ಹೂಡಿಕೆದಾರರಿಗಾಗಿ ಪೋಸ್ಟ್ ಆಫೀಸ್ (Post Office) ಮೂಲಕ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಡಿ, ಎಫ್ಡಿ, ಸುಕನ್ಯಾ ಸಮೃದ್ಧಿ ಯೋಜನೆ ಕೂಡಾ ಒಂದು. ಇವುಗಳಲ್ಲಿ ಆರ್ಡಿ ಯೋಜನೆಯನ್ನು ಬೆಸ್ಟ್ ಎಂದು ಹಲವರು ಹೇಳುತ್ತಾರೆ. ಅಂಚೆ ಕಚೇರಿಯ ಈ ಆರ್ಡಿ (Recurring Deposit) ಯೋಜನೆಯಲ್ಲಿ ಕೇವಲ 100 ರೂಪಾಯಿಗಳಿಂದ ಹೂಡಿಕೆ (Invest) ಪ್ರಾರಂಭಿಸಬಹುದು. ಅಧಿಕ ಹಣವನ್ನೂ ಹಾಕಬೇಕಾಗಿಲ್ಲ. ಬದಲಿಗೆ ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಜಮಾ ಮಾಡುವ ಮೂಲಕ ಅಧಿಕ ಲಾಭ ಪಡೆಯಬಹುದು. ಇದೇ ಕಾರಣದಿಂದ ಪೋಸ್ಟ್ ಆಫೀಸ್ RD ಯೋಜನೆ ಸಾಮಾನ್ಯ ಜನರಿಗೆ ಉತ್ತಮ ಆಯ್ಕೆ ಎಂದು ಪರಿಗಣಿಸಲ್ಪಟ್ಟಿದೆ.

ಒಂದು ವೇಳೆ ನೀವು ಪ್ರತಿ ತಿಂಗಳು ಅಂಚೆ ಕಚೇರಿ ಆರ್ಡಿ ಯೋಜನೆ ಮೂಲಕ 50,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಬರೀ ಐದು ವರ್ಷಗಳಲ್ಲಿ ಹೆಚ್ಚಿನ ಹಣ ನಿಮ್ಮ ಖಾತೆ ಸೇರುತ್ತದೆ. 50 ಸಾವಿರದಂತೆ 5 ವರ್ಷಗಳಲ್ಲಿ ಒಟ್ಟು 30 ಲಕ್ಷ ರೂಪಾಯಿಗಳು ಜಮಾ ಆಗುತ್ತವೆ. ಇದರೊಂದಿಗೆ ದೊರೆಯುವ ಬಡ್ಡಿಯೊಂದಿಗೆ ನಿಮ್ಮ ಒಟ್ಟು ಮೊತ್ತವು 35 ಲಕ್ಷ ರೂಪಾಯಿಗಳವರೆಗೆ ನೀವು ಪಡೆಯಬಹುದು. ಅಂದರೆ ಐದು ಲಕ್ಷದವರೆಗೆ ನೀವು ಇಲ್ಲಿ ಬಡ್ಡಿಯನ್ನು ಪಡೆಯಬಹುದು.
ಸುರಕ್ಷಿತ ಯೋಜನೆ
ಈ ಯೋಜನೆಯು ಸರ್ಕಾರದ ಅಧೀನದಲ್ಲಿರುವುದರಿಂದ ತುಂಬಾ ಸೇಫ್ ಎಂದು ಪರಿಗಣಿಸಲ್ಪಟ್ಟಿದೆ. ಷೇರು ಮಾರುಕಟ್ಟೆ ಅಥವಾ ಮ್ಯೂಚುಯಲ್ ಫಂಡ್ಗಳಂತೆ ಇಲ್ಲಿ ಯಾವುದೇ ರೀತಿಯಲ್ಲಿ ಲಾಸ್ ಆಗುತ್ತೆ ಅನ್ನೋ ಭಯವಿಲ್ಲ. ನಿಮ್ಮ ಹೂಡಿಕೆ ಹಣಕ್ಕೆ ನಿಗದಿತ ಬಡ್ಡಿದರವೂ ಇರುತ್ತೆ, ಲಾಭವೂ ಸಿಗುತ್ತೆ.
ಇನ್ನು ತುರ್ತು ಅವಶ್ಯಕ್ಕಾಗಿ ಹಣ ವಿಥ್ಡ್ರಾ ಮಾಡಬೇಕು ಎಂದೆನಿಸದರೆ, ಒಂದು ವರ್ಷದ ನಂತರ ನಿಮ್ಮ ಜಮಾ ಮಾಡಿದ ಮೊತ್ತದ ಶೇಕಡಾ 50ರಷ್ಟು ಸಾಲವನ್ನು ಸಹ ಪಡೆಯಬಹುದು. ಈ ಮೂಲಕ ಖಾತೆಯನ್ನು ಕ್ಲೋಸ್ ಮಾಡದೆಯೇ ಹಣವನ್ನು ಹಿಂಪಡೆಯಬಹುದು ಮತ್ತು ಮತ್ತೆ ಹೂಡಿಕೆ ಮಾಡಬಹುದು.
ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ ನೀವು 1.5 ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿನಾಯಿತಿಯನ್ನು ಸಹ ಪಡೆಯುವ ಅವಕಾಶವಿದೆ. ಅಂದರೆ, ನೀವು ಹೂಡಿಕೆಯ ಮೇಲೆ ತೆರಿಗೆ ಉಳಿತಾಯ ಸಹ ಮಾಡಬಹುದು, ಜೊತೆಗೆ ಸುರಕ್ಷಿತ ಗಳಿಕೆಯನ್ನೂ ಪಡೆಯಬಹುದು. ತೆರಿಗೆ ವಿನಾಯಿತಿಯಲ್ಲೂ ಈ ಯೋಜನೆ ಬೆಸ್ಟ್ ಎಂದು ಗುರುತಿಸಿಕೊಂಡಿದೆ.
ಪೋಸ್ಟ್ ಆಫೀಸ್ ಇದೇ ರೀತಿಯ ಹಲವು ಯೋಜನೆಗಳನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಿದೆ. ಈ ಮೂಲಕ ಸಾರ್ವಜನಿಕರು ಹಲವು ಪ್ರಯೋಜನಗಳನ್ನು ಪಡೆಯಬಹುದು. ಹುಡುಗಿಯರಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು, ಪಿಪಿಎಫ್, ಎಫ್ಡಿ ಯೋಜನೆಗಳನ್ನು ಸಹ ನೀಡಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮುನ್ನ, ಬಜೆಟ್ ಪ್ಲಾನ್ ಮಾಡಿಕೊಳ್ಳಿ. ಇದರಿಂದ ನಿಮ್ಮ ವೆಚ್ಚಗಳ ಬಗ್ಗೆಯೂ ಗಮನ ನೀಡಲು ಸುಲಭವಾಗುತ್ತದೆ.
More From GoodReturns

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

LPG cylinder shortage: ಬೆಂಗಳೂರಲ್ಲಿ 1,700ರೂ. ಸಿಲಿಂಡರ್ 5,000 ರೂ.ಗೆ ಮಾರಾಟ..ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ

Pink Line Metro: ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಶೀಘ್ರದಲ್ಲಿ ಆರಂಭ, ಹೊಸ ರೈಲಿನ ಆಗಮನ



Click it and Unblock the Notifications