ನವದೆಹಲಿ, ಮಾರ್ಚ್ 21: 2023-24ರ ಹಣಕಾಸು ವರ್ಷ ಆದಾಯ ತೆರಿಗೆ ಉಳಿಸಲು ಕೆಲವೇ ತಿಂಗಳುಗಳು ಮಾತ್ರ ಉಳಿದಿವೆ. ಇನ್ನೊಂದೆಡೆ ಕಚೇರಿಗಳು ತೆರಿಗೆ ಉಳಿತಾಯಕ್ಕಾಗಿ ತಮ್ಮ ಉದ್ಯೋಗಿಗಳಿಗೆ ಹೂಡಿಕೆ ಮಾಡಿರುವ ಪುರಾವೆಗಳನ್ನು ಸಲ್ಲಿಸಲು ಕೇಳುತ್ತಿವೆ.
ಇನ್ನು ಅಧಿಕ ವೇತನ ಪಡೆಯುವ ಉದ್ಯೋಗಿಗಳು ಹಳೆಯ ತೆರಿಗೆ ಆಡಳಿತದ ಅಡಿಯಲ್ಲಿ ವ್ಯಕ್ತಿಗಳು ಬಳಸುವ ಅತ್ಯಂತ ಸಾಮಾನ್ಯವಾದ ತೆರಿಗೆ ಉಳಿಸುವ ಸೆಕ್ಷನ್ 80C ಯ ಕಡೆ ಮುಖ ಮಾಡುತ್ತಾರೆ. ಪ್ರಸ್ತುತ ಸೆಕ್ಷನ್ 80C ಅಡಿಯಲ್ಲಿ ಗರಿಷ್ಠ ವಿನಾಯಿತಿ ಮಿತಿಯು ರೂ. 1.5 ಲಕ್ಷ ಆಗಿದೆ ಆದರೆ ನೀವು ಈಗಾಗಲೇ ಈ ಮಿತಿಯ ಗಡಿ ದಾಟಿದ್ದರೆ ಮುಂದೇನು? ಭಯಪಡಬೇಡಿ, ಏಕೆಂದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆ ಉಳಿತಾಯ ಮಾಡಲು ಇತರ ಅನೇಕ ಮಾರ್ಗಗಳಿವೆ.

ಇಲ್ಲಿ ನೆನಪಿಡಬೇಕಾದ ಪ್ರಮುಖ ಅಂಶವೆಂದರೆ, 2023-24 ಹಣಕಾಸು ವರ್ಷಕ್ಕೆ ಆದಾಯ ತೆರಿಗೆಯನ್ನು ಉಳಿಸಲು ನೀವು ಮಾರ್ಚ್ 31, 2024 ರೊಳಗೆ ಹೂಡಿಕೆ ಮಾಡಬೇಕಾಗುತ್ತದೆ.
ರಾಷ್ಟ್ರೀಯ ಪಿಂಚಣಿ ಯೋಜನೆ (NPS)
ಕೊಡುಗೆಗಳು ಸೆಕ್ಷನ್ 80CCD ಅಡಿಯಲ್ಲಿ 50,000 ರೂಪಾಯಿಗಳ ತೆರಿಗೆ ಕಡಿತವನ್ನು ಪಡೆಯಲು ನೀವು ರಾಷ್ಟ್ರೀಯ ಪಿಂಚಣಿ ಯೋಜನೆ (NPS) ನಲ್ಲಿ ಹೂಡಿಕೆ ಮಾಡಬಹುದು. ಇದು ಸೆಕ್ಷನ್ 80 ಸಿ ಮಿತಿಗೆ ಹೆಚ್ಚುವರಿಯಾಗಿದೆ.
ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ:
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80D ನಿಮಗಾಗಿ ಅಥವಾ ನಿಮ್ಮ ಕುಟುಂಬದ ಸದಸ್ಯರಿಗೆ ಪಾವತಿಸಿದ ವೈದ್ಯಕೀಯ ವಿಮಾ ಪ್ರೀಮಿಯಂಗಳ ಮೇಲೆ 80D ಕಡಿತಗಳನ್ನು ಒದಗಿಸುತ್ತದೆ. ಈ ಮೂಲಕ ನೀವು ತೆರಿಗೆ ಉಳಿಸುವ ಪ್ರಯೋಜನವನ್ನು ಪಡೆಯಬಹುದು. ನಿಮಗಾಗಿ, ನಿಮ್ಮ ಸಂಗಾತಿಗೆ ಮತ್ತು ನಿಮ್ಮ ಮಕ್ಕಳಿಗೆ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಸುತ್ತಿದ್ದರೆ ನೀವು ರೂ 25,000 ವರೆಗೆ ತೆರಿಗೆ ಕಡಿತವನ್ನು ಪಡೆಯಬಹುದು. ಅದರಲ್ಲೂ ಒಂದು ವೇಳೆ ಪೋಷಕರು 60 ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದರೆ, ತೆರಿಗೆ ವಿನಾಯಿತಿ ಮೊತ್ತ ಏರಿಕೆಯಾಗುತ್ತದೆ. ನೀವು ಅವರ ಪ್ರೀಮಿಯಂಗೆ ಸಂಬಂಧಿಸಿದಂತೆ ಗರಿಷ್ಠ 50,000 ರೂ. ತನಕ ತೆರಿಗೆ ವಿನಾಯಿತಿ ಪಡೆಯಬಹುದುಯ
ಪ್ರಿವೆಂಟಿವ್ ಹೆಲ್ತ್ ಚೆಕಪ್:
ತಡೆಗಟ್ಟುವ ಆರೋಗ್ಯ ತಪಾಸಣೆಗಾಗಿ ಕೂಡಾ ನೀವು ತೆರಿಗೆ ಕಡಿತವನ್ನು ಪಡೆಯಬಹುದು, ಇದು ಸೆಕ್ಷನ್ 80D ಅಡಿಯಲ್ಲಿ ಅರ್ಹತೆ ಪಡೆಯುತ್ತದೆ. ಪ್ರತಿ ತೆರಿಗೆದಾರರು ಸೆಕ್ಷನ್ 80D ಯ ಒಟ್ಟಾರೆ ಮಿತಿಯೊಳಗೆ ಅಂತಹ ಚೆಕ್-ಅಪ್ಗಳಿಗಾಗಿ ಗರಿಷ್ಠ 5,000 ರೂ.ಗಳನ್ನು ಕ್ಲೈಮ್ ಮಾಡಬಹುದು
ಉಳಿತಾಯ ಖಾತೆಗಳ ಮೇಲಿನ ಬಡ್ಡಿ
ಸೆಕ್ಷನ್ 80TTA ಬ್ಯಾಂಕ್, ಅಂಚೆ ಕಛೇರಿ ಅಥವಾ ಸಹಕಾರಿ ಸೊಸೈಟಿಯಲ್ಲಿ ತೆರೆಯಲಾದ ಉಳಿತಾಯ ಖಾತೆಗಳಿಂದ ಗಳಿಸಿದ ಬಡ್ಡಿಯ ಮೇಲೆ ವ್ಯಕ್ತಿಗಳು ಮತ್ತುಹಿಂದೂ ಅವಿಭಕ್ತ ಕುಟುಂಬ (HUF) ಗಳಿಗೆ (ವಿಭಾಗ 80TTB ವ್ಯಾಪ್ತಿಗೆ ಒಳಪಡುವವರನ್ನು ಹೊರತುಪಡಿಸಿ) ಆರ್ಥಿಕ ವರ್ಷದಲ್ಲಿ ರೂ 10,000 ವರೆಗೆ ತೆರಿಗೆ ವಿನಾಯಿತಿ ಒದಗಿಸುತ್ತದೆ.
ಅನುಮೋದಿತ ನಿಧಿಗಳು ಮತ್ತು ಸಂಸ್ಥೆಗಳಿಗೆ ದೇಣಿಗೆಗಳು
- ಸೆಕ್ಷನ್ 80G ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ ನಿಧಿಗೆ ನೀವು ದೇಣಿಗೆ ನೀಡಿದ್ದರೆ, ದಾನ ಮಾಡಿದ ಮೊತ್ತದ ವಿನಾಯಿತಿಗೆ ನೀವು ಅರ್ಹರಾಗುತ್ತೀರಿ.
- ಕೇಂದ್ರ ಸರ್ಕಾರವು ಅನುಮೋದಿಸಿದ ದೇವಾಲಯಗಳು, ಮಸೀದಿಗಳು ಮತ್ತು ಚರ್ಚ್ಗಳ ನವೀಕರಣಕ್ಕಾಗಿ ನೀಡಿದ ದೇಣಿಗೆಗಳಿಗೂ ಈ ಕಡಿತವು ಅನ್ವಯಿಸುತ್ತದೆ.
- ಸೆಕ್ಷನ್ 80G ಅಡಿಯಲ್ಲಿ ವಿನಾಯಿತಿಯನ್ನು ಪಡೆಯಲು, ತೆರಿಗೆದಾರನು ತನ್ನ ದೇಣಿಗೆಯ ವಿವರಗಳನ್ನು 'ಶೆಡ್ಯೂಲ್ 80G' ನಲ್ಲಿ ITR ರೂಪದಲ್ಲಿ ನೀಡಬೇಕು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications