ಮೇ 20ನೇ ತಾರೀಕಿನ ಸೋಮವಾರದಂದು ಚುನಾವಣಾ ನಂತರದ ಸಮೀಕ್ಷೆಗಳು ಹೊರಬಂದ ನಂತರ ಸೆನ್ಸೆಕ್ಸ್ ಪ್ರದರ್ಶಿಸಿದ 1421 ಪಾಯಿಂಟುಗಳ ಏರಿಕೆಯ ನಂತರದ ದಿನ ಮಾರಾಟದ ಒತ್ತಡದಿಂದ 382 ಪಾಯಿಂಟುಗಳ ಇಳಿಕೆ ಆಯಿತು. ಇದು ಒಂದು ಕಡೆ ಆಯಿತು. ಆದರೆ ಗುರುವಾರದ ಆರಂಭಿಕ ಕ್ಷಣಗಳಲ್ಲಿ ಎನ್ ಡಿಎ ಸಮೂಹವು ಜಯದತ್ತ ದಾಪುಗಾಲು ಹಾಕುತ್ತಿದ್ದಂತೆ ಸೆನ್ಸೆಕ್ಸ್ ಸಹ ಏರಿಕೆ ಕಾಣುತ್ತಾ ಹೋಯಿತು.
ಹಿಂದಿನ ದಿನದ 39,310 ಪಾಯಿಂಟುಗಳಿಂದ ಸೆನ್ಸೆಕ್ಸ್ ಏಕಮುಖವಾಗಿ ಏರಿಕೆ ಕಂಡು 40,124.96 ಪಾಯಿಂಟುಗಳನ್ನು ತಲುಪಿ, ಸರ್ವಕಾಲೀನ ದಾಖಲೆಯನ್ನು ನಿರ್ಮಿಸಿತು. ಇತ್ತೀಚಿನ ಒಂದು ಟ್ರೆಂಡ್ ಅಂದರೆ ಪ್ರತಿ ಬಾರಿ ಸೆನ್ಸೆಕ್ಸ್ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡ ನಂತರದಲ್ಲಿ ಭರ್ಜರಿ ಕುಸಿತವನ್ನು ಕಾಣುತ್ತಿದೆ.
ಹಿಂದಿನ ವರ್ಷ ಆಗಸ್ಟ್ ನಲ್ಲಿ 39,989 ಪಾಯಿಂಟುಗಳನ್ನು ತಲುಪಿ, ಅಕ್ಟೊಬರ್ ತಿಂಗಳವರೆಗೂ ಸತತವಾದ ಕುಸಿತ ಕಂಡು ಸುಮಾರು ಆರು ಸಾವಿರ ಪಾಯಿಂಟುಗಳ ಇಳಿಕೆ ಪ್ರದರ್ಶಿಸಿತು. ನಂತರ ಚೇತರಿಕೆಯ ಹಾದಿಯಲ್ಲಿ ಸಾಗಿ 18ನೇ ಏಪ್ರಿಲ್ ನಂದು 39,487 ಪಾಯಿಂಟುಗಳ ಗರಿಷ್ಠ ತಲುಪಿ, ಹದಿನೈದು ದಿನಗಳಲ್ಲಿ ಸುಮಾರು ಎರಡು ಸಾವಿರ ಪಾಯಿಂಟುಗಳನ್ನು ಕಳೆದುಕೊಂಡಿತು.
ಮತ್ತೆ ಅಲ್ಲಿಂದ ಪುಟಿದೆದ್ದು, ಮಂಗಳವಾರ 39,571.73 ಪಾಯಿಂಟುಗಳಿಗೆ ಏರಿಕೆ ಪಡೆದು ಮತ್ತೆ ಹೊಸ ದಾಖಲೆ ಬರೆದಿದೆ. ಇಂದು ಪ್ರಪ್ರಥಮ ಬಾರಿಗೆ 40 ಸಾವಿರದ ಗಡಿ ದಾಟಿ ವಿಜೃಂಭಿಸಿದೆ. ಆದರೆ ಅಲ್ಲಿಯೂ ಸ್ಥಿರವಾದ ಸರಕಾರದ ಬಗ್ಗೆ ಖಾತ್ರಿಯಾದರೂ ಸ್ಥಿರತೆ ಕಾಣದಾಯಿತು. ಏಕೆ ಹೀಗೆ ಅಂದರೆ ಸದ್ಯದ ಪರಿಸ್ಥಿತಿಯಲ್ಲಿ ಯಾರಿಗೂ 'ಲಾಯಲ್ಟಿ' ಬೇಕಾಗಿಲ್ಲ. ಎಲ್ಲರೂ ಎಲ್ಲಿ ' ರಾಯಲ್ಟಿ' ದೊರೆಯುತ್ತದೆ ಎಂದು ಹುಡುಕಾಡುವ ಕಾಲವಿದಾಗಿದೆ.
ವಿಶ್ಲೇಷಣೆಗಳನ್ನೂ ಮೀರಿದ ರೀತಿ
ಷೇರುಪೇಟೆಯಲ್ಲಿ ಹೂಡಿಕೆದಾರರು ಟೆಕ್ನಿಕಲ್ ಮತ್ತು ಫಂಡಮೆಂಟಲ್ ಅನಾಲಿಸಿಸ್ ಎಂಬ ಎರಡು ವಿಧದ ಚಟುವಟಿಕೆಯಲ್ಲಿ ಇರುತ್ತಾರೆ. ಆದರೆ ಈಗಿನ ದಿನಗಳಲ್ಲಿ ಇವೆರಡು ವಿಧಗಳು ಯಾವುದೇ ರೀತಿಯ ಅವಕಾಶಗಳನ್ನು ಒದಗಿಸದೆ ಒಂದು ವಿಶಿಷ್ಟ ರೀತಿಯ ಚಲನೆಯನ್ನು ಪ್ರದರ್ಶಿಸುವಂತೆ ವಹಿವಾಟುದಾರರು ಚಟುವಟಿಕೆಯನ್ನು ನಿರ್ವಹಿಸುವಂತಿದೆ. ಇತ್ತೀಚಿನ ದಿನಗಳಲ್ಲಿ ಆಗಿಂದಾಗ್ಗೆ ಅಗ್ರಮಾನ್ಯ ಕಂಪೆನಿಗಳ ಷೇರುಗಳಲ್ಲಿ ದಿಢೀರ್ ಕುಸಿತವನ್ನು ಮಿಂಚಿನ ವೇಗದಲ್ಲಿ ಕುಸಿಯುವಂತೆ ಮಾಡಿ, ನಂತರ ಶರವೇಗದಲ್ಲಿ ಏರಿಕೆಗೆ ಹಿಂದಿರುಗುವಂತೆ ಮಾಡಲಾಗುತ್ತಿದೆ. ಇದಕ್ಕೆ ಉದಾಹರಣೆ ಅಂದರೆ, ಕೆಲವು ದಿನಗಳ ಹಿಂದೆ ಸನ್ ಫಾರ್ಮಾ ಪ್ರದರ್ಶಿಸಿದ ದಿನದ ಕೊನೆಯ ಅರ್ಧ ಗಂಟೆಯ ಕ್ಷಣಗಳಲ್ಲಿ ಸುಮಾರು ರೂ. 350 ರವರೆಗೂ ಭಾರಿ ಕುಸಿತ ನಂತರ ತಕ್ಷಣ ಚೇತರಿಕೆ ಕಂಡು ರೂ.400 ರ ಗಡಿ ದಾಟುವಂತೆ ಮಾಡಿದ್ದು ಈ ಎಲ್ಲಾ ವಿಶ್ಲೇಷಣೆಗಳನ್ನು ಮೀರಿಸಿದ ರೀತಿಯದಾಗಿದೆ. ಅದೇ ರೀತಿ ಕೆಲವು ತಿಂಗಳ ಹಿಂದೆ ಡಾಕ್ಟರ್ ರೆಡ್ಡಿಸ್ ಲ್ಯಾಬ್, ಮಾರ್ಚ್ ನಲ್ಲಿ ಎಸ್ ಬಿಐ ಲೈಫ್ ಇಂಶುರನ್ಸ್ ಸಹ ಇದೆ ರೀತಿ ಪ್ರದರ್ಶಿಸಿವೆ. ಅಂದರೆ ಈಗಿನ ಚಲನೆಗಳು ಸಾಮಾನ್ಯರ ಹಿಡಿತಕ್ಕೂ, ಊಹೆಗೂ ಸಿಗದ ರೀತಿಯಲ್ಲಿ ನಡೆಯುತ್ತಿವೆ.
ಮಾರಾಟದ ಒತ್ತಡಕ್ಕೆ ಸಿಲುಕಿತು
ಇಂದು ದಿನದ ಆರಂಭದ ಚಟುವಟಿಕೆಯಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಷೇರಿನ ಬೆಲೆ ರೂ. 2,410 ರ ಸಮೀಪದಿಂದ ರೂ.2,439 ರವರೆಗೂ ಏರಿಕೆ ಪ್ರದರ್ಶಿಸಿ ನಂತರ ಸ್ಥಿರತೆಯ ಸರಕಾರ ಎಂಬ ಭಾವನಾತ್ಮಕ ವಿಚಾರದ ವಾತಾವರಣದಲ್ಲಿ ವಹಿವಾಟುದಾರರು ಹೆಚ್ಚಿನ ಮಾರಾಟದಿಂದ ತಮ್ಮ ಲಾಭ ಗಳಿಕೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಷೇರಿನ ಬೆಲೆ ವಾರ್ಷಿಕ ಗರಿಷ್ಠದ ಸಮೀಪಕ್ಕೆ ಬಂದಾಗ ಈ ಕುಸಿತ ಕಂಡಿದೆ. ಇನ್ನು ಇತ್ತೀಚಿಗೆ ಇಂಡಸ್ ಇಂಡ್ ಬ್ಯಾಂಕ್ ಹಿಂದಿನ ವರ್ಷದ ತನ್ನ ಸಾಧನೆಯ ಅಂಕಿ- ಅಂಶಗಳನ್ನು ಪ್ರಕಟಿಸಿತು. ಸಾಧನೆಯು ತೃಪ್ತಿಕರವಾಗಿಲ್ಲವೆಂದರು ಸಹ ರೂ.1,366ರ ಕನಿಷ್ಠದಿಂದ ರೂ. 1,639ರವರೆಗೆ ಇಂದು ಚಿಮ್ಮಿದೆ. ಈ ರೀತಿಯ ಗರಿಷ್ಠ ತಲುಪಲು ಕಾರಣ ಪೇಟೆಯಲ್ಲಿ ಮೂಡಿರುವ ಭಾವನಾತ್ಮಕ ಅಭಿಪ್ರಾಯವಾಗಿತ್ತು. ಆದರೆ ಆ ಷೇರಿನ ಬೆಲೆ ಮಾರಾಟದ ಒತ್ತಡದಿಂದ ರೂ.1,544 ರವರೆಗೂ ಕುಸಿದು, ರೂ. 1,596 ರಲ್ಲಿ ಕೊನೆಗೊಂಡಿತು.
ಷೇರುಪೇಟೆ ಎಂಬುದು ವ್ಯಾವಹಾರಿಕ ತಾಣ
ಇದೇ ರೀತಿ ರಿಲಯನ್ಸ್ ಇಂಡಸ್ಟ್ರೀಸ್ ಸುಮಾರು ರೂ.68ರಷ್ಟು, ಬಜಾಜ್ ಫೈನಾನ್ಸ್ ರೂ. 174 ರಷ್ಟು, ಟಾಟಾ ಸ್ಟೀಲ್ ರೂ.23 ರಷ್ಟು, ಲಾರ್ಸನ್ ಅಂಡ್ ಟೊಬ್ರೋ ಸುಮಾರು ರೂ.94 ರಷ್ಟು ಏರಿಳಿತ ಪ್ರದರ್ಶಿಸಿವೆ. ಈ ಏರಿಳಿತಗಳನ್ನು ಗಮನಿಸಿದಾಗ ಒಂದು ಅಂಶ ದೃಢಪಡುತ್ತದೆ, ಅದೆಂದರೆ ಇಂದಿನ ಷೇರುಪೇಟೆಗಳು ಹೂಡಿಕೆಯ ವೇದಿಕೆಯಾಗಿರದೆ ಅವು ಕೇವಲ ಒಂದು ರೀತಿಯ ವ್ಯಾವಹಾರಿಕ ತಾಣಗಳಾಗಿವೆ. ಹಿಂದಿನ ದೀರ್ಘಕಾಲೀನ ಹೂಡಿಕೆ ಎಂಬ ಭ್ರಮೆಯಿಂದ ಹೊರಬಂದು ವ್ಯಾವಹಾರಿಕ ರೀತಿಯಲ್ಲಿ ಚಟುವಟಿಕೆ ನಡೆಸಿದಲ್ಲಿ ಅನೇಕ ಅವಕಾಶಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು. ಟಾಟಾ ಸ್ಟೀಲ್ ಕಂಪನಿ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ರೂ.560 ರ ಗರಿಷ್ಠದಿಂದ ರೂ.456ರ ವರೆಗೂ ಕುಸಿದಿತ್ತು. ಇದಕ್ಕೆ ಕಾರಣ ಅಂತರ ರಾಷ್ಟ್ರೀಯ ಮಟ್ಟದ 'ಟ್ರೇಡ್ ವಾರ್' ಕಾರಣವಾದರೂ ಈ ಒಂದು ವಾರದಲ್ಲಿ ಹೆಚ್ಚಿನ ಏರಿಳಿತಗಳನ್ನು ಪ್ರದರ್ಶಿಸಿ ಅಲ್ಪಕಾಲೀನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ.
ಬಂಡವಾಳ ರಕ್ಷಿಸಿಕೊಳ್ಳಲು ಹೆಚ್ಚಿನ ಒತ್ತು
ಪೇಟೆಯ ವಿಸ್ಮಯಕಾರಿ ಅಂಶವೆಂದರೆ ಇಂತಹ ಉತ್ತಮವಾದ ವಾತಾವರಣದಲ್ಲೂ ಬಯೋಕಾನ್ ಕಂಪನಿ 1:1ರ ಅನುಪಾತದ ಬೋನಸ್ ಘೋಷಿಸಿದ ನಂತರದಲ್ಲಿ ಷೇರಿನ ಬೆಲೆ ರೂ.630 ರಿಂದ ರೂ.520 ರವರೆಗೂ ಕುಸಿದಿದೆಯಾದರೂ ಪೇಟೆಯು ಗಮನಿಸುತ್ತಿಲ್ಲ. ಪ್ರತಿ ಷೇರಿಗೆ ರೂ.35 ರ ಡಿವಿಡೆಂಡ್ ಪ್ರಕಟಿಸಿರುವ ಗ್ರಾಫೈಟ್ ಇಂಡಿಯಾ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ಹೆಚ್ಚಿನ ಕುಸಿತ ಕಂಡಿದ್ದರೂ ಅದಕ್ಕೆ ಡಿವಿಡೆಂಡ್ ಪ್ರಕಟಿಸಿದ ನಂತರವೂ ಹೆಚ್ಚಿನ ಬೆಂಬಲವಿಲ್ಲ. ಆದರೆ ಷೇರು ಪೇಟೆಯಲ್ಲಿ ಯಶಸ್ಸು ಕಾಣಬೇಕಾದರೆ ಕಂಪೆನಿಗಳ ಅಂತರ್ಗತ ಸಾಧನೆಯೊಂದಿಗೆ, ಕಂಪೆನಿಗಳು ವಿತರಿಸುವ ಕಾರ್ಪೊರೇಟ್ ಫಲಗಳಾದ ಲಾಭಾಂಶ, ಬೋನಸ್ ಷೇರು ಮುಂತಾದವುಗಳನ್ನು ವಿತರಿಸುವ ಕಂಪೆನಿಗಳ ಷೇರಿನ ಬೆಲೆಗಳು ಕುಸಿತ ಕಂಡರೆ ಅದು ಹೂಡಿಕೆಗೆ ಉತ್ತಮ ಅವಕಾಶವೆಂದು ಆಯ್ಕೆ ಮಾಡಿಕೊಂಡಲ್ಲಿ ಸ್ವಲ್ಪಮಟ್ಟಿನ ಯಶಸ್ಸು ಕಾಣಬಹುದು. ಯಾವುದೇ ಕಾರಣಕ್ಕಾಗಿ ದಿಢೀರ್ ಏರಿಕೆ ಕಂಡಲ್ಲಿ ಮಾರಾಟ ಮಾಡುವುದು ಒಂದು ರಕ್ಷಣಾತ್ಮಕ ಚಟುವಟಿಕೆ ಎನಿಸುತ್ತದೆ. ಪ್ರಮುಖವಾಗಿ ಬಂಡವಾಳವನ್ನು ರಕ್ಷಿಸಿಕೊಂಡು, ನಂತರ ಬೆಳೆಸಿಕೊಳ್ಳುವ ಪ್ರಕ್ರಿಯೆಗೆ ಕೈ ಹಾಕಬೇಕು.
More From GoodReturns

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Stock Market Crash: ಯುದ್ಧದ ಎಫೆಕ್ಟ್, ಷೇರು ಮಾರುಕಟ್ಟೆ ಕುಸಿತ; ಒಂದೇ ದಿನದಲ್ಲಿ 9 ಲಕ್ಷ ಕೋಟಿ ನಷ್ಟ!

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications