ಎಲ್ಲೆಲ್ಲೂ ಪ್ರಾವಿಡೆಂಟ್ ಫಂಡ್ ನದ್ದೆ ಗಲಾಟೆ, ಗೊಂದಲ. ಅದನ್ನು ಒತ್ತಟ್ಟಿಗೆ ಇಡಿ. ಹೊಸ ನಿಯಮಕ್ಕೆ ಮುಂದಾಗಿದ್ದ ಕೇಂದ್ರ ಸರ್ಕಾರ ಕಾರ್ಮಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ನಿಯಮಾವಳಿಗೆ ತಾತ್ಕಾಲಿಕ ತಡೆ ನೀಡಿದೆ.
ಬೆಂಗಳೂರು ಹೊತ್ತಿ ಉರಿದ ನಂತರ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ನಿಯಮಕ್ಕೆ ತಾತ್ಕಾಲಿಕ ತಡೆ ನೀಡಿದ್ದು ಟ್ರಸ್ಟಿಗಳೊಂದಿಗೆ ಮಾತನಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕಾರ್ಮಿಕರ ವಿರುದ್ಧವಾದ ನೀತಿ ಜಾರಿ ಮಾಡುವುದಿಲ್ಲ ಎಂದು ಅಭಯ ನೀಡಿದ್ದಾರೆ.[ಕಾರ್ಮಿಕರನ್ನು ಕೆರಳಿಸಿದ ಕೇಂದ್ರದ ನೀತಿ ಯಾವುದು?]
ಆದರೆ ಯಾವ ಯಾವ ಕಾರಣಗಳ ಆಧಾರದಲ್ಲಿ ಪಿಎಫ್ ವಿಥ್ ಡ್ರಾ ಮಾಡಲು ಸಾಧ್ಯವಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಿದೆ. ಈ ಕೆಳಗಿನ ಎಂಟು ಕಾರಣಗಳನ್ನು ನೀಡಿ ಪಿಎಫ್ ವಿಥ್ ಡ್ರಾ ಮಾಡಲು ಅವಕಾಶವಿದೆ.
ಮದುವೆ/ ಶಿಕ್ಷಣ
ಖಾತೆದಾರ ವ್ಯಕ್ತಿ ತನ್ನ ಅಥವಾ ತನ್ನ ಮಗಳ, ಮಗನ, ಸಹೋದರಿಯ ಅಥವಾ ಸಹೋದರನ ಮದುವೆ ಕಾರಣ ನೀಡಿ ಪಿಎಫ್ ಹಣ ಪಡೆದುಕೊಳ್ಳಬಹುದು. ಶಿಕ್ಷಣಕ್ಕೆ ಸಂಬಂಧಿಸಿಯೂ ಇವರೆಲ್ಲರ ಆಧಾರದ ಮೇಲೆ ಹಣ ಪಡೆದುಕೊಳ್ಳಬಹುದು. ಕೆಲಸ ಮಾಡಲು ಆರಂಭಿಸಿ ಏಳು ವರ್ಷ ಕಳೆದಿರಬೇಕು. ತನ್ನಿಂದ ಎಪಿಎಫ್ ಪಡೆದುಕೊಂಡ ಹಣದಲ್ಲಿ ಶೇ. 50ನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಮನೆ ನಿರ್ಮಾಣ ಅಥವಾ ಖರೀದಿ
ಮನೆ ನಿರ್ಮಾಣ ಅಥವಾ ಖರೀದಿ ಕಾರಣಕ್ಕೆ ಪಿಎಫ್ ಹಣ ಪಡೆದುಕೊಳ್ಳಬಹುದು. 5 ವರ್ಷ ಸೇವೆ ಸಲ್ಲಿಸಿರಬೇಕು. ನಿಮ್ಮ ಅಥವಾ ನಿಮ್ಮ ಹೆಂಡತಿ ಅಥವಾ ಜಂಟಿ ಹೆಸರಲ್ಲಿ ಆಸ್ತಿ ನೋಂದಣಿಯಾಗಿರಬೇಕು ಎಂಬ ನಿಯಮಾವಳಿಗಳಿವೆ.
ಗೃಹ ಸಾಲ ತೀರಿಸಲು
ವ್ಯಕ್ತಿ ಜೀವನದಲ್ಲಿ ಒಮ್ಮೆ ಮಾತ್ರ ಗೃಹ ಸಾಲ ತೀರಿಸಲು ಹಣ ಪಡೆದುಕೊಳ್ಳಬಹುದು. 10 ವರ್ಷ ಸೇವೆ ಸಲ್ಲಿಸಿರಬೇಕು. ಮನೆ ವ್ಯಕ್ತಿ ಅಥವಾ ಅವನ ಹೆಂಡತಿಯ ಹೆಸರಲ್ಲಿ ಇರಬೇಕು.
ಆರೋಗ್ಯ ಕಾರಣ
ಆರೋಗ್ಯದ ಕಾರಣ ನೀಡಿ ನಿಮ್ಮ ಪಿಎಫ್ ಹಣವನ್ನು ಪಡೆದುಕೊಳ್ಳಲು ಸಾಧ್ಯವಿದೆ. ನಿಮ್ಮ ಕುಟುಂಬ ಸದಸ್ಯರಿಗೆ ಆರೋಗ್ಯ ಸಮಸ್ಯೆ ಎದುರಾದರೂ ಹಣ ಪಡೆದುಕೊಳ್ಳಬಹುದು. ಕೆಲಸ ಮಾಡಿದ ವರ್ಷದ ಲೆಕ್ಕ ಇಲ್ಲಿ ಗಮನಿಸಲಾಗುವುದಿಲ್ಲ. ವೈದ್ಯರು ಮತ್ತು ಇಎಸ್ ಐ ವರದಿ ಇಲ್ಲಿ ಪ್ರಮುಖವಾಗುತ್ತದೆ.
ನಿವೇಶನ ಅಥವಾ ಪ್ಲಾಟ್ ಖರೀದಿ
ನಿವೇಶನ ಅಥವಾ ಪ್ಲಾಟ್ ಖರೀದಿ ಮಾಡಲು ಪಿಎಫ್ ಹಣ ಪಡೆದುಕೊಳ್ಳಬಹುದು. ಸೇವೆ ಆರಂಭಿಸಿ 5 ವರ್ಷ ಕಳೆದಿರಬೇಕು. ನಿಮ್ಮ ಅಥವಾ ನಿಮ್ಮ ಹೆಂಡತಿ ಹೆಸರಿನಲ್ಲಿ ಅಥವಾ ಜಾಯಿಂಟ್ ಖಾತೆ ಹೆಸರಿಸಲ್ಲಿ ಆಸ್ತಿ ಖರೀದಿಯಾಗಬೇಕು ಎಂಬ ನಿಯಮವಿದೆ.
ಮನೆ ದುರಸ್ತಿ
ನಿಮ್ಮ ಮನೆದುರಸ್ತಿಗೆ ಸಂಬಂಧಿಸಿ ಒಮ್ಮೆ ಮಾತ್ರ ಹಣ ಪಡೆದುಕೊಳ್ಳಲು ಸಾಧ್ಯವಿದೆ. ಕೆಲಸ ಮಾಡಲು ಆರಂಭಿಸಿ 10 ವರ್ಷ ಕಳೆದಿರಬೇಕು. ಆಸ್ತಿ ನಿಮ್ಮ ಅಥವಾ ನಿಮ್ಮ ಕುಟುಂಬದವರ ಹೆಸರಿನಲ್ಲಿ ಇರಬೇಕು.
ನಿವೃತ್ತಿ ನಂತರ
ನಿವೃತ್ತಿ ನಂತರ ಅಷ್ಟೂ ಹಣ ಪಡೆದುಕೊಳ್ಳಬಹುದು. ವ್ಯಕ್ತಿ 54 ವರ್ಷ ಪೂರೈಸಿರಬೇಕು. ನಿವೃತ್ತಿಗೆ ಮುನ್ನ ಒಂದು ವರ್ಷ ಇರುವಾಗ ಹಣ ಪಡೆದುಕೊಳ್ಳಲು ಸಾಧ್ಯವಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ



Click it and Unblock the Notifications