ಆಧಾರ್ ಕಾರ್ಡ್ ಪ್ರಸ್ತುತ ದೇಶದಲ್ಲಿ ನಾವು ಬಳಕೆ ಮಾಡುವ ಅತೀ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ನಾವು ಯಾವುದೇ ಸರ್ಕಾರಿ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೂ ಆಧಾರ್ ಕಾರ್ಡ್ ಅನ್ನು ನಾವು ಸಲ್ಲಿಸಬೇಕಾಗುತ್ತದೆ. ಕೆಲವೊಂದು ದಾಖಲೆಗಳಿಗೂ ಆಧಾರ್ ಲಿಂಕ್ ಮಾಡಬೇಕಾಗುತ್ತದೆ. ಆದರೆ ನಾವು ಈ ಒಂದು ಕಾರ್ಯಕ್ಕೆ ಆಧಾರ್ ಕಾರ್ಡ್ ಅನ್ನು ಬಳಕೆ ಮಾಡುವಂತಿಲ್ಲ.
ಹೌದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಜನ್ಮ ದಿನಾಂಕವನ್ನು (DoB) ಪರಿಶೀಲಿಸುವ ದಾಖಲೆಗಳ ಪಟ್ಟಿಯಿಂದ ಆಧಾರ್ ಅನ್ನು ತೆಗೆದುಹಾಕಿದೆ. ಇದರಿಂದಾಗಿ ಇಪಿಎಫ್ಒನಲ್ಲಿ ಜನ್ಮ ದಿನ ಪರಿಶೀಲನೆ ಆಧಾರ್ ಬಳಸುವಂತಿಲ್ಲ. ಇಪಿಎಫ್ಒ ಭಾರತದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಭಾಗವಾಗಿದೆ.

ಈ ಕ್ರಮವು ಆಧಾರ್ಗೆ ಜವಾಬ್ದಾರರಾಗಿರುವ ಆಡಳಿತ ಮಂಡಳಿಯಾದ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾದ (ಯುಐಡಿಎಐ) ನಿರ್ದೇಶನವಾಗಿದೆ. ಈಗ ನೀವು ಆಧಾರ್ ಬದಲಾಗಿ ಬೇರೆ ಕೆಲವು ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
ಇಪಿಎಫ್ಒ ಸೇರಿದಂತೆ ಹಲವಾರು ಘಟಕಗಳು ಆಧಾರ್ ಅನ್ನು ಜನ್ಮ ದಿನಾಂಕದ ಪುರಾವೆಯಾಗಿ ಪರಿಗಣಿಸಿರುವುದನ್ನು ಯುಐಡಿಎಐ ಗಮನಿಸಿದೆ. ಆದರೆ ಆಧಾರ್ ಒಂದು ವಿಶಿಷ್ಟ ಗುರುತಿಸುವಿಕೆಯಾಗಿ ಕಾರ್ಯನಿರ್ವಹಿಸುತ್ತದೆಯಾದರೂ ಆಧಾರ್ ಕಾಯಿದೆ, 2016 ರ ಪ್ರಕಾರ ಜನ್ಮ ದಿನಾಂಕದ ಖಚಿತಪಡಿಸುವ ಮಾನದಂಡವನ್ನು ಹೊಂದಿರುವುದಿಲ್ಲ ಎಂದು ಯುಐಡಿಎಯು ಒತ್ತಿ ಹೇಳಿದೆ.
"ಆಧಾರ್ ತನ್ನ ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಸಲ್ಲಿಸುವ ಮೂಲಕ ದಾಖಲಾತಿ ಪ್ರಕ್ರಿಯೆಗೆ ಒಳಗಾದ ನಂತರ ನಿವಾಸಿಗೆ ನೀಡಲಾದ ಅನನ್ಯ 12 ಅಂಕಿಯ ಐಡಿ ಎಂದು ನಮೂದಿಸುವುದು ಸೂಕ್ತವಾಗಿದೆ. ದಾಖಲಾತಿ/ಅಪ್ಡೇಟ್ ಸಮಯದಲ್ಲಿ, ಯುಐಡಿಎಐ ವೆಬ್ಸೈಟ್ನಲ್ಲಿ ಒದಗಿಸಲಾದ ಆಧಾರ್ ದಾಖಲಾತಿಗಾಗಿ ಪೋಷಕ ದಾಖಲೆಗಳ ಪಟ್ಟಿಯಡಿಯಲ್ಲಿ ನಿರ್ದಿಷ್ಟಪಡಿಸಿದಂತೆ, ಅವರು ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ, ನಿವಾಸಿಗಳು ಕ್ಲೈಮ್ ಮಾಡಿದ ಜನ್ಮದಿನಾಂಕವನ್ನು ಯುಐಡಿಎಐ ದಾಖಲಿಸುತ್ತದೆ," ಎಂದು ವರದಿಯಾಗಿದೆ.
ಇದು ಡಿಸೆಂಬರ್ 20, 2018 ರ ದಿನಾಂಕದಂದು MeitY ನೀಡಿದ ಮೆಮೊರೆಂಡಮ್ ಅನ್ನು ಉಲ್ಲೇಖಿಲಸಾಗಿದೆ. "ದೃಢೀಕರಣಕ್ಕೆ ಒಳಪಟ್ಟಿರುವ ವ್ಯಕ್ತಿಯ ಗುರುತನ್ನು ಸ್ಥಾಪಿಸಲು ಆಧಾರ್ ಸಂಖ್ಯೆಯನ್ನು ಬಳಸಬಹುದು ಮತ್ತು ಆ ಮೂಲಕ ಅದು ಹುಟ್ಟಿದ ದಿನಾಂಕದ ಪುರಾವೆ ಅಲ್ಲ," ಎಂದು ಅದು ಹೇಳಿದೆ.
ಯುಐಡಿಎಐನ ನಿಲುವನ್ನು ಅನುಸರಿಸಿ ಇಪಿಎಫ್ಒ ಆಧಾರ್ ಅನ್ನು ಜನ್ಮ ದಿನಾಂಕದ ಪುರಾವೆಯಾಗಿ ಪರಿಗಣಿಸಬಾರದು ಎಂದು ಒತ್ತಿಹೇಳಿದೆ. ಈ ವಿಷಯದಲ್ಲಿ ಅದರ ಅರ್ಹತೆ ಇಲ್ಲದ ಸ್ಥಿತಿಯನ್ನು ಒತ್ತಿಹೇಳಿದೆ. ಇಪಿಎಫ್ಒನ ನಿರ್ಧಾರವು ಕೇಂದ್ರ ಭವಿಷ್ಯ ನಿಧಿ ಆಯುಕ್ತರಿಂದ (ಸಿಪಿಎಫ್ಸಿ) ಅನುಮೋದನೆಯನ್ನು ಪಡೆದುಕೊಂಡಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications