ಅಂಕಿತಿ ಬೋಸ್ ಅವರು ಭಾರತದ ಯುವ ಉದ್ಯಮಿಯಾಗಿದ್ದು, ಝಿಲಿಂಗೋ ಎಂಬ ಬಹುರಾಷ್ಟ್ರೀಯ ತಂತ್ರಜ್ಞಾನ ಹಾಗೂ ವಾಣಿಜ್ಯ ಸ್ಟಾರ್ಟಪ್ ಅನ್ನು ಸ್ಥಾಪಿಸುವುದಕ್ಕೆ ಅವರು ಧ್ರುವ್ ಕಪೂರ್ ಅವರೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದರು. ವರದಿಗಳ ಪ್ರಕಾರ 2019ರಲ್ಲಿ ಝಿಲಿಂಗೋ ಅವರ ಗರಿಷ್ಠ ಆಸ್ತಿ ಮೌಲ್ಯವು ಸುಮಾರು 7000 ಕೋಟಿ ರೂ. ತಲುಪಿದ್ದು, ಅದರ ಯಶಸ್ವಿನ ಹಿಂದೆ ಅಂಕಿತಿ ಬೋಸ್ ಅವರ ದೊಡ್ಡ ಪರಿಶ್ರಮ ಹಾಗೂ ಪಾತ್ರವಿದೆ.
ಈ ನಡುವೆ ಕಂಪನಿಯನ್ನು ಎತ್ತರಕ್ಕೆ ಕೊಂಡೊಯ್ದ ನಂತರ ಬೋಸ್ ಅವರ ವಿರುದ್ಧ ಹಣಕಾಸಿನಲ್ಲಿ ಅಕ್ರಮ ಎಸಗುವ ಮೂಲಕ ಕಂಪನಿಗೆ ವಂಚಿಸಿದ ಆರೋಪದ ಮೇಲೆ 2022ರಲ್ಲಿ ಅವರನ್ನು ಸಿಇಒ ಸ್ಥಾನದಿಂದ ಅಮಾನತುಗೊಳಿಸಲಾಯಿತು. ಆ ಮೂಲಕ ಸ್ವಂತ ಸ್ಟಾರ್ಟಪ್ನಿಂದಲೇ ಹೊರಗೆಬರಬೇಕಾಗಿ ಬಂತು. ವರದಿಗಳ ಪ್ರಕಾರ, ಅಂಕಿತಿ ಬೋಸ್ ಅವರು ಕಂಪನಿ ಆಡಳಿತ ಮಂಡಳಿ ಅನುಮತಿ ಇಲ್ಲದೆ ತಮ್ಮ ವೇತನವನ್ನು 10 ಪಟ್ಟು ಹೆಚ್ಚಿಸಿದ್ದರು. ಹಲವು ವೆಂಡರ್ಗಳಿಗೆ ದಾಖಲೆಗಳಿಲ್ಲದ ಸುಮಾರು 10 ಮಿಲಿಯನ್ ಡಾಲರ್ ಹಣ ಪಾವತಿಸಿದ ಆರೋಪ ಕೂಡ ಎದುರಾಗಿತ್ತು.
ಪ್ರಸ್ತುತ ಹೂಡಿಕೆದಾರ ಮಹೇಶ್ ಮೂರ್ತಿ ವಿರುದ್ಧ ಬೋಸ್ ಅವರು 100 ಮಿಲಿಯನ್ ಡಾಲರ್ನಷ್ಟುಮೊತ್ತದ ಕಾನೂನು ಸಮರ ನಡೆಯುತ್ತಿದ್ದಾರೆ. ಅಂಕಿತಿ ಬೋಸ್ ಅವರು ಡೆಹರೂಡಾನ್ನಲ್ಲಿ ಜನಿಸಿದ್ದು, ಅವರು ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಮುಂಬೈನ ಕೇಂಬ್ರಿಡ್ಜ್ ಸ್ಕೂಲ್ನಿಂದ ಪಡೆದುಕೊಂಡಿದ್ದಾರೆ. ಬಳಿಕ ಪದವಿ ಶಿಕ್ಷಣವನ್ನು ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಿಂದ ಪಡೆದುಕೊಂಡರು. ಪದವಿ ಬಳಿಕ ಅವರು ಬೆಂಗಳೂರಿನಲ್ಲಿ ಮೆಕಿನ್ಸೆ ಅಂಡ್ ಕಂಪನಿ ಹಾಗೂ ಸಿಕ್ವೊಯಾ ಕಾಪಿಟಲ್ ಕಂಪನಿಯಲ್ಲಿ ಕೆಲಸ ಪ್ರಾರಂಭಿಸಿದ್ದರು.
ವೀಕೆಂಡ್ ಮಾರ್ಕೆಟ್ನಲ್ಲಿ ಓಡಾಡುತ್ತಿದ್ದಾಗ ಹಲವು ಸಣ್ಣ-ಪುಟ್ಟ ಅಂಗಡಿಗಳಲ್ಲಿ ಆನ್ಲೈನ್ ವ್ಯವಸ್ಥೆಯ ಕೊರತೆಯಿರುವುದನ್ನು ಗಮನಿಸಿದ್ದರು. ಇದು ಸಿಕ್ವೊಯಾ ಕ್ಯಾಪಿಟಲ್ನಲ್ಲಿ ಹೂಡಿಕೆ ವಿಶ್ಲೇಷಕರ ಹುದ್ದೆಯನ್ನು ತೊರೆದು ಝೆಲಿಂಗೋವನ್ನು ಪ್ರಾರಂಭಿಸುವುದಕ್ಕೆ ಬೋಸ್ ಅವರಿಗೆ ಪ್ರೇರಣೆಯಾಗಿತ್ತು.

ಬೋಸ್ ಅವರು 2018ರಲ್ಲಿ ಫೋರ್ಬ್ಸ್ ಏಷ್ಯಾ-30 ಅಂಡರ್ನ 30 ಮಂದಿಯ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ, ಫೋರ್ಚೂನ್ಸ್ 40 ಅಂಡರ್ನ 40 ಮಂದಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಈ ರೀತಿ, ಅಂಕಿತಾ ಬೋಸ್ ಅವರು ಏಷ್ಯಾದ ಇ-ಕಾಮರ್ಸ್ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡುವ ಮೂಲಕ ಗಮನಸೆಳೆದಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications