರಾಜ್ಯ ಪ್ರತಿನಿಧಿಗಳು, ಬ್ಯಾಂಕರ್ಗಳು, ರೈತರು ಮತ್ತು ಕಾರ್ಮಿಕ ಸಂಘಗಳು ಸೇರಿದಂತೆ ವಿವಿಧ ಮಧ್ಯಸ್ಥಗಾರರೊಂದಿಗೆ ಅನೇಕ ಸುತ್ತಿನ ಸಮಾಲೋಚನೆಗಳನ್ನು ನಡೆಸುತ್ತಾರೆ. ಈ ಚರ್ಚೆಗಳು ಮುಂಬರುವ ಬಜೆಟ್ಗೆ ಪ್ರಮುಖ ಆದ್ಯತೆಗಳು ಮತ್ತು ಬೇಡಿಕೆಗಳನ್ನು ಗುರುತಿಸಲು ಸಹಾಯ ಮಾಡುತ್ತವೆ.
ಪ್ರಸಿದ್ಧ 'ಹಲ್ವಾ' ಸಮಾರಂಭವು ಬಜೆಟ್ ಸಿದ್ಧತೆಯ ಅಂತಿಮ ಹಂತವನ್ನು ಸಂಕೇತಿಸುತ್ತದೆ. ಈ ಸಮಾರಂಭದಲ್ಲಿ, ಹಣಕಾಸು ಸಚಿವಾಲಯದ ಸಿಬ್ಬಂದಿಗಳಿಗೆ ಸಾಂಪ್ರದಾಯಿಕ ಭಾರತೀಯ ಸಿಹಿ ಖಾದ್ಯ (ಹಲ್ವಾ) ವನ್ನು ವಿತರಿಸಲಾಗುತ್ತದೆ. ಇದು ಬಜೆಟ್ ದಾಖಲೆಗಳ ಮುದ್ರಣ ಪ್ರಕ್ರಿಯೆಯ ಆರಂಭವನ್ನು ಸೂಚಿಸುತ್ತದೆ. ಗೌಪ್ಯತೆ ಕಾಪಾಡಲು, ಈ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಧಿಕಾರಿಗಳು ಬಜೆಟ್ ಮಂಡಿಸುವವರೆಗೆ ಉತ್ತರ ಬ್ಲಾಕ್ನಲ್ಲಿನ ಬಜೆಟ್ ಪ್ರೆಸ್ನಲ್ಲಿ ಏಕಾಂತದಲ್ಲಿ ಇರುತ್ತಾರೆ.
ಅಂತಿಮ ಹಂತದಲ್ಲಿ, ಹಣಕಾಸು ಸಚಿವರು ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿ, ಅದರ ಮುಖ್ಯಾಂಶಗಳು ಮತ್ತು ಶಿಫಾರಸುಗಳನ್ನು ವಿವರಿಸುತ್ತಾರೆ. ನಂತರ ಬಜೆಟ್ ಅನ್ನು ಉಭಯ ಸದನಗಳಲ್ಲಿ ಚರ್ಚಿಸಿ, ಅನುಮೋದಿಸಿದ ಬಳಿಕ, ಔಪಚಾರಿಕ ಒಪ್ಪಿಗೆಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಲಾಗುತ್ತದೆ.
ಮುಂದಿನ ಕೇಂದ್ರ ಬಜೆಟ್ 2026, 2026ರ ಫೆಬ್ರವರಿ 1ರಂದು ಸಂಸತ್ತಿನಲ್ಲಿ ಮಂಡನೆಯಾಗಲು ಸಿದ್ಧವಾಗಿದೆ. ನಿರ್ಮಲಾ ಸೀತಾರಾಮನ್ ಅವರು ಭಾರತೀಯ ಆರ್ಥಿಕತೆಯ ಸ್ಕೂಲ ಆರ್ಥಿಕ ಆದಾಯ ಮತ್ತು ವೆಚ್ಚಗಳನ್ನು ಪ್ರಸ್ತುತಪಡಿಸಲಿದ್ದು, ಮುಂದಿನ ಹಣಕಾಸು ವರ್ಷಕ್ಕೆ ಕೆಲವು ಪ್ರಮುಖ ಉಪಕ್ರಮಗಳನ್ನು ಸಹ ಪ್ರಕಟಿಸಲಿದ್ದಾರೆ.
More From GoodReturns

Lunar Eclipse 2026: ವರ್ಷದ ಮೊದಲ ಚಂದ್ರಗ್ರಣ...ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಎಚ್ಚರಿಕೆ? ತಿಳಿಯಿರಿ

Total Lunar Eclipse: ಭಾರತದಲ್ಲಿ ಅಪರೂಪದ ರಕ್ತ ಚಂದ್ರಗ್ರಹಣ…ಮಾರ್ಚ್ 3ರಂದು ಯಾವಾಗ ವೀಕ್ಷಿಸಬೇಕು? ತಿಳಿಯಿರಿ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Silver Rate Today: 3 ದಿನದ ನಂತರ ಗಗನಕ್ಕೇರಿದ ಬೆಳ್ಳಿ ದರ! ದಿಢೀರ್ 10,000 ರೂ. ಹೆಚ್ಚಳ

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

ಏಪ್ರಿಲ್ 1ರಿಂದ ಈ ರಾಜ್ಯದ ಸರ್ಕಾರಿ ಜನರಿಗೆ ಹೊಸ ಪಿಂಚಣಿ...ಕೊನೆಯ ಸಂಬಳದ 50%ನಷ್ಟು ಖಚಿತ! ಈ ಗುಡ್ನ್ಯೂಸ್ ಯಾರಿಗೆ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

Investment: ಹೂಡಿಕೆ ತಡವಾಗಿ ಮಾಡ್ತಿದ್ದೀರ? 35ರ ನಂತರ ಹೇಗೆ ಸಂಪತ್ತು ನಿರ್ಮಿಸಬೇಕು ಎಂದು ಇಲ್ಲಿ ತಿಳಿಯಿರಿ



Click it and Unblock the Notifications