ಹಣದ ವಿಷಯದಲ್ಲಿ ಪ್ಲ್ಯಾನಿಂಗ್ ಮಾಡುವುದು ಎಲ್ಲರಿಗೂ ಮುಖ್ಯ. ಆದರೆ ಅನಿರೀಕ್ಷಿತ ಅಪಘಾತ, ಆರೋಗ್ಯ ಸಮಸ್ಯೆ, ಅಥವಾ ದುರ್ಘಟನೆ ಸಂಭವಿಸಿದರೆ ನಮ್ಮ ಹಣಕಾಸು ಯೋಜನೆಗಳು ಹಾನಿಯಾಗಬಹುದು. ಈ ಪರಿಸ್ಥಿತಿಗಳಲ್ಲಿ ನಿಮ್ಮ ಹಣವನ್ನು ಕಾಪಾಡಲು ವಿಮೆ ಬಹಳ ಅಗತ್ಯ.

ಜೀವ ವಿಮೆ ಯಾಕೆ ಬೇಕು?
ನೀವು ಒಬ್ಬ ಕುಟುಂಬದ ಪಾಲಕರಾಗಿದ್ದರೆ, ನಿಮ್ಮ ಇಲ್ಲದಿದ್ದಾಗ ಕುಟುಂಬದ ಜೀವನ ಹದಗೆಡದಿರಲೆಂದು ನೋಡುವುದು ನಿಮ್ಮ ಹೊಣೆ. ಟರ್ಮ್ ಇನ್ಶೂರೆನ್ಸ್ (Term Insurance) ನಿಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುತ್ತದೆ. ಇದು ಕಡಿಮೆ ಪ್ರೀಮಿಯಂಗೆ ಹೆಚ್ಚಿನ ರಕ್ಷಣೆಯನ್ನು ನೀಡುವ ಪ್ಲಾನ್.
ಆಸ್ಪತ್ರೆ ಬಿಲ್ಗಳು ಇತ್ತೀಚೆಗೆ ಭಾರೀ ಹೆಚ್ಚಾಗಿವೆ. ಸಾಮಾನ್ಯ ಶಸ್ತ್ರಚಿಕಿತ್ಸೆಗೆಲ್ನುಲೂ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಇಂತಹ ವೆಚ್ಚಗಳನ್ನು ನಿಮ್ಮ ಉಳಿತಾಯದಿಂದ ಪೂರೈಸುವುದು ಕಷ್ಟ. ಈ ಕಾರಣಕ್ಕಾಗಿ ಆರೋಗ್ಯ ವಿಮೆ ನಿಮ್ಮ ಕುಟುಂಬದ ಆರೋಗ್ಯವನ್ನು ಮಾತ್ರವಲ್ಲ, ಹಣಕಾಸಿನ ಸ್ಥಿತಿಯನ್ನೂ ರಕ್ಷಿಸುತ್ತದೆ. ಆದರೆ ಅತಿ ಉಪಯುಕ್ತವಾಗುವ ವಿಮೆಗಳು, ನೀವು ಮಾಡುವ ಕೆಲ ತಪ್ಪುಗಳಿಂದ ಕ್ಲೈಮ್ ಮಾಡಲಾಗುವುದಿಲ್ಲ. ಹಾಗಾದ್ರೆ ನೀವು ಯಾವ ತಪ್ಪುಗಳನ್ನು ತಪ್ಪಿಸಬೇಕು ಗೊತ್ತಾ?
1. ಪ್ರತಿ ವರ್ಷ ಪ್ರೀಮಿಯಂ ವ್ಯರ್ಥ ಎಂಬ ಭ್ರಮೆ:
ಟರ್ಮ್ ಇನ್ಶೂರೆನ್ಸ್ನಲ್ಲಿ ಪಾವತಿಸಿದ ಹಣ ಮರಳಬಾರದೆಂದು ಅನೇಕರು ತಿರಸ್ಕರಿಸುತ್ತಾರೆ. ಆದರೆ, ನಿಮ್ಮ ಜೀವನವನ್ನೇ ರಕ್ಷಿಸುವ ಬಲಿಷ್ಠ ಕವಚವಿದು. ಏನೂ ಆಗದಿದ್ದರೂ ಅದು ದುಡ್ಡು ವ್ಯರ್ಥವಲ್ಲ, ಏನಾದರೂ ಆದರೆ ಅದು ನಿಮ್ಮ ಕುಟುಂಬವನ್ನು ಆರ್ಥಿಕವಾಗಿ ಉಳಿಸುವ ಆಯುಧ.
2. ರಿಟರ್ನ್ ಯೋಜನೆಗಳಲ್ಲಿ ಭದ್ರತೆ ಹುಡುಕುವುದು:
ಈ ಯೋಜನೆಗಳಲ್ಲಿ ಪ್ರೀಮಿಯಂ ಮರುಪಾವತಿಯಾಗಬಹುದು. ಆದರೆ ಅವು ಹಣದುಬ್ಬರವನ್ನು ಪರಿಗಣಿಸುತ್ತಿಲ್ಲ. 25 ವರ್ಷಗಳ ನಂತರ ನೀವು ಪಡೆಯುವ ಮೊತ್ತ ಕೇವಲ ಕಾಗದದ ಸಂಖ್ಯೆ. ಮೌಲ್ಯ ಕುಗ್ಗಿ ಹೋಗಿರಬಹುದು.
3. ಕಂಪನಿಯ ವಿಮೆಯನ್ನೇ ನಂಬುವುದು:
ನೀವು ಕೆಲಸದಲ್ಲಿ ಇಲ್ಲದಿದ್ದರೆ ಅಥವಾ ಉದ್ಯೋಗ ಬದಲಾಯಿಸಿದರೆ ವಿಮೆ ರದ್ದಾಗಬಹುದು. ವೈಯಕ್ತಿಕ ವಿಮೆ ಇಲ್ಲದಿದ್ದರೆ ನೀವು ಸಂಪೂರ್ಣ ಅಪಾಯದ ನಡುವೆ ಇರಬಹುದು. ಈ ಕಾರಣಕ್ಕಾಗಿ ವೈಯಕ್ತಿಕ ವಿಮೆ ಅತ್ಯಗತ್ಯ.
4. ವಿದೇಶದಲ್ಲಿದ್ದರೂ ಭಾರತದಲ್ಲಿ ವಿಮೆ ಅಗತ್ಯವಿದೆ:
ಅನೇಕ NRI ಗಳು ವಿದೇಶದಲ್ಲಿ ವಿಮೆ ಮಾಡಿಕೊಂಡು ಇಲ್ಲಿ ಬೇಕಿಲ್ಲವೆಂದು ತೀರ್ಮಾನಿಸುತ್ತಾರೆ. ಆದರೆ ಗಂಭೀರ ಆರೋಗ್ಯ ಸಮಸ್ಯೆ ಬಂದಾಗ ಚಿಕಿತ್ಸೆಗಾಗಿ ಭಾರತಕ್ಕೆ ಬರುವವರು ಹೆಚ್ಚು. ಹಾಗಾಗಿ, ಇಲ್ಲಿ ಕೂಡ ವಿಮೆ ಇರಲಿ.
5. ಆನ್ಲೈನ್ನಲ್ಲಿ ಖರೀದಿಸಿ ಜವಾಬ್ದಾರಿಯನ್ನು ಮರೆಯುವುದು:
ಆನ್ಲೈನ್ ವಿಮೆ ಅಗ್ಗವಾಗಬಹುದು. ಆದರೆ, ಕ್ಲೈಮ್ ಸಮಯದಲ್ಲಿ ಮಾರ್ಗದರ್ಶನವಿಲ್ಲದಿರುವುದು ಸಂಕಷ್ಟ ಉಂಟುಮಾಡಬಹುದು. ನಂಬಿಗಸ್ತ ಏಜೆಂಟ್ಗಳ ಮಾರ್ಗದರ್ಶನ ಇರಲಿ.
6. ವಿಮಾ ಪಾಲಿಸಿಗಳನ್ನೆಲ್ಲ ಒಂದೇ ಎಂಬ ಭಾವನೆ:
ವಿಭಿನ್ನ ವಿಮಾ ಕಂಪನಿಗಳ ಪಾಲಿಸಿಗಳು ಗುಣಾತ್ಮಕವಾಗಿ ವಿಭಿನ್ನವಾಗಿರುತ್ತವೆ. ಹೊರಗಿಡುವಿಕೆ, ಷರತ್ತುಗಳು, ಅರ್ಹತೆ ಇತ್ಯಾದಿಗಳಲ್ಲಿ ವ್ಯತ್ಯಾಸವಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚು ಸೌಲಭ್ಯ ಸಿಗುವುದು ಎಂದು ಭಾವನೆ ಇಟ್ಟುಕೊಳ್ಳಬೇಡಿ.
7. ಸತ್ಯವನ್ನು ತಿಳಿಸದೆ ವಿಮೆ ತೆಗೆದುಕೊಳ್ಳುವುದು:
ವಿಮೆ ನಿಯಮಗಳ ಪ್ರಕಾರ, ನಿಮಗೆ ಗೊತ್ತಿರುವ ಎಲ್ಲಾ ಆರೋಗ್ಯ ಮಾಹಿತಿ ನಿಮಗೆ ತಪ್ಪದೇ ಬಹಿರಂಗಪಡಿಸಬೇಕು. ಇಲ್ಲದಿದ್ದರೆ, ಕ್ಲೈಮ್ ಸಮಯದಲ್ಲಿ ನಿಮ್ಮ ಪಾಲಿಸಿ ರದ್ದುಪಡಿಸಬಹುದು.
ಜೀವನವು ಅನಿರೀಕ್ಷಿತ. ಎಷ್ಟು ಚೆನ್ನಾಗಿ ಯೋಜನೆ ಹಾಕಿಕೊಂಡರೂ, ಏಕಾಏಕಿ ಬರುವ ಘಟನೆಯೊಂದರಿಂದ ನಿಮ್ಮ ಸಂಪೂರ್ಣ ಯೋಜನೆ ಹಾಳಾಗಬಹುದು. ವಿಮೆ ಈ ಅಸುರಕ್ಷಿತ ಸ್ಥಿತಿಗೆ ಉತ್ತರವಾಗಿರುತ್ತದೆ. ಅದು ನಿಮ್ಮ ಆರ್ಥಿಕ ಭದ್ರತೆಯ ನೆಲೆಗೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!



Click it and Unblock the Notifications