ನೌಕರರ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ತಂದ ಯೋಜನೆಯೇ ಇಪಿಎಫ್ಒ (EPFO). ಇಪಿಎಫ್ಒನ ಮುಖ್ಯ ಉದ್ದೇಶವೆಂದರೆ ಸಂಘಟಿತ ವಲಯದಲ್ಲಿ ಕೆಲಸ ಮಾಡುವ ನೌಕರರಿಗೆ ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮೆ ಸೌಲಭ್ಯಗಳನ್ನು ಒದಗಿಸುವುದಾಗಿದೆ. ವಿಶ್ವದ ಅತಿದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಇದೂ ಒಂದು. ಆದರೆ ಇದೀಗ ಪಿಎಫ್ ಖಾತೆ (PF Account) ಬಗ್ಗೆ ಭಾರೀ ದೊಡ್ಡ ಪ್ರಶ್ನೆ ಎದ್ದಿದೆ. ಅಂದರೆ ಕೆಲಸ ತೊರೆದ ನಂತರವೂ ಪಿಎಫ್ ಖಾತೆಗೆ ಬಡ್ಡಿ ಜಮೆಯಾಗುತ್ತದೆಯೇ? ಇಲ್ಲವೇ? ಎಂಬ ಪ್ರಶ್ನೆ ಎದ್ದಿದೆ.

ಹೌದು, ಕೆಲಸ ತೊರೆದ ನಂತರ ಮೂರು ವರ್ಷಗಳ ನಂತರ ಪಿಎಫ್ ಖಾತೆಗೆ ಬಡ್ಡಿ ಜಮೆಯಾಗುವುದು ನಿಲ್ಲುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದೆ. ಆದರೆ, ಇದು ತಪ್ಪು ಎಂಬುದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಸ್ಪಷ್ಟನೆ ನೀಡಿದೆ. ನಿಮ್ಮ ಪಿಎಫ್ ಖಾತೆಯು ಯುನಿವರ್ಸಲ್ ಅಕೌಂಟ್ ನಂಬರ್ (UAN) ಗೆ ಲಿಂಕ್ ಆಗಿದ್ದರೆ, ಉದ್ಯೋಗ ತೊರೆದ ನಂತರವೂ ಬಡ್ಡಿಯನ್ನು ಗಳಿಸಬಹುದು ಎಂದು ಹೇಳಲಾಗಿದೆ.
ಪಿಎಫ್ ಖಾತೆಗೆ ಬಡ್ಡಿ ಸಿಗುತ್ತಾ?
ನೀವು ಜಸ್ಟ್ ಮೂರು ವರ್ಷಗಳ ಹಿಂದೆ ಅಥವಾ ಒಂದು ದಶಕದ ಮುನ್ನವೇ ಕೆಲಸ ತೊರೆದಿದ್ದರೂ ಸಹ, ಪಿಎಫ್ ಖಾತೆಯು 58 ವರ್ಷ ವಯಸ್ಸಾಗುವವರೆಗೆ ಅಥವಾ ಸಂಪೂರ್ಣ ನಿಧಿಯನ್ನು ಹಿಂಪಡೆಯುವವರೆಗೆ ವಾರ್ಷಿಕವಾಗಿ ಬಡ್ಡಿ ಜಮೆಯಾಗುತ್ತಿರುತ್ತದೆ ಎಂದು ಹೇಳಲಾಗಿದೆ. EPFO ಮಾಹಿತಿಯಂತೆ, ಉದ್ಯೋಗಿ ಕೆಲಸ ಬಿಟ್ಟ 36 ತಿಂಗಳವರೆಗೆ ಖಾತೆಯನ್ನು 'ಸಕ್ರಿಯ' ಎಂದು, ನಂತರ 'ನಿಷ್ಕ್ರಿಯ' ಎಂದು ಡಿವೈಡ್ ಮಾಡಲಾಗುತ್ತದೆ.
ಖಾತೆಯು 'ನಿಷ್ಕ್ರಿಯ' ಸ್ಥಿತಿಯಲ್ಲಿದ್ದರೂ ಬಡ್ಡಿ ಜಮೆಯಾಗುವುದು ನಿಲ್ಲುವುದಿಲ್ಲ ಎನ್ನಲಾಗಿದೆ. ನಿಷ್ಕ್ರಿಯ ಪಿಎಫ್ ಖಾತೆಗಳಿಗೂ ಸಹ EPFO ಘೋಷಿಸುವ ದರದಲ್ಲಿ ಬಡ್ಡಿ ನೀಡಲಾಗುತ್ತದೆ. 2024-25ರ ಆರ್ಥಿಕ ವರ್ಷಕ್ಕೆ, ಇಪಿಎಫ್ಒ ಬಡ್ಡಿ ದರವು ಶೇಕಡಾ 8.25 ರಷ್ಟಿದ್ದು, ನಿಮ್ಮ ಉಳಿತಾಯಕ್ಕೆ ಹೆಚ್ಚಿನ ಆದಾಯ ಸಿಗುತ್ತದೆ.
ತೆರಿಗೆ ಕಡ್ಡಾಯ
ಆದರೆ, ಉದ್ಯೋಗಿಗಳು ಇಲ್ಲಿ ಒಂದು ಪ್ರಮುಖ ತೆರಿಗೆ ಅಂಶವನ್ನು ಗಮನಿಸಬೇಕು. ಕೆಲಸ ತೊರೆದ ನಂತರ ಪಿಎಫ್ ಬಾಕಿಯ ಮೇಲೆ ಗಳಿಸಿದ ಬಡ್ಡಿಯನ್ನು 'ಇತರ ಮೂಲಗಳಿಂದ ಆದಾಯ' ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ತೆರಿಗೆ ನಿಯಮಕ್ಕೂ ಒಳಪಡುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಗಳಿಸಿದ ಬಡ್ಡಿಯು ₹50,000 ಮೀರಿದರೆ ಮಾತ್ರ ಮೂಲದಲ್ಲಿ ತೆರಿಗೆ ಕಡಿತ (TDS) ಅನ್ವಯವಾಗುತ್ತದೆ.
EPFO ತನ್ನ ಸದಸ್ಯರಿಗೆ ಎಲ್ಲಾ ಹಳೆಯ ಪಿಎಫ್ ಖಾತೆಗಳನ್ನು ಪ್ರಸ್ತುತ UAN ಗೆ 'ಒಂದು ಸದಸ್ಯ, ಒಂದು ಪಿಎಫ್ ಖಾತೆ' ಸೌಲಭ್ಯದ ಮೂಲಕ ಲಿಂಕ್ ಮಾಡಲು ಸಲಹೆ ನೀಡುತ್ತದೆ. ಇದರಿಂದ ಸುಲಭವಾಗಿ ಟ್ರ್ಯಾಕ್ ಮಾಡಲು, ಬಡ್ಡಿ ನಿರಂತರವಾಗಿ ಜಮೆಯಾಗುವುದನ್ನು ತಿಳಿಯಲು ಮತ್ತು ಹಣ ರಿಫಂಡ್ ಬಗ್ಗೆ ತಿಳಿಯಲು ಸುಲಭವಾಗುತ್ತದೆ. ಉತ್ತಮ ಬಡ್ಡಿಯೊಂದಿಗೆ, ನಿಯಮಿತ ಉಳಿತಾಯ ಖಾತೆಯಾಗಿ ಪಿಎಫ್ ಇಂದು ಭಾರೀ ಜನಪ್ರಿಯತೆ ಹೊಂದಿದೆ.
More From GoodReturns

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ



Click it and Unblock the Notifications