ಸರ್ಕಾರಿ ಸ್ವಾಮ್ಯದ, ಖಾಸಗಿ ಸ್ವಾಮ್ಯದ ಬ್ಯಾಂಕುಗಳು (Banks) ಗ್ರಾಹಕರ ಅನುಕೂಲಕ್ಕಾಗಿ ಸದಾ ಏನಾದರೊಂದು ನಿರ್ಧಾರಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಖಾಸಗಿ ವಲಯದ ಪ್ರಮುಖ ಬ್ಯಾಂಕ್ಗಳಲ್ಲಿ ಒಂದಾದ ಹೆಚ್ಡಿಎಫ್ಸಿ ಬ್ಯಾಂಕ್ ಇದೀಗ ಮಹತ್ವದ ಅಪ್ಡೇಟ್ ನೀಡಿದೆ. ಏಪ್ರಿಲ್ 1, 2026 ರಿಂದ ಯುಪಿಐ ಮೂಲಕ ಎಟಿಎಂ ಅಥವಾ ಸಿಆರ್ಎಮ್ (Cash Recycler Machine)ಗಳಲ್ಲಿ ಹಣ ವಿಥ್ ಡ್ರಾ ಮಾಡುವುದನ್ನು, ಮಾಸಿಕ ಉಚಿತ ಎಟಿಎಂ ವ್ಯವಹಾರ ಮಿತಿಯೊಳಗೆ ಸೇರಿಸಲಾಗುತ್ತದೆ ಎಂದು ಬ್ಯಾಂಕ್ ನಿರ್ಧಾರ ಕೈಗೊಂಡಿದೆ.

ಇನ್ಮೇಲೆ ಎಲ್ಲನೂ ದುಬಾರಿ!
ಈ ಹಿಂದಿನ ವಹಿವಾಟುಗಳಲ್ಲಿ ಯುಪಿಐ ಆಧಾರಿತ ಕಾರ್ಡ್ಲೆಸ್ ಕ್ಯಾಶ್ ವಿಥ್ ಡ್ರಾ ಮಾಡುವುದನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತಿತ್ತು. ಅಲ್ಲದೇ ಉಚಿತವಾಗಿತ್ತು. ಆದ್ರೆ ಇದೀಗ ಸಾಮಾನ್ಯ ಎಟಿಎಂ ವಹಿವಾಟಿನಂತೆಯೇ ಲೆಕ್ಕ ಹಾಕಲಾಗುತ್ತದೆ ಎನ್ನಲಾಗಿದೆ. ಅಂದರೆ ನಿಮ್ಮ ಖಾತೆಯ ಮಾಸಿಕ ಉಚಿತ ಎಟಿಎಂ ವ್ಯವಹಾರಗಳ ಸಂಖ್ಯೆ ಮೀರಿದರೆ, ಮತ್ತೆ ಶುಲ್ಕ ವಿಧಿಸಲಾಗುತ್ತದೆ.
ಹೊಸ ನಿಯಮ ಏನು?
ಇನ್ನು ಈ ಹೊಸ ನಿಯಮ ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. ಇನ್ಮೇಲೆ ಎಟಿಎಂನಿಂದ ಯುಪಿಐ ಮೂಲಕ ಕ್ಯಾಶ್ ವಿಥ್ಡ್ರಾ ಮಾಡುವುದಾದ್ರೆ, ಮಾಸಿಕ ಉಚಿತ ಎಟಿಎಂ ವ್ಯವಹಾರ ಮಿತಿಯಲ್ಲಿ ಸೇರ್ಪಡೆಯಾಗುತ್ತದೆ. ಒಂದು ವೇಳೆ ಈ ಮಿತಿ ಮೀರಿದರೆ ಪ್ರತೀ ವಹಿವಾಟಿಗೆ 23 ರೂ. ಅನ್ವಯವಾಗುತ್ತದೆ. ಇದು ಹೆಚ್ಡಿಎಫ್ಸಿ ಬ್ಯಾಂಕ್ ಎಟಿಎಂಗಳಲ್ಲಿ ಮಾತ್ರ ಅನ್ವಯವಾಗುತ್ತದೆ ಎಂದು ವರದಿಯಾಗಿದೆ. ಇನ್ನು ಯುಪಿಐ ಆಪ್ಗಳಾದ ಫೋನ್ಪೇ, ಗೂಗಲ್ ಪೇ, ಪೇಟಿಯಂ, ಭೀಮ್ ಹೀಗೆ ಮುಂತಾದ ಆಪ್ಗಳ ಮೂಲಕ ಈ ಸೌಲಭ್ಯ ನೀಡಲಾಗುತ್ತದೆ.
ಏಕೆ ಈ ನಿರ್ಧಾರ?
ಹೆಚ್ಡಿಎಫ್ಸಿ ಬ್ಯಾಂಕ್ ಕೈಗೊಂಡಿರುವ ಪ್ರಕಾರ, ಬ್ಯಾಂಕ್ ವಹಿವಾಟುಗಳನ್ನು ಪಾರದರ್ಶಕವಾಗಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಮಾಡಲಾಗಿದೆ. ಯುಪಿಐ ಕ್ಯಾಶ್ ವಿಥ್ಡ್ರಾ ಪ್ರಕ್ರಿಯೆ ಕಾರ್ಡ್ ಸಂಬಂಧಿತ ವಂಚನೆಗಳನ್ನು ತಡೆಯುವ, ಸುರಕ್ಷಿತ ಮತ್ತು ಅನುಕೂಲಕರ ವಿಧಾನವಾಗಿದೆ. ಇತರ ಎಟಿಎಂ ವಹಿವಾಟಿನಂತೆಯೇ ಇದು ಕೆಲಸ ಮಾಡುತ್ತದೆ.
ಪ್ರಸ್ತುತ, ಉಳಿತಾಯ ಮತ್ತು ಸಂಬಳ ಖಾತೆಗಳಿಗೆ, ಹೆಚ್ಡಿಎಫ್ಸಿ ಬ್ಯಾಂಕ್ ಎಟಿಎಂಗಳಲ್ಲಿ 5 ವಿಥ್ಡ್ರಾವ್ ವಹಿವಾಟುಗಳು ಉಚಿತವಾಗಿರುತ್ತದೆ. ಹೆಚ್ಡಿಎಫ್ಸಿ ಬ್ಯಾಂಕ್ ಅಲ್ಲದ ಎಟಿಎಂಗಳಲ್ಲಿ, ಉಚಿತ ಮಿತಿಯು ಟಾಪ್-6 ನಗರಗಳಿಗೆ 3 ವಹಿವಾಟುಗಳು ಮತ್ತು ಟಾಪ್ 6 ಅಲ್ಲದ ನಗರಗಳಲ್ಲಿ 5 ವಹಿವಾಟುಗಳು ಲಭ್ಯವಿದೆ.
ಯುಪಿಐ ಎಟಿಎಂ ವಿಥ್ಡ್ರಾವಲ್ಸ್ ಎಂದರೇನು?
UPI ATM Withdrawal ಎಂದರೆ ಡೆಬಿಟ್ ಕಾರ್ಡ್ ಬಳಸದೆ, ಕೇವಲ ಮೊಬೈಲ್ನ ಯುಪಿಐ ಆಪ್ ಮೂಲಕ ಎಟಿಎಂನಿಂದ ನಗದು ಹಣ ಪಡೆಯುವುದಾಗಿದೆ. ಇದನ್ನು ಅಧಿಕೃತವಾಗಿ Interoperable Cardless Cash Withdrawal (ICCW) ಅಥವಾ UPI-ATM ಎಂದು ಕರೆಯುತ್ತಾರೆ. NPCI ಪರಿಚಯಿಸಿದ ಈ ಸೌಲಭ್ಯ 2023 ರಿಂದ ಜಾರಿಯಲ್ಲಿದೆ. ಸದ್ಯ ಈ ಸೇವೆ ಯುಪಿಐ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಗ್ರಾಹಕರ ಅಗತ್ಯಗಳಿಗೂ ಬಹಳ ಸುಲಭವಾಗಲಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications