ನವದೆಹಲಿ, ಆಗಸ್ಟ್ 11: ಆರೋಗ್ಯಕ್ಕೆ ಇಲ್ಲವೇ ಮೆಡಿಕಲ್ ವೆಚ್ಚಕ್ಕೆ ಮಾಡಿರುವ ಹಣಕ್ಕೂ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಿದೆ ಎನ್ನುವ ವಿಚಾರ ಹಲವರಿಗೆ ಗೊತ್ತಿಲ್ಲದೆ ಇರಬಹುದು. ವೈದ್ಯಕೀಯ ಚಿಕಿತ್ಸಾ ವೆಚ್ಚಗಳನ್ನು ಸ್ವಂತಕ್ಕೆ ಮಾಡಿಕೊಂಡಿದ್ದರೂ ಅಥವಾ ಕುಟುಂಬದ ಇತರ ಸದಸ್ಯರ ಚಿಕಿತ್ಸೆಗೆ ವೆಚ್ಚ ಮಾಡಿದ್ದರೂ ತೆರಿಗೆ ಲಾಭ ಪಡೆದುಕೊಳ್ಳಬಹುದು.
ಜಂಜಾಟದ ಈ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಅಗತ್ಯವಾಗಿದೆ. ಆರೋಗ್ಯ ವಿಮೆಯಿಂದ ತೆರಿಗೆಯನ್ನೂ ಉಳಿಸಬಹುದು. ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಸೆಕ್ಷನ್ 80D ತೆರಿಗೆ ವಿನಾಯಿತಿ ಸಿಗುತ್ತದೆ. ನೀವೇನಾದ್ರೂ ಒಂದು ಮೆಡಿಕ್ಲೈಮ್ ಪಾಲಿಸಿಯನ್ನು ನಿಮಗೆ, ನಿಮ್ಮ ಪತ್ನಿಗೆ, ಹಾಗೂ ನಿಮ್ಮ ಮಗುವಿಗೆಂದು ಕೊಂಡರೆ, ನಿಮಗೆ 25,000 ರೂ. ರಿಬೇಟ್ ಸಿಗುತ್ತೆ. ನೀವೇನಾದರೂ ಹಿರಿಯ ನಾಗರಿಕರಾಗಿದ್ದರೆ, ನಿಮಗೆ 50,000 ರೂ. ರಿಬೇಟ್ ದೊರೆಯುತ್ತದೆ. ನಿಮ್ಮ ಪೋಷಕರು ಹಿರಿಯ ನಾಗರಿಕರಾಗಿದ್ದರೆ, ನಿಮಗೆ ಪ್ರತ್ಯೇಕವಾಗಿ 50,000 ರೂ. ರಿಬೇಟ್ ನೀವೂ ಮತ್ತು ನಿಮ್ಮ ಪೋಷಕರೂ ಸಹ ಹಿರಿಯ ನಾಗರಿಕರಾಗಿದ್ದರೆ, 1 ಲಕ್ಷ ರೂವರೆಗೆ ತೆರಿಗೆ ಕಡಿತದ ಲಾಭ ಸಿಗುತ್ತದೆ.

ನೀವೇನಾದ್ರೂ ಅಂಗವಿಕಲ ವ್ಯಕ್ತಿಯೊಬ್ಬನ ಚಿಕಿತ್ಸಾ ವೆಚ್ಚವನ್ನು ಭರಿಸುತ್ತಿದ್ದರೆ, ಸೆಕ್ಷನ್ 80ಡಿಡಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ಅಂತಹ ಅಂಗವಿಕಲ ವ್ಯಕ್ತಿ ಪೋಷಕರು, ಪತ್ನಿ, ಮಗು, ಸೋದರ, ಅಥವಾ ಸೋದರಿ ಯಾರು ಬೇಕಾದರೂ ಆಗಿರಬಹುದು, ಆದರೆ ಅವರು ತೆರಿಗೆದಾರನನ್ನು ಅವಲಂಬಿಸಿರಬೇಕು. ಹಿಂದೂ ಅವಿಭಕ್ತ ಕುಟುಂಬದ ವಿಷಯದಲ್ಲಿ, ಆ ಅವಲಂಬಿತ ವ್ಯಕ್ತಿಯು ಕುಟುಂಬದ ಯಾವುದೇ ಸದಸ್ಯನಾಗಿರಬಹುದು. ಅವಲಂಬಿತ ವಿಶೇಷಚೇತನ ವ್ಯಕ್ತಿಯ ದೈಹಿಕ ನ್ಯೂನ್ಯತೆ ಶೇ 40ರಷ್ಟು ಅಥವಾ ಅದಕ್ಕೂ ಹೆಚ್ಚಾಗಿದ್ದರೆ, 75,000 ರೂ. ವರೆಗಿನ ವೈದ್ಯಕೀಯ ವೆಚ್ಚಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಹಾಗೆಯೇ, ದೈಹಿಕ ನ್ಯೂನ್ಯತೆ ಶೇ. 80ರಷ್ಟು ಅಥವಾ ಅದಕ್ಕೂ ಹೆಚ್ಚಾಗಿದ್ದರೆ, 1.25 ಲಕ್ಷ ರೂ. ವರೆಗೆ ವೈದ್ಯಕೀಯ ವೆಚ್ಚಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಈ ಸೌಲಭ್ಯ ಪಡೆಯಲು ಸಂಬಂಧಿಸಿದ ವೈದ್ಯಾಧಿಕಾರಿಯಿಂದ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ.
ಶ್ರವಣ ದೋಷ, ಬುದ್ಧಿಮಾಂದ್ಯತೆ, ಮಾನಸಿಕ ಕಾಯಿಲೆ, ಆಟಿಸಮ್ ಅಂಧತ್ವ, ಅಲ್ಪದೃಷ್ಟಿ, ಕುಷ್ಠ ರೋಗ, ಮತ್ತೂ ನಡೆಯಲು ಅಸಾಧ್ಯವಾದ ಸ್ಥಿತಿಯಂತ ರೋಗಗಳೂ ಸೇರಿದಂತೆ ಇತರ ಅನೇಕ ರೋಗಗಳಿಗೆ ಸೆಕ್ಷನ್ 80DD ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಚಿಕಿತ್ಸೆ ಮತ್ತು ಆರೈಕೆ ವೆಚ್ಚಗಳಲ್ಲದೇ, ಅವಲಂಬಿತ ವ್ಯಕ್ತಿಗೆ ತರಬೇತಿ ಮತ್ತು ಪುನರ್ವಸತಿಯ ಸೌಲಭ್ಯವನ್ನೂ ಒದಗಿಸಲಾಗುತ್ತದೆ.
ಸೆಕ್ಷನ್80DDB ಅಡಿಯಲ್ಲಿ, ಚಿಕಿತ್ಸೆಗೆ ದುಬಾರಿ ವೆಚ್ಚ ತಗಲುವ ಕ್ಯಾನ್ಸರ್ ನಂತಹ ಕಾಯಿಲೆಗಳಿಗೂ ರಕ್ಷಣೆ ಇದೆ. ತೆರಿಗೆದಾರನು ತನ್ನ ಸ್ವಂತದ ಅಥವಾ ಅವಲಂಬಿತರ ಚಿಕಿತ್ಸೆಗೆ ತಗುಲಿದ ಇಂತಹ ವೆಚ್ಚಕ್ಕೆ ತೆರಿಗೆ ಕಡಿತದ ಲಾಭವನ್ನು ಪಡೆಯಬಹುದು. ವ್ಯಕ್ತಿಯ ವಯಸ್ಸು 60 ವರ್ಷಗಳಿಗಿಂತಲೂ ಕಡಿಮೆ ಇದ್ದರೆ 40 ಸಾವಿರ ರೂ. ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಹಾಗೆಯೇ, ಹಿರಿಯ ನಾಗರಿಕರಿಗೆ 1 ಲಕ್ಷದವರೆಗಿನ ಚಿಕಿತ್ಸಾವೆಚ್ಚಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು.
ಕ್ಯಾನ್ಸರ್, ಏಡ್ಸ್, ಹಿಮೋಫೀಲಿಯ, ಥಲಸ್ಸೇಮಿಯ, ಬುದ್ಧಿಮಾಂದ್ಯತೆ, ಪರ್ಕಿಸನ್ಸ್, ಮೋಟಾರ್ ನ್ಯೂರಾನ್ ಡಿಸೀಸ್ ಹಾಗೂ ದೀರ್ಘಕಾಲದ ಮೂತ್ರಪಿಂಡಗಳ ವೈಫಲ್ಯಗಳಂತಹ ಕಾಯಿಲೆಗಳಿಗೆ ಇದರ ಅಡಿಯಲ್ಲಿ ರಕ್ಷಣೆ ಸಿಗುತ್ತದೆ. ಈ ತೆರಿಗೆ ಕಡಿತದ ಲಾಭ ಪಡೆಯಲು ನರರೋಗಗಳ ವೈದ್ಯರು, ಕ್ಯಾನ್ಸರ್ ವೈದ್ಯರು, ಮೂತ್ರಪಿಂಡಗಳ ವೈದ್ಯರು, ರಕ್ತಕ್ಕೆ ಸಂಬಂಧಪಟ್ಟ ಕಾಯಿಲೆಗಳ ವೈದ್ಯರು, ಹಾಗೂ ಅಥವಾ ಅವರಿಗೆ ಸಮಾನರಾದ ತಜ್ಞ ಇಮ್ಯುನಿಲಾಜಿಸ್ಟ್ ಡಾಕ್ಟರ್ಸ್ ತಿಳಿಸಿರುವ ಪ್ರಿಸ್ಕ್ರಿಪ್ಶನ್ ಸಲ್ಲಿಕೆ ಮಾಡಬೇಕಾಗುತ್ತದೆ.
ಬಹಳಷ್ಟು ಜನರಿಗೆ 80DDB ಮತ್ತು 80U ಸೆಕ್ಷನ್ ನಡುವೆ ಗೊಂದಲಗಳಿರುತ್ತವೆ. ವಾಸ್ತವದಲ್ಲಿ, ಸೆಕ್ಷನ್80U ಅಡಿಯಲ್ಲಿ, ದೈಹಿಕ ಅಸಮರ್ಥತೆಯುಳ್ಳ ವ್ಯಕ್ತಿಯೊಬ್ಬನು ಸ್ವತ: ತಾನೇ ಪಡೆದ ಚಿಕಿತ್ಸೆಯ ವೆಚ್ಚಕ್ಕೆ ಪ್ರತಿಯಾಗಿ ತೆರಿಗೆ ಕಡಿತದ ಲಾಭ ಪಡೆಯಬಹುದು. ಆದರೆ, ಸೆಕ್ಷನ್ 80DDB ಅಡಿಯಲ್ಲಿ, ತೆರಿಗೆದಾರನು ತನ್ನ ಅವಲಂಬಿತರ ಚಿಕಿತ್ಸೆಗೆ ಮಾಡಿದ ವೆಚ್ಚಕ್ಕೆ ಪ್ರತಿಯಾಗಿ ತೆರಿಗೆ ಕಡಿತದ ಲಾಭ ಪಡೆಯುತ್ತಾನೆ
ಅನಾರೋಗ್ಯದ ಕಾರಣಕ್ಕೆ ಪ್ರತಿ ವರ್ಷ ದೊಡ್ಡ ಮೊತ್ತವನ್ನು ವ್ಯಯಿಸುತ್ತಿದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಅಂಗವಿಕಲರಿದ್ದರೆ ತೆರಿಗೆ ಈ ಬಗೆಯ ಖರ್ಚುಗಳಿದ್ದರೆ ಅವುಗಳನ್ನು ಬಳಸಿಕೊಂಡು ತೆರಿಗೆ ಲಾಭ ಪಡೆದುಕೊಳ್ಳಬಹುದು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications