Karnataka-Ration Card: ಬಿಪಿಎಲ್‌ ಬಳಕೆದಾರರಿಗೆ ಗುಡ್‌ ನ್ಯೂಸ್!‌ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

ದೇಶದಲ್ಲಿ ಯಾವುದೇ ಯೋಜನೆ, ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕೆಂದರೂ ರೇಷನ್‌ ಕಾರ್ಡ್‌ (Ration Card) ಇರಲೇಬೇಕು. ಅಲ್ಲದೇ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಬಡವರ ಅನುಕೂಲಕ್ಕಾಗಿ ಜಾರಿಗೆ ತಂದ ಯೋಜನೆಗಳಲ್ಲಿ ಅಕ್ಕಿ ಯೋಜನೆ ಕೂಡಾ ಒಂದು. ಕೇಂದ್ರ ಸರ್ಕಾರದ ಒನ್‌ ನೇಷನ್‌, ಒನ್‌ ರೇಷನ್‌ ಕಾರ್ಡ್‌ ಎಂಬ ಯೋಜನೆಯಡಿ ಜಾರಿಗೆ ಬಂದಿರುವ ಈ ರೇಷನ್‌ ಕಾರ್ಡ್‌ ಆಹಾರ ಧಾನ್ಯಗಳನ್ನು ಉಚಿತವಾಗಿ ಸರ್ಕಾರದಿಂದ ಪಡೆಯಬಹುದು. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ರೇಷನ್‌ ಕಾರ್ಡ್‌ ಮೂಲಕ ಬಡತನ ರೇಖೆಯಲ್ಲಿರುವ ಜನರು ಸಬ್ಸಿಡಿ ದರದಲ್ಲಿ (Subsidy) ಆಹಾರ ಧಾನ್ಯಗಳನ್ನುಬ ಪಡೆಯಬಹುದು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧೀನದಲ್ಲಿರುವ ಈ ಪಡಿತರ ಚೀಟಿ, ಹಲವು ಸೌಲಭ್ಯಗಳನ್ನು ನೀಡುತ್ತದೆ.

ಬಿಪಿಎಲ್‌ ಬಳಕೆದಾರರಿಗೆ ಗುಡ್‌ ನ್ಯೂಸ್!‌ ರಾಜ್ಯ ಸರ್ಕಾರದಿಂದ ನಿರ್ಧಾರ

ಇಷ್ಟೆಲ್ಲಾ ಸೌಲಭ್ಯಗಳನ್ನು ನೀಡುವ ರೇಷನ್‌ ಕಾರ್ಡ್‌ನಲ್ಲಿ ಇದೀಗ ಮಹತ್ವದ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಕರ್ನಾಟಕ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಇದೀಗ ಹೊಸ ಮೊಬೈಲ್‌ ಅಪ್ಲಿಕೇಶನ್‌ ಲಾಂಚ್‌ ಮಾಡಲು ಸಜ್ಜಾಗಿದೆ. ರಾಜ್ಯದ ಲಕ್ಷಾಂತರ ಕುಟುಂಬಗಳು ಪ್ರತಿದಿನ ಅಕ್ಕಿ, ಗೋಧಿ, ಸಕ್ಕರೆ ಮುಂತಾದ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯುತ್ತಿದೆ. ಅದರಲ್ಲೂ ಬಿಪಿಎಲ್‌ ಮತ್ತು ಅಂತ್ಯೋದಯ ಕಾರ್ಡ್‌ ಕುಟುಂಬಗಳಿಗೆ ಈ ರೇಷನ್‌ ಕಾರ್ಡ್‌ ಯೋಜನೆಗಳು ಬಹಳ ಪ್ರಯೋಜನಕಾರಿಯಾಗಿದೆ.

ಕರ್ನಾಟಕ ಸರ್ಕಾರದಿಂದ ಮಹತ್ವದ ನಿರ್ಧಾರ
ಕರ್ನಾಟಕ ಸರ್ಕಾರ ಇದೀಗ ರೇಷನ್‌ ಕಾರ್ಡ್‌ ಸಂಬಂಧಿಸಿ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೊಸ ಮೊಬೈಲ್‌ ಅಪ್ಲಿಕೇಶನ್‌ ಲಾಂಚ್‌ ಮಾಡಲಿದೆ ಎಂದು ವರದಿಯಾಗಿದೆ. ಒಂದು ವೇಳೆ ಈ ಆಪ್‌ ಲಾಂಚ್‌ ಆದ್ರೆ, ನ್ಯಾಯಬೆಲೆ ಅಂಗಡಿಗಳ ಆಹಾರ ವಿತರಣೆಗಳಲ್ಲಿ ಹೆಚ್ಚು ಪಾರದರ್ಶಕತೆ, ಅಕ್ರಮ ನಿಯಂತ್ರಣ, ಗ್ರಾಹಕರಿಗೆ ಹಲವು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

ಹೊಸ ಆಪ್‌ ಬರಲು ಕಾರಣವೇನು?
ಸದ್ಯ ಕರ್ನಾಟಕದಲ್ಲಿ 20 ಸಾವಿರಕ್ಕೂ ಅಧಿಕ ನ್ಯಾಯಬೆಲೆ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿದೆ. ಆದರೆ ದಿನೇ ದಿನೇ ನ್ಯಾಯಬೆಲೆ ಅಂಗಡಿಗಳ ಮೇಲಿನ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

  • ಅಕ್ರಮವಾಗಿ ಮಾರಾಟ
  • ಗೋದಾಮಿನ ಸ್ಟಾಕ್‌ ಅನ್ನು ತಪ್ಪಾಗಿ ರೆಕಾರ್ಡ್‌ ಮಾಡುವುದು
  • ಫಲಾನುಭವಿಗಳ ಹೆಸರಿನಲ್ಲಾಗುತ್ತಿರುವ ವಂಚನೆ
  • ಕಡಿಮೆ ತೂಕದಲ್ಲಿ ಅಕ್ಕಿ ವಿತರಣೆ ಮಾಡುವ ವಂಚನೆ

ಈ ಎಲ್ಲಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಆಹಾರ ಇಲಾಖೆ ಸಂಪೂರ್ಣ ಡಿಜಿಟಲೀಕರಣ ಮಾಡಲು ಮುಂದಾಗಿದೆ ಎನ್ನಲಾಗಿದೆ. ಒಂದು ವೇಳೆ ಈ ಆಪ್‌ ಲಾಂಚ್‌ ಆದ್ರೆ, ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುವ ಎಲ್ಲಾ ವ್ಯವಹಾರಗಳು ಸರ್ಕಾರದ ಸರ್ವರ್‌ನಲ್ಲಿ ದಾಖಲಾಗುತ್ತದೆ. ಸಾರ್ವಜನಿಕರೂ ಈ ಮೂಲಕ ಸಂಪೂರ್ಣ ಮಾಹಿತಿ ಪಡೆಯಬಹುದು.

ಈ ಆಪ್‌ನ ಪ್ರಮುಖ ಕಾರ್ಯ:
ಆಧಾರ್‌ ಆಧಾರಿತವಾಗಿ ಪರಿಶೀಲನೆ ನಡೆಸಲಾಗುತ್ತದೆ. ಗ್ರಾಹಕರು ರೇಷನ್‌ ಪಡೆಯಲು ಬಂದಾಗ, ಬಯೋಮೆಟ್ರಿಕ್‌, ಒಟಿಪಿ, ಆಧಾರ್‌ ನಂಬರ್‌ ಸ್ಕ್ಯಾನಿಂಗ್‌ ಮೂಲಕ ಮಾಹಿತಿಯನ್ನು ಪರಿಶೀಲನೆ ನಡೆಸಲಾಗುತ್ತದೆ. ಇದರಿಂದ ಯಾವುದೇ ಗ್ರಾಹಕರು ನಕಲಿ ಕಾರ್ಡ್‌ಗಳನ್ನು ತೋರಿಸಿ ಅಕ್ಕಿ ಪಡೆಯುವುದನ್ನು ತಡೆಯಲಾಗುತ್ತದೆ.

ಗ್ರಾಹಕರಿಗೆ ಪ್ರಯೋಜನಗಳು:
ತಮ್ಮ ಕಾರ್ಡ್‌ನಲ್ಲಿ ಸಿಗಬೇಕಾದ ಎಲ್ಲಾ ಸೌಲಭ್ಯಗಳ ಮಾಹಿತಿಯನ್ನು ಆಪ್‌ ಮೂಲಕ ಪಡೆಯಬಹುದು. ಈ ತಿಂಗಳಲ್ಲಿ ಎಷ್ಟು ಅಕ್ಕಿ ಸಿಗಬೇಕು, ಎಷ್ಟು ಪಡೆದಿದ್ದಾರೆ?, ಎಷ್ಟು ಬಾಕಿ ಇದೆ?, ಎಂಬ ಮಾಹಿತಿಯನ್ನು ಪಡೆಯಬಹುದು. ಯಾವುದೇ ದೂರುಗಳನ್ನು ಸಹ ಸಲ್ಲಿಸಬಹುದು. ಅಕ್ರಮಕ್ಕೆ ಬ್ರೇಕ್‌ ನೀಡಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+