ಬೆಂಗಳೂರು, ಮಾರ್ಚ್ 30: ಝೀ ಎಂಟರ್ಟೈನ್ಮೆಂಟ್ ಬೆಂಗಳೂರಿನ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವನ್ನು (ಟಿಐಸಿ) ವಿಶೇಷ ಸಮಿತಿಯ ಮಾರ್ಗದರ್ಶನದ ನಂತರ ಸುಮಾರು 50 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ಹೇಳಿದೆ.
ಕಂಪೆನಿಯ ಎಂಡಿ ಮತ್ತು ಸಿಇಒ ನಿರ್ವಹಣಾ ವೆಚ್ಚ ಕಡಿತಗೊಳಿಸಲು ಟಿಐಸಿ ಸಿಬ್ಬಂದಿಯನ್ನು ಶೇಕಡಾ 50 ರಷ್ಟು ಕಡಿತಗೊಳಿಸಿದ್ದಾರೆ. ಟೆಕ್ನಿಕಲ್ ಸೆಲ್ಯೂಷನ್ಗಳನ್ನು ಒದಗಿಸುವ ಕಂಪನಿಯ ಬೆಂಗಳೂರು ಮೂಲದ ಪ್ರಮುಖ ಕೇಂದ್ರವಾಗಿದೆ ಎಂದು ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಝೀ ಕಂಪನಿಯು ಈ ಕ್ರಮದಿಂದ ಕೆಲಸ ಕಳೆದುಕೊಂಡ ಉದ್ಯೋಗಿಗಳ ನಿಖರ ಸಂಖ್ಯೆಯನ್ನು ಹಂಚಿಕೊಂಡಿಲ್ಲವಾದರೂ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಕೇಂದ್ರವು 650 ಕ್ಕೂ ಹೆಚ್ಚು ಎಂಜಿನಿಯರ್ಗಳನ್ನು ಹೊಂದಿದೆ. ಅವರು ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಗೆಲ್ಲುವ ಓಟದಲ್ಲಿ ನಮಗೆ ನಿರೀಕ್ಷೆಯಂತೆ ಉದ್ಯೋಗನಿರತರಾಗಿದ್ದಾರೆ ಎಂದು ತಿಳಿಸಿದೆ.
ಝೀ 3ಎಂ ಪ್ರೋಗ್ರಾಂ ಎಂಬ ಮಾಸಿಕ ನಿರ್ವಹಣಾ ಮಾರ್ಗದರ್ಶನವನ್ನು ರಚಿಸಿದೆ. ಇದು ಪ್ರಮುಖ ಕಾರ್ಯಕ್ಷಮತೆಯ ಹಂತಗಳನ್ನು ಸಾಧಿಸಲು ನಿರ್ವಹಣಾ ತಂಡಕ್ಕೆ ಮಾರ್ಗದರ್ಶನ ನೀಡುತ್ತದೆ ಮತ್ತು ಸಕ್ರಿಯಗೊಳಿಸುತ್ತದೆ. ಇತ್ತೀಚೆಗೆ ನಡೆದ 3ಎಂ ಕಾರ್ಯಕ್ರಮದಲ್ಲಿ ಮಂಡಳಿಯಿಂದ ಪಡೆದ ಮಾರ್ಗದರ್ಶನದ ಆಧಾರದ ಮೇಲೆ ಎಂಡಿ, ಸಿಇಒ ಪುನೀತ್ ಗೋಯೆಂಕಾ ಅವರು ಟಿಐಸಿಯ ರಚನೆಯನ್ನು ಸರಿಸುಮಾರು 50 ಪ್ರತಿಶತದಷ್ಟು ಕಡಿತಗೊಳಿಸಿದ್ದಾರೆ ಮತ್ತು ಅದರ ಕಾರ್ಯವ್ಯಾಪ್ತಿಯನ್ನು ಸುವ್ಯವಸ್ಥಿತಗೊಳಿಸಿದ್ದಾರೆ ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ.
ಗ್ರಾಹಕರ ಆದ್ಯತೆಗಳ ಬಗ್ಗೆ ಅಳವಾದ ಅರಿವು ಪಡೆಯಲು ತಂತ್ರಜ್ಞಾನ-ನೇತೃತ್ವದ ಸಾಧನಗಳನ್ನು ಬಳಸಿಕೊಳ್ಳುತ್ತಿದೆ. ಈ ಮೂಲಕ ಕಂಪನಿಯ ಒಟ್ಟಾರೆ ವಿಷಯ ರಚನೆ, ವಿತರಣೆ ಮತ್ತು ಹಣ ಗಳಿಕೆಯ ಪ್ರಕ್ರಿಯೆಯನ್ನು ಹೆಚ್ಚಿಸುವಲ್ಲಿ ಟಿಐಸಿ ತೀಕ್ಷ್ಣವಾದ ಗಮನವನ್ನು ನೀಡಿದೆ ಎಂದು ಅದು ಹೇಳಿದೆ.
"ನಮ್ಮ ವೀಕ್ಷಕರಿಗೆ ಶ್ರೀಮಂತ ಮತ್ತು ಮಹತ್ವದ ಕಂಟೆಟ್ ಅನ್ನು ರಚಿಸುವತ್ತ ನಾವು ಗಮನ ಹರಿಸಿದ್ದೇವೆ. ಪ್ರಪಂಚದಾದ್ಯಂತದ ಶತಕೋಟಿ ವೀಕ್ಷಕರ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ನಮ್ಮ ಕೈಯಲ್ಲಿ ದೊಡ್ಡ ಜವಾಬ್ದಾರಿ ಇದೆ. ನಾವು ಅವರ ಹೃದಯಗಳನ್ನು ಗೆಲ್ಲುವುದನ್ನು ಮುಂದುವರಿಸುತ್ತೇವೆ. ಇದನ್ನು ಸಾಧಿಸಲು ನಮಗೆ ಸೃಜನಾತ್ಮಕ ವಿಧಾನ, ತಂತ್ರಜ್ಞಾನದ ಮಿಶ್ರಣದ ಅಗತ್ಯವಿದೆ" ಎಂದು ಗೋಯೆಂಕಾ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಸಮಿತಿಯು ಟಿಐಸಿಯ ವಿವರವಾದ ವಿಶ್ಲೇಷಣೆಯನ್ನು ನಡೆಸಿದೆ ಎಂದು ಝೀ ಹೇಳಿತ್ತು. ಇದು ಕಳೆದ ವರ್ಷ ಸುಮಾರು 600 ಕೋಟಿ ರೂ. ವೆಚ್ಚ ಮಾಡಿದೆ. 2024-25ರ ಹಣಕಾಸು ವರ್ಷದಲ್ಲಿ ಟಿಐಸಿಯಲ್ಲಿನ ವೆಚ್ಚವನ್ನು ಶೇಕಡಾ 50 ರಷ್ಟು ಕಡಿಮೆ ಮಾಡಲು ಮತ್ತು ಕಂಪನಿಯ ಕಂಟೆಟ್ ಡೆವಲಪ್ಮೆಂಟ್, ವಿತರಣೆ ಮತ್ತು ಹಣಗಳಿಕೆಯ ವಿಧಾನವನ್ನು ಹೆಚ್ಚಿಸಲು ಅದರ ಸೇವೆಗಳನ್ನು ಬಳಸಿಕೊಳ್ಳುವಂತೆ ಸಮಿತಿಯು ಸಲಹೆ ನೀಡಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications