ಬೆಂಗಳೂರು, ಸೆ.30: ಮೊಬೈಲ್ ಫೋನ್ ಮೂಲಕ ಬ್ಯಾಂಕಿಂಗ್ ಸೇವೆಗಳು ಸುಲಭವಾಗಿ , ಸರಳವಾಗಿ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಸುರಕ್ಷತೆಯ ಭೀತಿಯ ನಡುವೆ ಒನ್ ಟೈಮ್ ಪಾಸ್ ವರ್ಡ್ (ಒಟಿಪಿ) ಮಾದರಿಯಲ್ಲಿ ಅನೇಕ ವಿಧಾನಗಳು ಜಾರಿಯಲ್ಲಿದ್ದರೂ ಭದ್ರತಾ ಲೋಪಗಳು ಆಗಾಗ ಸಂಭವಿಸುತ್ತಿರುತ್ತದೆ.
ತಂತ್ರಜ್ಞಾನ ಬಳಕೆಯಿಂದ ಲಾಭದ ಜೊತೆಗೆ ನಷ್ಟವೋ ಇರುತ್ತದೆ. ಸೈಬರ್ ವಂಚನೆ ಪ್ರಕರಣಗಳ ಸಾಲಿನಲ್ಲಿ ಇಮೇಲ್ ಫಿಶಿಂಗ್, ಪಾಸ್ ವರ್ಡ್ ಹ್ಯಾಕ್, ಕಾರ್ಡ್ ಸ್ಕಿಮಿಂಗ್, ವಿಶಿಂಗ್, ಐಡೆಂಟೆಟಿ ಕಳ್ಳತನದ ಜೊತೆಗೆ ಸಿಮ್ (SIM) ಸ್ವಾಪ್ ವಂಚನೆ ಸೇರಿಕೊಂಡಿದೆ.
ಏನಿದು ಸಿಮ್ ಸ್ವಾಪ್ ವಂಚನೆ?
ಸಿಮ್ ಸ್ವಾಪ್ ವಂಚನೆಯಲ್ಲಿ ನಿಮ್ಮ ಮೊಬೈಲ್ ನಲ್ಲಿರುವ ಸಿಮ್ ಕಾರ್ಡನ್ನು ಬದಲಾಯಿಸಿ ತಮ್ಮ ಹೆಸರಿನಲ್ಲಿರುವ ಮತ್ತೊಂದು ಸಿಮ್ ಕಾರ್ಡ್ ಹಾಕುತ್ತಾರೆ. ಈ ಮೂಲಕ ಸಿಮ್ ಬದಲಾವಣೆ ಮಾಡಿಕೊಂಡು ಬ್ಯಾಂಕಿಂಗ್ ವ್ಯವಹಾರ ಪೂರೈಸಿಕೊಳ್ಳುತ್ತಾರೆ. ಒಟಿಪಿ ಹಾಗೂ ಅಲರ್ಟ್ ಗಳು ಸುಲಭವಾಗಿ ವಂಚಕರ ಕೈ ಸೇರುತ್ತದೆ.[ಸೈಬರ್ ಹ್ಯಾಕರ್ ಗಳಿಂದ ತಪ್ಪಿಸಿಕೊಳ್ಳೋದು ಹೇಗೆ?]

ಸಿಮ್ ಸ್ವಾಪ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಸಿಮ್ ಮೂಲಕ ನಿಮ್ಮ ವೈಯಕ್ತಿಕ ದಾಖಲೆ ಪಡೆದುಕೊಂಡು ಫಿಶಿಂಗ್ ದಾಳಿಯಂತೆ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು. ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಳ್ಳಬಹುದು. ನಿಮ್ಮ ಹೆಸರಿನಲ್ಲಿ ವಂಚಕರು ಡೂಪ್ಲಿಕೇಟ್ ಸಿಮ್ ಪಡೆದುಕೊಂಡು ಈ ರೀತಿ ವಂಚನೆ ಮಾಡುತ್ತಾರೆ. ಮೊಬೈಲ್ ಕಳೆದು ಹೋಗಿದೆ,. ಸಿಮ್ ಕಾರ್ಡ್ ಹಾಳಾಗಿದೆ ಎಂದು ದೂರು ನೀಡಿ ಮೊಬೈಲ್ ಸೇವಾ ಸಂಸ್ಥೆಯಿಂದ ನಕಲಿ ಸಿಮ್ ಪಡೆದುಕೊಳ್ಳುತ್ತಾರೆ. [ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ಸಂಖ್ಯೆ ನೋಂದಣಿ ಏಕೆ?]
ಸಿಮ್ ಸ್ವಾಪ್ ಭೀತಿಗೆ ಏನು ಪರಿಹಾರ?
* ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಇತರೆ ಯಾವುದೇ ವಿಂಡೋಸ್ ಓಪನ್ ಮಾಡಬೇಡಿ. ಕ್ಯಾಶ್ (Cache) ಕ್ಲಿಯರ್ ಮಾಡಿರಿ. ಹೆಚ್ಚುವರಿ ಸುರಕ್ಷತಾ ವಿಧಾನಗಳಿದ್ದರೆ ಬಳಸಿ.
* ಬ್ಯಾಂಕಿನಿಂದ ಸುಮಾರು ಕಾಲವಾದರೂ ಯಾವುದೇ ಅಲರ್ಟ್ ಅಥವಾ ಕರೆ ಬರದಿದ್ದರೆ ತಕ್ಷಣವೇ ಬ್ಯಾಂಕಿಗೆ ದೂರು ನೀಡಿ.
* ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳಬೇಡಿ.
* ಬ್ಯಾಂಕಿಂಗ್ ವ್ಯವಹಾರಕ್ಕಾಗಿ ಪ್ರತ್ಯೇಕ ಇಮೇಲ್ ಐಡಿ ಬಳಸಿದರೆ ಉತ್ತಮ
(ಗುಡ್ ರಿಟರ್ನ್ಸ್. ಇನ್)
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications