ಸಹಕಾರಿ ಕ್ಷೇತ್ರದ ಅಗ್ರಗಣ್ಯ ಬ್ಯಾಂಕು ಆಗಿರುವ ಸುಕೋ ಬ್ಯಾಂಕು 2021-22ರ ಆರ್ಥಿಕ ಸಾಲಿನಲ್ಲಿ ಒಟ್ಟು 1309 ಕೋಟಿ ರೂಪಾಯಿ ವಹಿವಾಟು ನಡೆಸಿ 4.74 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿ ನಿವ್ವಳ ಶೂನ್ಯ (ಶೇ.0) ಎನ್ಪಿಎ (NPO) ಹೊಂದುವ ಮೂಲಕ ಮಹತ್ತರ ಸಾಧನೆ ಮಾಡಿದೆ.
ಸುಕೋ ಬ್ಯಾಂಕಿನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿ, ಬ್ಯಾಂಕು ಒಟ್ಟು 2.8 ಕೋಟಿ ರೂಪಾಯಿ ತೆರಿಗೆ ಪಾವತಿಸಿದೆ. ತೆರಿಗೆ ಪಾವತಿಸಿದ ನಂತರ ಒಟ್ಟು 4.74 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದರು.
ಸುಕೋ ಬ್ಯಾಂಕ್ ಒಟ್ಟು 821 ಕೋಟಿ ರೂಪಾಯಿ ಠೇವಣಿ ಸಂಗ್ರಹ ಮಾಡಿ, ಒಟ್ಟು 488 ಕೋಟಿ ರೂಪಾಯಿ ಸಾಲ ವಿತರಣೆ ಮಾಡಿದೆ. ಬ್ಯಾಂಕಿನ ಎನ್ಪಿಎ (ಅನುತ್ಪಾದಕ ಆಸ್ತಿ) ಶೂನ್ಯ ಆಗಿರುವುದು ವಿಶೇಷ ಸಾಧನೆ ಎಂದು ಸುಕೋ ಬ್ಯಾಂಕಿನ ಅಧ್ಯಕ್ಷ ಮೋಹಿತ್ ಮಸ್ಕಿ ಹೇಳಿದರು.

ಮೂರು ಬ್ಯಾಂಕುಗಳ ವಿಲೀನ
"ಸಂಕಷ್ಟದಲ್ಲಿದ್ದ ಬಳ್ಳಾರಿಯ ಮಹಿಳಾ ಶಕ್ತಿ ಕೋ ಆಪರೇಟಿವ್ ಬ್ಯಾಂಕು, ಹುಬ್ಬಳ್ಳಿಯ ವರ್ಧಮಾನ್ ಕೋ ಆಪರೇಟಿವ್ ಬ್ಯಾಂಕು ಮತ್ತು ಕಾರಟಗಿಯ ಶ್ರೀ ಶರಣಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕನ್ನು ನಮ್ಮ ಬ್ಯಾಂಕಿನಲ್ಲಿ ವಿಲೀನ ಮಾಡಿಕೊಳ್ಳಲಾಗಿದೆ. ಈ ಮೂಲಕ ಮೂರು ಸಹಕಾರಿ ಬ್ಯಾಂಕುಗಳನ್ನು ತನ್ನಲ್ಲಿ ವಿಲೀನ ಮಾಡಿಕೊಂಡು ಗ್ರಾಹಕರ ಮತ್ತು ಷೇರುದಾರರ ಹಿತಾಸಕ್ತಿ ಕಾಪಾಡಿದ ಕರ್ನಾಟಕದ ಏಕೈಕ ಸಹಕಾರಿ ಬ್ಯಾಂಕು ಎನ್ನುವ ದಾಖಲೆಯನ್ನು ಸುಕೋ ಬ್ಯಾಂಕು ಹೊಂದಿದೆ," ಎಂದು ಮೋಹಿತ್ ಮಸ್ಕಿ ಮಾಹಿತಿ ನೀಡಿದರು.
"ಪ್ರಸ್ತುತ ಕರ್ನಾಟಕದ 17 ಜಿಲ್ಲೆಗಳಲ್ಲಿ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ಹೊಂದಿದ್ದು, 12 ಜಿಲ್ಲೆಗಳಲ್ಲಿ 29 ಶಾಖೆಗಳನ್ನು ಹೊಂದಿದೆ. ಆರ್ಬಿಐ (ಖಃI) ನಿಂದ ಸ್ವತಂತ್ರ ಐಎಫ್ಎಸ್ಸಿ (IಈSಅ) ಕೋಡ್ ಹೊಂದಿದ ಉತ್ತರ ಕರ್ನಾಟಕದ ಪ್ರಪ್ರಥಮ ಸಹಕಾರಿ ಬ್ಯಾಂಕು ಸುಕೋ ಬ್ಯಾಂಕು ಆಗಿದೆ," ಎಂದು ಹೇಳಿದ ಮೋಹಿತ್ ಮಸ್ಕಿ ಈ ಸಂದರ್ಭದಲ್ಲೇ, "ಏಪ್ರಿಲ್ 2022 ರಿಂದ ಆನ್ಲೈನ್ನಲ್ಲಿ ಸಾಲದ ಅರ್ಜಿಯನ್ನು ಪಡೆದು ತ್ವರಿತವಾಗಿ ಸಾಲ ಮಂಜೂರು ಮಾಡುವ ಹೊಸ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಆನ್ಲೈನ್ನಲ್ಲಿ ಸಾಲದ ಅರ್ಜಿ ಪಡೆದು ಸಾಲ ಮಂಜೂರು ಮಾಡುವ ಕರ್ನಾಟಕದ ಪ್ರಪ್ರಥಮ ಸಹಕಾರಿ ಬ್ಯಾಂಕು ಸುಕೋ ಬ್ಯಾಂಕು ಆಗಿದೆ," ಎಂದರು.
"ಮಾರುಕಟ್ಟೆಯ ಏರುಪೇರುಗಳು ಮತ್ತು ಆರ್ಥಿಕ ಕ್ಷೇತ್ರದ ಮೇಲೆ ಕೋವಿಡ್ - 19ರ ಪರಿಣಾಮಗಳ ಮಧ್ಯೆಯೂ ಸುಕೋ ಬ್ಯಾಂಕ್ ಉತ್ತಮ ಪ್ರಗತಿಯನ್ನು ಸಾಧಿಸಿದೆ. ಗ್ರಾಹಕರು ಮತ್ತು ಷೇರುದಾರರು ಬ್ಯಾಂಕಿನ ಮೇಲೆ ಹೊಂದಿರುವ ವಿಶ್ವಾಸ ಮತ್ತು ನಂಬಿಕೆಯನ್ನು ಈ ಸಾಧನೆ ಸಾಕ್ಷೀಕರಿಸುತ್ತದೆ ಎಂದು ಅವರು ಹೇಳಿದರು. ಬ್ಯಾಂಕಿನ ಈ ಸಾಧನೆಯಲ್ಲಿ ಪಾಲ್ಗೊಂಡಿರುವ ಷೇರುದಾರರು, ಗ್ರಾಹಕರು, ಸಿಬ್ಬಂದಿಗಳು ಮತ್ತು ಹಿತೈಷಿಗಳಿಗೆ ಧನ್ಯವಾದಗಳು," ಎಂದು ಅವರು ಹೇಳಿದರು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಗಿರೀಶ್ ಮತ್ತು ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶರಾವ್ ಅವರು ಉಪಸ್ಥಿತರಿದ್ದರು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications