ಹೂಡಿಕೆ (Investment) ಮಾಡೋದು ಹಲವರ ಅಭ್ಯಾಸ. ಆದ್ರೆ ಕೆಲವರಿಗೆ ಯಾವುದರಲ್ಲಿ ಹೂಡಿಕೆ ಮಾಡಿದ್ರೆ ಒಳ್ಳೆಯದು? ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹಾಗಿದ್ದರೆ, ಕೇಂದ್ರ ಸರ್ಕಾರದ ಅಡಿಯಲ್ಲಿರುವ ಅಂಚೆ ಕಚೇರಿ ಯೋಜನೆಗಳು (Post Office Scheme) ಒಂದು ಉತ್ತಮ ಆಯ್ಕೆಯಾಗಿವೆ. ಅನೇಕ ಜನರು ನಿವೃತ್ತಿಗೆ ಹತ್ತಿರವಾದಾಗ ಮಾತ್ರ ಆದಾಯದ ಮೂಲಕ್ಕಾಗಿ ಬಳಸುತ್ತಾರೆ. ಆದರೆ ಹೂಡಿಕೆಯ ಪ್ಲಾನ್ ಇರುವವರಿಗೆ ಇಲ್ಲೊಂದು ಬೆಸ್ಟ್ ಯೋಜನೆ ಇದೆ ನೋಡಿ.

ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಹಿರಿಯ ನಾಗರಿಕರಿಗೆ ಅತ್ಯುತ್ತಮ ಮತ್ತು ಉತ್ತಮ ಆದಾಯವನ್ನು ನೀಡುತ್ತದೆ. ಪ್ರಸ್ತುತ, ಈ ಯೋಜನೆಗೆ ಅಂಚೆ ಕಚೇರಿ 8.2% ಬಡ್ಡಿದರವನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ಒಮ್ಮೆಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಸಿದ್ಧರಿದ್ದರೆ, ಭವಿಷ್ಯದಲ್ಲಿ ಉತ್ತಮ ಲಾಭ ಗಳಿಸಬಹುದು. ಈ ಯೋಜನೆ ಅಪಾಯವೂ ಕಡಿಮೆ, ಆದಾಯವೂ ಹೆಚ್ಚು.
ಯಾರು ಅಕೌಂಟ್ ತೆರೆಯಬಹುದು?
60 ವರ್ಷಕ್ಕಿಂತ ಮೇಲ್ಪಟ್ಟ ಯಾರು ಬೇಕಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ (VRS) ಪಡೆಯುವವರು 60 ವರ್ಷಕ್ಕಿಂತ ಮೊದಲು ಈ ಯೋಜನೆಯ ಲಾಭ ಪಡೆಯಬಹುದು. ವಿಆರ್ಎಸ್ ಪಡೆಯುವವರು 55 ವರ್ಷದಿಂದ ಮತ್ತು ರಕ್ಷಣಾ ಕ್ಷೇತ್ರದ ನೌಕರರು 50 ವರ್ಷದಿಂದ ಈ ಯೋಜನೆಯನ್ನು ಬಳಸಿಕೊಳ್ಳಬಹುದು. ಪತಿ ಮತ್ತು ಪತ್ನಿ ಜಂಟಿ ಹೂಡಿಕೆಯ ಮೂಲಕ ಈ ಯೋಜನೆಯಿಂದ ಆದಾಯ ಗಳಿಸುವ ಅವಕಾಶವೂ ನೀಡಲಾಗಿದೆ.
ಯೋಜನೆಯ ಪ್ರಯೋಜನಗಳು:
ಈ ಯೋಜನೆಯಲ್ಲಿ 1000 ರೂಪಾಯಿಗಳಿಂದ ಹೂಡಿಕೆ ಮಾಡಬಹುದು. ಜಂಟಿ ಖಾತೆಯಲ್ಲಿ ಗರಿಷ್ಠ 30 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಆದರೆ, ಈ ಯೋಜನೆಯಲ್ಲಿ ಹೂಡಿಕೆ ಒಮ್ಮೆಲೇ ಮಾಡಬೇಕಾಗುತ್ತದೆ. ಬಡ್ಡಿಯನ್ನು ತ್ರೈಮಾಸಿಕವಾಗಿ ಜಮಾ ಮಾಡಲಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಸಹ ಈ ಯೋಜನೆ ಮೂಲಕ ಪಡೆಯಬಹುದು.
ನಿಯಮಗಳು:
ಯೋಜನೆಯ ಅವಧಿ 5 ವರ್ಷಗಳಾಗಿರುತ್ತದೆ. ಹೂಡಿಕೆದಾರರು ಬಯಸಿದರೆ ಇದನ್ನು 3 ವರ್ಷಗಳವರೆಗೆ ವಿಸ್ತರಿಸಬಹುದು. ಹೂಡಿಕೆದಾರರು ಯಾವಾಗ ಬೇಕಾದರೂ ಖಾತೆಯನ್ನು ಮುಚ್ಚುವ ಆಯ್ಕೆಯನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೇ, ಖಾತೆ ತೆರೆದು ಒಂದು ವರ್ಷದೊಳಗೆ ಹಿಂಪಡೆದರೆ, ಯಾವುದೇ ಬಡ್ಡಿ ಸಿಗುವುದಿಲ್ಲ. 1-2 ವರ್ಷಗಳೊಳಗೆ ಖಾತೆ ಮುಚ್ಚಿದರೆ, ಅಸಲು ಮೊತ್ತದ 1.5% ಕಡಿತಗೊಳಿಸಲಾಗುತ್ತದೆ. 5 ವರ್ಷದೊಳಗೆ ಮುಚ್ಚಿದರೆ, ಅಸಲು ಮೊತ್ತದ 1% ಕಡಿತಗೊಳಿಸಲಾಗುತ್ತದೆ.
ತಿಂಗಳಿಗೆ 45,100 ರೂಪಾಯಿ ಆದಾಯ:
ಒಬ್ಬ ವ್ಯಕ್ತಿಯು ಗರಿಷ್ಠ 30 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಆದರೆ, ತ್ರೈಮಾಸಿಕವಾಗಿ 45,100 ರೂಪಾಯಿ ಪಡೆಯಲು ನೀವು ಒಟ್ಟು 22 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಸಾಕು. ಅಂದರೆ, ನೀವು ನಿಮ್ಮ ಸಂಗಾತಿಯೊಂದಿಗೆ ಜಂಟಿ ಹೂಡಿಕೆ ಮಾಡುವುದಾದರೆ, ಇಬ್ಬರೂ ತಲಾ 11 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. ಅಂದರೆ ತ್ರೈಮಾಸಿಕವಾಗಿ 45,100 ರೂಪಾಯಿ ಎಂದರೆ, ತಿಂಗಳಿಗೆ 15,000 ರೂಪಾಯಿಯಂತೆ ಸಿಗಲಿದೆ. ಅವಧಿ ಪೂರ್ಣಗೊಂಡ ನಂತರ ನಿಮ್ಮ ಹೂಡಿಕೆ ಮೊತ್ತವು ನಿಮಗೆ ಸಿಗಲಿದೆ.
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

New Income Tax: ತೆರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ: ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

LPG cylinder shortage: ಬೆಂಗಳೂರಲ್ಲಿ 1,700ರೂ. ಸಿಲಿಂಡರ್ 5,000 ರೂ.ಗೆ ಮಾರಾಟ..ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ

India Post: ಅಂಚೆ ಕಚೇರಿಯಲ್ಲಿ ಇಂದಿನಿಂದ ಹೊಸ ಸೇವೆ ಆರಂಭ; ಇನ್ಮೇಲೆ ಮತ್ತಷ್ಟು ಸುಲಭ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Tumkur Railway: ತುಮಕೂರಿನ ಈ ಭಾಗದಲ್ಲಿ ಲೆವೆಲ್ ಕ್ರಾಸಿಂಗ್ ಕಾಮಗಾರಿ; ಸುಮಾರು 25 ರೈಲುಗಳ ಸಂಚಾರ ವ್ಯತ್ಯಯ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Gold-Silver Rates Today Live Updates: ಚಿನ್ನ-ಬೆಳ್ಳಿ ದರ ದಿಢೀರ್ ಏರಿಕೆ; ಸಂಪೂರ್ಣ ಮಾಹಿತಿ ಇಲ್ಲಿದೆ



Click it and Unblock the Notifications