
ಗೂಳಿ ಎಂದರೆ ಷೇರು ಮಾರುಕಟ್ಟೆಯಲ್ಲಿ ಸದಾ ಗೂಳಿ ರೀತಿ ಮುನ್ನುಗ್ಗುವವನು ಹಾಗೆ ಕರಡಿ ಎಂದರೆ ಸದಾ ಕರಡಿಯಂತೆ ನೆಲಕಚ್ಚಿ ನಿಲ್ಲುವವನು ಎಂದರ್ಥ. ಏರಿಕೆ ಕಾಣುವ ಮಾರುಕಟ್ಟೆ ಸೂಚಿಸಲು ಗೂಳಿ ಹಾಗೂ ಕುಸಿತ ಕಾಣುವ ಮಾರುಕಟ್ಟೆ ಸೂಚಿಸಲು ಕರಡಿಯನ್ನು ಬಳಸಲಾಗುತ್ತದೆ.
ಮಾರುಕಟ್ಟೆ ಸ್ಥಿತಿಗತಿ ಬದಲಾವಣೆ ಹಾಗೂ ಈ ಪ್ರಾಣಿಗಳ ವರ್ತನೆಯನ್ನು ಹೋಲಿಕೆ ಇರುವುದರಿಂದ ಅಂದಿನಿಂದ ಇಂದಿನವರೆಗೂ ಈ ಎರಡು ಪ್ರಾಣಿಗಳನ್ನು ಷೇರು ಮಾರುಕಟ್ಟೆಯಲ್ಲಿ ಸಾಕಿಕೊಂಡು ಬರಲಾಗಿದೆ ಎನ್ನಬಹುದು.
1700 ರಿಂದ bull, bear ಪದ ಬಳಕೆಯಲ್ಲಿದೆ ಎನ್ನಲಾಗಿದ್ದರೂ 1775 ರಿಂದ ಬಳಕೆಯಲ್ಲಿರುವುದಕ್ಕೆ ಸಾಕ್ಷಿಗಳಿದೆ. ಗೂಳಿ ಹಾಗೂ ಕರಡಿಗಳನ್ನು ಷೇರು ಮಾರುಕಟ್ಟೆಗೆ ನುಗ್ಗಿಸಿದ್ದಕ್ಕೂ ಕೆಲ ದೃಷ್ಟಾಂತಗಳಿದೆ.
ಯುರೋಪಿನಲ್ಲಿ ಅದರಲ್ಲೂ ಜರ್ಮನಿಯಲ್ಲಿ Don't sell the bear-skin before you have killed the bear, ಹಾಲೆಂಡ್ ನಲ್ಲಿ Don't sell the bearskin before the bear is dead ಮತ್ತು ಇಟಲಿಯಲ್ಲಿ Don't sell the bearskin before you have caught the bear ಎಂಬ ಮಾತು ಜನಜನಿತವಾಗಿದೆ. ಇದೇ ಮುಂದೆ ಇಂಗ್ಲೆಂಡ್ ಮಾರುಕಟ್ಟೆಗೂ ವಿಸ್ತರಿಸಿದೆ. ಸಾಮಾನ್ಯವಾಗಿ Don't sell something you don't have ಎಂಬ ನುಡಿಗಟ್ಟನ್ನು ಆಂಗ್ಲರು ಬಳಸುವುದನ್ನು ಕಾಣಬಹುದು. ಮಾರುಕಟ್ಟೆಯಲ್ಲಿ ಏನು ಇಲ್ಲದಂಥ ಸ್ಥಿತಿಯುಳ್ಳವನು ಹಾಗೂ ಮಾರುಕಟ್ಟೆ ಇಳಿಮುಖವಾಗಿ ನೆಲಕಚ್ಚಿದಾಗ ಕರಡಿ ಬಳಕೆಯಾಗುತ್ತದೆ.
ಯುರೋಪ್ ನಲ್ಲಿ ಚರ್ಮ ಮಾರಾಟದ ಮಧ್ಯವರ್ತಿಗಳು ಕರಡಿ ಚರ್ಮ ಕೈಗೆ ಸಿಗುವ ಮುಂಚಿತವಾಗೇ ಮಾರಾಟ ಕುದುರಿಸಿಬಿಡುತ್ತಿದ್ದರಂತೆ Don't sell something you don't have ಅನ್ವಯವಾಗುವಂಥ ಸ್ಥಿತಿ ತಂದುಕೊಳ್ಳುತ್ತಿದ್ದ ಈ ಮಾರಾಟಗಾರರಿಗೆ ಮಾರಾಟ ಹಾಗೂ ಖರೀದಿ ವೆಚ್ಚದ ಸರಿದೂಗಿಸುವ ಬದಲು ನಷ್ಟ ಸರಿದೂಗಿಸುವುದೇ ಕಾಯಕವಾಗಿತ್ತು
ಹೀಗಾಗಿ ಮಾರುಕಟ್ಟೆ ಕುಸಿತ ಸೂಚಕವಾಗಿ ಕರಡಿ ಪದ ಅಂದಿನಿಂದ ಜಾರಿ ಬಂದಿದೆ ಎಂಬ ಮತ್ತೊಂದು ಕತೆ ಇದೆ. ಹೀಗೆ bull ಹಾಗೂ bear ಗಟ್ಟಿಯಾಗಿ ಜಾಗತಿಕವಾಗಿ ಷೇರು ಮಾರುಕಟ್ಟೆಯಲ್ಲಿ ಮನೆ ಮಾಡಿಬಿಟ್ಟಿದೆ.
More From GoodReturns

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications