ಅಟಲ್ ಪಿಂಚಣಿ ಯೋಜನೆ (ಎಪಿವೈ) ಅಸಂಘಟಿತ ವಲಯದ ಕಾರ್ಮಿಕರನ್ನು ತಮ್ಮ ನಿವೃತ್ತಿ ಜೀವನಕ್ಕಾಗಿ ಸ್ವಯಂಪ್ರೇರಣೆಯಿಂದ ಉಳಿತಾಯ ಮಾಡಲು ಪ್ರೋತ್ಸಾಹಿಸುವ ಯೋಜನೆಯಾಗಿದೆ ಎಂದು ನ್ಯಾಷನಲ್ ಸೆಕ್ಯುರಿಟಿಸ್ ಡಿಪಾಸಿಟರಿ (ಎನ್ಎಸ್ಡಿಎಲ್) ವರದಿ ಮಾಡಿದೆ.
ಅಟಲ್ ಪಿಂಚಣಿ ಯೋಜನೆ (ಎಪಿವೈ) ಅಸಂಘಟಿತ ವಲಯದ ಕಾರ್ಮಿಕರನ್ನು ತಮ್ಮ ನಿವೃತ್ತಿ ಜೀವನಕ್ಕಾಗಿ ಸ್ವಯಂಪ್ರೇರಣೆಯಿಂದ ಉಳಿತಾಯ ಮಾಡಲು ಪ್ರೋತ್ಸಾಹಿಸುವ ಯೋಜನೆಯಾಗಿದೆ ಎಂದು ನ್ಯಾಷನಲ್ ಸೆಕ್ಯುರಿಟಿಸ್ ಡಿಪಾಸಿಟರಿ (ಎನ್ಎಸ್ಡಿಎಲ್) ವರದಿ ಮಾಡಿದೆ.
ಕೇಂದ್ರ ಸರ್ಕಾರದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಎಪಿವೈ ಮುಖ್ಯವಾದದ್ದು. ನಿವೃತ್ತಿ ಭದ್ರತೆ ಒದಗಿಸುವ ಧ್ಯೇಯದೊಂದಿಗೆ ಈ ಯೋಜನೆಯನ್ನು ಆರಂಭಿಸಲಾಗಿದೆ. ಮೂಲಭೂತವಾಗಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾದಿಕಾರ ಅಡಿಯಲ್ಲಿ ಯೋಜನೆಗೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆ.
ಪಿಂಚಣಿ ರೂಪದಲ್ಲಿ ಒಂದಿಷ್ಟು ಉಳಿತಾಯ ಮಾಡಲು ಜಾರಿಗೊಳಿಸಿರುವ ಅಟಲ್ ಪಿಂಚಣಿ ಯೋಜನೆಯ (APY) ಪ್ರಮುಖ ಕೀ ಪಾಯಿಂಟ್ಸ್ ಗಳ ವಿವರ ಇಲ್ಲಿ ನೀಡಲಾಗಿದೆ.
1. ಪಿಂಚಣಿ ಮೊತ್ತ
ಅಟಲ್ ಪಿಂಚಣಿ ಯೋಜನೆಯಡಿ (APY) ಚಂದಾದಾರರು 60 ವರ್ಷ ವಯಸ್ಸು ದಾಟಿದ ಬಳಿಕೆ ಮಾಸಿಕ ಪಿಂಚಣಿ ಕನಿಷ್ಠ ರೂ. 1000 ದಿಂದ ರೂ. 5000 ವರೆಗೆ ಮೊತ್ತ ಪಡೆಯಬಹುದು. ಎಪಿವೈ ಯೋಜನೆಗೆ ಪಾವತಿ ಮಾಡುವ ಪ್ರೀಮಿಯಂ ಮೊತ್ತ, ಪಡೆಯುವ ಪಿಂಚಣಿಯ ಮೊತ್ತ ನೋಂದಣಿಯಾದ ವಯಸ್ಸಿನ ಮೇಲೆ ಆಧಾರದ ಮೇಲೆ ನಿರ್ಧಾರವಾಗಲಿದೆ.
2. ವಯಸ್ಸು ಮತ್ತು ತಿಂಗಳ ಕೊಡುಗೆ
ಚಂದಾದಾರರು ಯೋಜನೆಗೆ ನೋಂದಣಿಯಾದ ವಯಸ್ಸು ಮತ್ತು ಆಯ್ಕೆ ಮಾಡಿಕೊಂಡ ಪಿಂಚಣಿ ಮೊತ್ತವನ್ನು ಅವಲಂಬಿಸಿ ಮಾಸಿಕವಾಗಿ ರೂ. 42 ರಿಂದ ರೂ. 210 ವರೆಗೆ ಪಾವತಿ ಮಾಡುತ್ತಾ ಹೋಗಬೇಕು.
ಎಪಿವೈ ಯೋಜನೆಗೆ 18 ರಿಂದ 40 ವಯಸ್ಸಿನ ಎಲ್ಲಾ ಭಾರತೀಯರು ಅರ್ಹರಾಗಿರುತ್ತಾರೆ. ೧೮ನೇ ವಯಸ್ಸಿಗೆ ನೋಂದಣಿಯಾದ ಚಂದಾದಾರರು ರೂ. 42 ಹಾಗೂ ರೂ. 210 ಮಾಸಿಕವಾಗಿ ಪಾವತಿ ಮಾಡುತ್ತಾ ಹೋದರೆ ಪ್ರತಿ ತಿಂಗಳು ಕ್ರಮವಾಗಿ ರೂ. 1,000 ದಿಂದ 5,000 ವರೆಗೆ ಪಿಂಚಣಿ ಪಡೆಯಲು ಅವಕಾಶವಿರುತ್ತದೆ.
3. ಪಾವತಿ ವಿಧಾನ
ಚಂದಾದಾರರು ಅಟಲ್ ಪಿಂಚಣಿ ಯೋಜನೆಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಮೂರು ವಿಧಗಳಲ್ಲಿ ಪಾವತಿ ಮಾಡಬಹುದಾಗಿದೆ. ಮಾಸಿಕ, ತ್ರೈಮಾಸಿಕ ಹಾಗೂ ಅರ್ಧ ವಾರ್ಷಿಕ.
4. ಸಂಗಾತಿಗೆ ಪಿಂಚಣಿ
ಅಟಲ್ ಪಿಂಚಣಿ ಯೋಜನೆಯಡಿ ಪಿಂಚಣಿ ಹಣ ಸಿಗಲಿದ್ದು, ಚಂದಾದಾರರ ನಿಧನದ ನಂತರ ಅವರ ಜೀವನ ಸಂಗಾತಿಗೆ ದೊರಕಲಿದೆ. ಚಂದಾದಾರರಿಗೆ 60 ವರ್ಷ ತುಂಬುವ ಸಂದರ್ಭ ಸಂಗ್ರಹವಾದ ಪಿಂಚಣಿಯ ಮೊತ್ತವನ್ನು ಅವರ ಸಂಗಾತಿಗೆ ನೀಡಲಾಗುತ್ತದೆ.
5. ಅವಧಿಗೂ ಮುನ್ನ ಹಣ ಹಿಂಪಡೆಯರಿ
ಅಕಾಲಿಕ ಸಾವು/ ಮಾರಣಾಂತಿಕ ಕಾಯಿಲೆಯಂಥ ಸಂದರ್ಭಗಳಲ್ಲಿ ಪಿಂಚಣಿ ಯೋಜನೆಯೆ ಚಂದಾದಾರರು 60 ವರ್ಷಕ್ಕಿಂತ ಮುಂಚೆಯೇ ಹಣವನ್ನು ಹಿಂಪಡೆಯಬಹದು.
ತೆರಿಗೆ ವಿನಾಯಿತಿ
ಆದಾಯ ತೆರಿಗೆ ಕಾಯ್ದೆ 80 ಸಿಸಿಡಿ (1ಬಿ) ಪ್ರಕಾರ ಎಪಿವೈ ಯೋಜನೆಯಲ್ಲಿ ಹೂಡಿಕೆ ಮಾಡಲಾಗುವ ಮೊತ್ತದ ಗರಿಷ್ಠ 50 ಸಾವಿರ ರೂಪಾಯಿಗಳಿಗೆ ಆದಾಯ ತೆರಿಗೆ ವಿನಾಯಿತಿ ಹಾಗೂ ಕಾಯ್ದೆ 80ಸಿ ಪ್ರಕಾರ ಪ್ರತಿ ವರ್ಷ 1.5 ಲಕ್ಷ ರೂ. ಅಥವಾ ಅದಕ್ಕೂ ಮೇಲ್ಪಟ್ಟ ಮೊತ್ತಕ್ಕೆ ಆದಾಯ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳಬಹುದು.
More From GoodReturns

Retirement with Savings Tips: ನಿವೃತ್ತಿ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ಈ ಸ್ಕೀಮ್ನಲ್ಲಿ ಇನ್ವೆಸ್ಟ್ ಮಾಡಿ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Money Tips: ದಂಪತಿ ಜೊತೆಯಾಗಿ ಈ ರೀತಿ ಇಎಂಐ ಪಾವತಿಸಿ! ನಿಮ್ಮಷ್ಟು ಬುದ್ಧಿವಂತರು ಯಾರೂ ಇರಲ್ಲ

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!



Click it and Unblock the Notifications