ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಅದಕ್ಕೆ ಇನ್ನು ಕೆಲವೇ ವಾರಗಳು ಇದೆ. ಈ ನಡುವೆ 2022 ರ ಬಜೆಟ್ನಲ್ಲಿ ಏನೆಲ್ಲಾ ಘೋಷಣೆ ಆಗಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಹಲವಾರು ವಲಯಗಳು ತಮ್ಮದೇ ಆದ ನಿರೀಕ್ಷೆಯನ್ನು ಹೊಂದಿದೆ.
ಈ ಕೊರೊನಾ ವೈರಸ್ ಮೂರನೇ ಅಲೆಯ ಆತಂಕದ ನಡುವೆ ಮುಂದಿನ ತಿಂಗಳು ಬಜೆಟ್ ಅಧಿವೇಶನ ನಡೆಯಲಿದೆ. ಈ ನಡುವೆ ಕೋವಿಡ್ ಸೋಂಕಿನಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಜನ ಸಂಪರ್ಕವುಳ್ಳ ಉದ್ಯಮಕ್ಕೆ ತೆರಿಗೆ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆಸಲು ಬ್ಯಾಂಕುಗಳು ಸರ್ಕಾರವನ್ನು ವಿನಂತಿಸಿವೆ. ಆತಿಥ್ಯ, ವಾಯುಯಾನ, ಪ್ರಯಾಣ ಮತ್ತು ಪ್ರವಾಸೋದ್ಯಮ ಇತರ ಕ್ಷೇತ್ರಗಳಲ್ಲಿ ಕೊರೊನಾ ವೈರಸ್ನ ಹರಡುವಿಕೆಯಿಂದ ಹೆಚ್ಚು ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿರುವ ಬ್ಯಾಂಕ್ಗಳು, ಯಾವುದೇ ಪರಿಹಾರವು ಅತ್ಯಂತ ಸ್ವಾಗತಾರ್ಹ ಎಂದಿದೆ.
ಹಿರಿಯ ಬ್ಯಾಂಕ್ ಸಿಬ್ಬಂದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಜನ ಸಂಪರ್ಕವುಳ್ಳ ಉದ್ಯಮಕ್ಕೆ ವಿಶೇಷವಾಗಿ ಹಾಸ್ಪಿಟಾಲಿಟಿ ವಲಯಕ್ಕೆ ಕೆಲವು ತೆರಿಗೆ ಪರಿಹಾರಗಳನ್ನು ನೀಡುವ ಬಗ್ಗೆ ಪರಿಗಣಿಸಲು ನಾವು ಸರ್ಕಾರವನ್ನು ಕೇಳಿದ್ದೇವೆ. ಈ ಕೆಲವು ಕ್ಷೇತ್ರಗಳಿಗೆ ಯಾವುದೇ ಬೆಂಬಲವನ್ನು ನೀಡದಿದ್ದರೆ, ಅವು ಎನ್ಪಿಎಗಳಾಗಿ ಪರಿವರ್ತನೆ ಆಗಲಿದೆ," ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಕೇಂದ್ರ ಬಜೆಟ್ಗೆ ಮುಂಚಿತವಾಗಿ ಭಾರತೀಯ ಬ್ಯಾಂಕ್ಗಳ ಸಂಘವು ಸರ್ಕಾರಕ್ಕೆ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದೆ ಎಂದು ಈ ಹಿರಿಯ ಸಿಬ್ಬಂದಿ ತಿಳಿಸಿದ್ದಾರೆ. ಇನ್ನು ಈ ಬ್ಯಾಂಕ್ ಬೇಡಿಕೆಗಳ ಅಥವಾ ಮನವಿಯ ಪಟ್ಟಿಯಲ್ಲಿ ಗೃಹ ಸಾಲದ ಮೇಲಿನ ಹೆಚ್ಚಿನ ತೆರಿಗೆ ವಿನಾಯಿತಿ ಮಾಡುವ ವಿಚಾರವೂ ಕೂಡಾ ಉಲ್ಲೇಖಿತವಾಗಿದೆ.
ಗೃಹ ಸಾಲದ ಮೇಲೆ ತೆರಿಗೆ ರಿಯಾಯಿಯಿ ಹೆಚ್ಚಿಸಿ
"ಇಂದು ಗೃಹ ಸಾಲದ ಮೇಲಿನ ತೆರಿಗೆ ರಿಯಾಯತಿ ತುಂಬಾ ಕಡಿಮೆಯಾಗಿದೆ. ಮನೆಗಳ ಬೆಲೆಗಳು ವರ್ಷಗಳಿಂದ ಹೆಚ್ಚುತ್ತಿವೆ. ಆದರೆ ತೆರಿಗೆ ರಿಯಾಯತಿ ತುಂಬಾ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ನಾವು ಪುನರ್ ವಿಮರ್ಶೆ ಮಾಡಬೇಕಾದ ಅಗತ್ಯವಿದೆ. ಗೃಹ ಸಾಲ ಪಡೆಯುವ ಜನರಿಗೆ ಇದು ಸಹಾಯಕವಾಗಲಿದೆ," ಎಂದು ತನ್ನ ಹೆಸರು ಬಹಿರಂಗಪಡಿಸಲು ಬಯಸದ ಬ್ಯಾಂಕಿಂಗ್ ಕಾರ್ಯನಿರ್ವಾಹಕರೊಬ್ಬರು ಹೇಳಿದ್ದಾರೆ.
ಫಿಕ್ಸಿಡ್ ಡೆಪಾಸಿಟ್ಗಳನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ತೆರಿಗೆ ವಿನಾಯಿತಿಗಳಿಗೆ ಅರ್ಹರಾಗಲು ಫಿಕ್ಸೆಡ್ ಡೆಪಾಸಿಟ್ಗಳಿಗೆ (ಎಫ್ಡಿ) ಲಾಕ್-ಇನ್ ಅವಧಿಯನ್ನು ಐದು ವರ್ಷದಿಂದ ಮೂರು ವರ್ಷಗಳವರೆಗೆ ಇಳಿಸುವ ವಿಷಯವನ್ನು ಭಾರತೀಯ ಬ್ಯಾಂಕ್ಗಳ ಸಂಘವು ಮತ್ತೊಮ್ಮೆ ಪ್ರಸ್ತಾಪ ಮಾಡಿದೆ. "ನಾವು ಈ 3 ವರ್ಷಗಳ ಎಫ್ಡಿ ಸಮಸ್ಯೆಯನ್ನು ಬಹಳ ಸಮಯದಿಂದ ಕೇಳುತ್ತಿದ್ದೇವೆ. ಈ ವರ್ಷ ಅದನ್ನು ಮತ್ತೆ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಇದನ್ನು ಸರ್ಕಾರ ಪರಿಗಣಿಸುತ್ತದೆಯೇ ಎಂದು ನಾವು ಕಾದು ನೋಡೋಣ," ಎಂದು ತಿಳಿಸಿದ್ದಾರೆ.
ಹೆಚ್ಚುವರಿಯಾಗಿ, ಹಣಕಾಸು ಸೇರ್ಪಡೆ ಮತ್ತು ಡಿಜಿಟಲ್ ಬ್ಯಾಂಕಿಂಗ್ನ ಉತ್ತೇಜನದಂತಹ 'ಸಾರ್ವಜನಿಕ ಒಳಿತಿನ' ಚಟುವಟಿಕೆಗಳಿಗೆ ಖರ್ಚು ಮಾಡಲು ಬ್ಯಾಂಕುಗಳು ತೆರಿಗೆ ಪ್ರೋತ್ಸಾಹವನ್ನು ಕೋರಿವೆ. ವಿದೇಶಿ ಮತ್ತು ದೇಶೀಯ ಬ್ಯಾಂಕ್ಗಳಿಗೆ ತೆರಿಗೆಯಲ್ಲಿ ಸಮಾನತೆಯ ಸಮಸ್ಯೆಯನ್ನು ಬ್ಯಾಂಕ್ಗಳ ಸಂಘವು ಪ್ರಸ್ತಾಪಿಸಿತು. ವಿದೇಶಿ ಬ್ಯಾಂಕುಗಳು ಹೆಚ್ಚಾಗಿ ಭಾರತದಲ್ಲಿನ ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತವೆ ಮತ್ತು ಕಾರ್ಪೊರೇಟ್ ತೆರಿಗೆ ದರವನ್ನು 40 ಪ್ರತಿಶತ ಮತ್ತು ಹೆಚ್ಚುವ ಶುಲ್ಕಗಳು ಸೆಸ್ ವಿಧಿಸಲಾಗುತ್ತದೆ.
ಮತ್ತೊಂದೆಡೆ, ದೇಶೀಯ ಬ್ಯಾಂಕುಗಳು 22 ಪ್ರತಿಶತ ಕಾರ್ಪೊರೇಟ್ ತೆರಿಗೆ ಮತ್ತು ಹೆಚ್ಚುವರಿ ಶುಲ್ಕ ಮತ್ತು ಸೆಸ್ ಅನ್ನು ವಿಧಿಸುತ್ತವೆ. "ಈ ಹಿಂದೆಯೂ ಹಣಕಾಸು ಸಚಿವಾಲಯಕ್ಕೆ ಇದನ್ನು ನಾವು ಪ್ರಸ್ತಾಪ ಮಾಡಿದ್ದೇವೆ. ಆಶಾದಾಯಕವಾಗಿ, ಈ ಬಜೆಟ್ ಸಮಸ್ಯೆಯನ್ನು ಪರಿಹರಿಸಬಹುದು," ಎಂದು ಹಿರಿಯ ಬ್ಯಾಂಕರ್ ಒಬ್ಬರು ಹೇಳಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2022 ಅನ್ನು ಮಂಡಿಸಲಿದ್ದಾರೆ. ಹಣಕಾಸು ಸಚಿವೆ ಈಗಾಗಲೇ ಕಾರ್ಪೊರೇಟ್ ಮತ್ತು ಹಣಕಾಸು ವಲಯಗಳ ಮುಖ್ಯಸ್ಥರೊಂದಿಗೆ ಬಜೆಟ್ ಪೂರ್ವ ಸಭೆಗಳನ್ನು ನಡೆಸಿದ್ದಾರೆ. (ಒನ್ಇಂಡಿಯಾ ಸುದ್ದಿ)
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications