ಪುಣೆ, ಜುಲೈ 19: ದಿನೇ ದಿನೇ ಟೊಮೇಟೊ ಬೆಲೆ ಗಗನಮುಖಿಯಾಗಿದ್ದು, ರೈತರಿಗೆ ವರದಾನವಾಗಿ ಮಾರ್ಪಟ್ಟಿದೆ. ಮಹಾರಾಷ್ಟ್ರದ ಪುಣೆಯ ರೈತರೊಬ್ಬರು ಹಲವು ಸವಾಲುಗಳನ್ನು ಮೆಟ್ಟಿನಿಂತು ಕೇವಲ ಒಂದು ತಿಂಗಳ ಅವಧಿಯಲ್ಲಿ ಟೊಮೇಟೊ ಮಾರಾಟ ಮಾಡಿ 3 ಕೋಟಿ ರೂಪಾಯಿ ಸಂಪಾದನೆ ಮಾಡಿ ಈಗ ಕೋಟ್ಯಾಧಿಪತಿಯಾಗಿದ್ದಾರೆ.
ಪುಣೆ ಜಿಲ್ಲೆಯ ಜುನ್ನಾರ್ ತೆಹಸಿಲ್ನ ಪಚ್ಘರ್ ಗ್ರಾಮದ ರೈತ ಈಶ್ವರ್ ಗೇಕರ್ (36) ಈ ವರ್ಷದ ಮೇ ತಿಂಗಳಲ್ಲಿ ಕಡಿಮೆ ಬೆಲೆಯಿಂದಾಗಿ ಹೆಚ್ಚಿನ ಪ್ರಮಾಣದ ಟೊಮೇಟೊವನ್ನು ರಸ್ತೆಗೆ ಸುರಿಯುವ ಪರಿಸ್ಥಿತಿಗೆ ಬಂದಿದ್ದರು. ಆದರೆ ಈ ಹಿನ್ನಡೆಯಿಂದ ವಿಚಲಿತರಾಗದೆ ಮತ್ತೆ ಟೊಮೇಟೊವನ್ನು ತಮ್ಮ 12 ಎಕರೆ ಜಮೀನಿನಲ್ಲಿ ದಣಿವರಿಯಿಲ್ಲದೆ ಬೆಳೆದು ಕೆಲಸ ಮಾಡಿದರು.

ಇದೀಗ ಟೊಮೇಟೊ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಜೂನ್ 11ರಿಂದ ಜುಲೈ 18ರ ನಡುವೆ ತಮ್ಮ ಟೊಮೇಟೊ ಬೆಳೆ ಮಾರಾಟದ ಮೂಲಕ ಮೂರು ಕೋಟಿ ರೂಪಾಯಿ ಗಳಿಸಿರುವುದಾಗಿ ಗೇಕರ್ ತಿಳಿಸಿ ತಮ್ಮ ಶ್ರಮಕ್ಕೆ ಫಲ ಸಿಕ್ಕಿದೆ ಎಂದು ಹೇಳಿದರು. ಈ ಅವಧಿಯಲ್ಲಿ ಜುನ್ನಾರ್ ತಾಲೂಕಿನ ನಾರಾಯಣಗಾಂವ್ನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) 18,000 ಕ್ರೇಟ್ ಟೊಮೆಟೊಗಳನ್ನು (ಪ್ರತಿ ಕ್ರೇಟ್ 20 ಕೆಜಿ ಟೊಮ್ಯಾಟೊ) ಮೂರು ಕೋಟಿ ರೂ.ಗೆ ಮಾರಾಟ ಮಾಡಿರುವುದಾಗಿ ಅವರು ಹೇಳಿದರು.
ಸಾಗಣೆ ಸೇರಿದಂತೆ ಸಾಗುವಳಿ ವೆಚ್ಚ 40 ಲಕ್ಷ ರೂಪಾಯಿಯಾಗಿದೆ ನನಗೆ 18 ಎಕರೆ ಜಮೀನಿದ್ದು, 12 ಎಕರೆಯಲ್ಲಿ ಟೊಮೇಟೊ ಬೆಳೆಯುತ್ತೇನೆ. ಸರಿಸುಮಾರು 4,000 ಕ್ರೇಟ್ಗಳ ಉಳಿದ ಉತ್ಪನ್ನವನ್ನು ಮಾರಾಟ ಮಾಡುವ ಮೂಲಕ ತಾನು ಇನ್ನೂ 50 ಲಕ್ಷ ಸಂಪಾದಿಸುವ ಗುರಿ ಇಟ್ಟುಕೊಂಡಿರುವುದಾಗಿ ಅವರು ಹೇಳಿದ್ದಾರೆ.
ನಾನು 18 ಎಕರೆ ಜಮೀನನ್ನು ಹೊಂದಿದ್ದು, 12 ಎಕರೆಯಲ್ಲಿ ಟೊಮೆಟೊ ಬೆಳೆ ಬೆಳೆದಿದ್ದೇನೆ, ಜೂನ್ 11 ರಿಂದ 18,000 ಕ್ರೇಟ್ಗಳನ್ನು ಮಾರಾಟ ಮಾಡಿದ್ದೇನೆ. ಇದುವರೆಗೆ 3 ಕೋಟಿ ರೂಪಾಯಿ ಗಳಿಸಿದ್ದೇನೆ. ಜೂನ್ 11 ರಂದು ಒಂದು ಕ್ರೇಟ್ಗೆ 770 ರೂ (ಕೆಜಿಗೆ ರೂ 37 ರಿಂದ 38 ರೂ), ಮತ್ತು ಜುಲೈ 18 ರಂದು ಟೊಮೇಟೊವನ್ನು ಕ್ರೇಟ್ಗೆ ರೂ 2,200 (ಕೆಜಿಗೆ ರೂ 110) ಮಾರಾಟ ಮಾಡಿದರು.

ಇದೀಗ ಉತ್ಪನ್ನದ ಮೇಲೆ ಉತ್ತಮ ಲಾಭಾಂಶವನ್ನು ಗೇಕರ್ ಪಡೆಯುತ್ತಿದ್ದಾರೆ. ಕಡಿಮೆ ಬೆಲೆಯಿಂದಾಗಿ ಎರಡು ತಿಂಗಳ ಹಿಂದೆ ಕಟಾವು ಮಾಡಿದ ಟೊಮೆಟೊಗಳನ್ನು ದೊಡ್ಡ ಪ್ರಮಾಣದಲ್ಲಿ ಸುರಿಯಬೇಕಾಯಿತು ಎಂಬುದನ್ನು ಅವರು ಈ ವೇಳೆ ನೆನಪಿಸಿಕೊಂಡರು.
ಟೊಮೇಟೊ ಬೆಳೆಗಾರರಿಗೆ ಇದು ಉತ್ತಮ ಸಮಯ. ಆದರೆ ನಾವು ಕೆಟ್ಟ ಸಮಯಗಳಿಗೆ ಸಾಕ್ಷಿಯಾಗಿದ್ದೇವೆ. ಮೇ ತಿಂಗಳಿನಲ್ಲಿ ಒಂದು ಎಕರೆ ಜಮೀನಿನಲ್ಲಿ ಟೊಮೇಟೊ ಬೆಳೆದಿದ್ದೆ. ಆದರೆ ಬೆಲೆ ತೀರಾ ಕಡಿಮೆ ಇದ್ದ ಕಾರಣ ಹೆಚ್ಚಿನ ಪ್ರಮಾಣದ ಉತ್ಪನ್ನಗಳನ್ನು ಬಿಸಾಡಬೇಕಾಯಿತು. ಪ್ರತಿ ಕ್ರೇಟ್ ದರ ಕೇವಲ 50 ರೂ. ಇತ್ತು. ಅಂದರೆ ಕೆ.ಜಿ.ಗೆ 2.50 ರೂ. ಇದ್ದ ಕಾರಣ ಉತ್ಪನ್ನಗಳನ್ನು ಬಿಸಾಡಿದ್ದೆ ಎಂದು ಹೇಳಿದರು.
ಗೇಕರ್ 2021 ರಲ್ಲಿ 15 ಲಕ್ಷದಿಂದ 16 ಲಕ್ಷ ರೂಪಾಯಿಗಳ ಮೌಲ್ಯದ ನಷ್ಟವನ್ನು ಅನುಭವಿಸಿದ್ದರು. ಕಳೆದ ವರ್ಷವೂ ಅವರು ಕೇವಲ ಕಡಿಮೆ ಲಾಭವನ್ನು ಗಳಿಸಿದರು. ಈ ವರ್ಷ ಮೇ ತಿಂಗಳಲ್ಲಿ ನಾನು ಟೊಮ್ಯಾಟೊ ಎಸೆಯುವಾಗ 12 ಎಕರೆ ಭೂಮಿಯಲ್ಲಿ ಈ ಬೆಳೆ ಬೆಳೆಯುತ್ತಿತ್ತು. ಈ ಹಿನ್ನಡೆಯಿಂದ ವಿಚಲಿತನಾಗದೆ ನಾನು ಕೃಷಿಯೆಡೆ ಮತ್ತೆ ಗಮನಹರಿಸಿದೆ. ಟೊಮೆಟೊ ಕೃಷಿಗೆ ಖರ್ಚು ಮಾಡಿದೆನು ಎಂದು ಅವರು ಹೇಳಿದರು.
ನಾನು ಸುಡುವ ಮೇ ತಾಪಮಾನದಲ್ಲಿಯೂ ಬೆಳೆಯನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ. ಹೆಚ್ಚಿನ ತಾಪಮಾನದ ಕಾರಣ ಇತರ ಭಾಗಗಳಲ್ಲಿ ಟೊಮೇಟೊ ಕೃಷಿಗೆ ಹೊಡೆತ ಬಿದ್ದಿತ್ತು. ಆದರೆ ನಾವು ಕಷ್ಟಪಟ್ಟು ಕೆಲಸ ಮಾಡಿದ್ದರಿಂದ ನನ್ನಂತಹ ರೈತರು ಲಾಭ ಪಡೆದರು. ಪ್ರಸಕ್ತ ಹಂಗಾಮಿನಲ್ಲಿ 2,500 ಕ್ರೇಟ್ಗಳನ್ನು ಮಾರಾಟ ಮಾಡಿ 20 ಲಕ್ಷ ರೂ.ಗೂ ಹೆಚ್ಚು ಆದಾಯ ಗಳಿಸಿರುವ ಮತ್ತೊಬ್ಬ ರೈತ ರಾಜು ಮಹಾಲೆ, ಮೇ ತಿಂಗಳ ನಂತರ ಟೊಮೇಟೊ ಕೃಷಿಯ ಬಗ್ಗೆಯೂ ಪ್ರತಿ ಎಕರೆಗೆ ಸುಮಾರು 3.5 ಲಕ್ಷ ರೂ. ಲಾಭ ಪಡೆದರು.
ಗೇಕರ್ ಅವರ ಉತ್ಪನ್ನವನ್ನು ಖರೀದಿಸಿದ ನಾರಾಯಣಗಾಂವ್ ಕೃಷಿ ಮಾರುಕಟ್ಟೆ ವರ್ತಕ ಅಕ್ಷಯ್ ಸೋಲಾಟ್ ಮಾತನಾಡಿ, ಮಾರುಕಟ್ಟೆಯಲ್ಲಿ ಮತ್ತೆ ಅಬ್ಬರ ಕಾಣಿಸಿಕೊಂಡಿದ್ದರಿಂದ ಪ್ರತಿ ಕ್ರೇಟ್ಗೆ 2,400 ರೂ.ನಂತೆ ಟೊಮೇಟೊ ಖರೀದಿಸಿದೆ. ಕಳೆದ 15 ವರ್ಷಗಳಿಂದ ನಾನು ಈ ವ್ಯಾಪಾರದಲ್ಲಿ ತೊಡಗಿದ್ದೇನೆ, ಆದರೆ ಟೊಮೇಟೊ ಮಾರುಕಟ್ಟೆಯಲ್ಲಿ ಅಂತಹ ಉತ್ಕರ್ಷವನ್ನು ನಾನು ನೋಡಿಲ್ಲ. ಒಂದು ಕ್ರೇಟ್ಗೆ 1,500 ರಿಂದ 1,600 ರೂ. ದರವಿತ್ತು, ಆದರೆ ಟೊಮೆಟೊದಲ್ಲಿ ಅಂತಹ ಬೆಲೆಯ ಸ್ಥಿರತೆ ಇದೆ. ಮಾರುಕಟ್ಟೆ ಎಂದಿಗೂ ಸಾಕ್ಷಿಯಾಗಿರಲಿಲ್ಲ ಎಂದು ಅವರು ಹೇಳಿದರು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications