ಬೆಂಗಳೂರು, ಆಗಸ್ಟ್ 15: ಚಿಲ್ಲರೆ ಹಣದುಬ್ಬರವು ಜೂನ್ನಲ್ಲಿ 4.81% ರಿಂದ ಜುಲೈನಲ್ಲಿ 15 ತಿಂಗಳ ಗರಿಷ್ಠ 7.44% ಕ್ಕೆ ಏರಿಕೆ ಕಂಡಿದೆ. ಪರಿಣಾಮ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ. ಇದರಿಂದ ಸಹಜವಾಗಿ ಬಿಲ್ಗಳಲ್ಲಿ ಏರಿಕೆ ಕಂಡು ಬಂದಿದೆ.
ತರಕಾರಿ ಬೆಲೆಗಳು, ಮುಖ್ಯವಾಗಿ ಟೊಮೆಟೊಗಳು ಮತ್ತು ಇತರ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಹಣದುಬ್ಬರ ಪ್ರಮುಖ ಕಾರಣವಾಗಿದೆ. 2022ರ ಏಪ್ರಿಲ್ನಿಂದ ಹಣದುಬ್ಬರವು 7.79% ರಷ್ಟಿದ್ದ ಅಂಕಿ ಅಂಶ ಈಗ ಹೆಚ್ಚಾಗಿದೆ.

ಹಣದುಬ್ಬರವು ನಾಲ್ಕು ತಿಂಗಳ ಕಾಲ ಮಿತಿಯೊಳಗೆ ಉಳಿದುಕೊಂಡ ನಂತರ RBI ಯ ಸಹಿಷ್ಣುತೆಯ ವ್ಯಾಪ್ತಿಯ 2-6% ಅನ್ನು ಮೀರಿಸಿದೆ. ಆಹಾರ ಹಣದುಬ್ಬರ, ಗ್ರಾಹಕರ ಬೆಲೆ ಬುಟ್ಟಿಯ ಅರ್ಧದಷ್ಟು ಭಾಗವನ್ನು ಹೊಂದಿದ್ದು, 11.51% ನಷ್ಟು ಏರಿಕೆ ಕಂಡಿದೆ.
ಜುಲೈನಲ್ಲಿ ಗ್ರಾಹಕ ಆಹಾರ ಬೆಲೆ ಸೂಚ್ಯಂಕವು ಅಕ್ಟೋಬರ್ 2020ಕ್ಕಿಂತ ಅತ್ಯಧಿಕ ಮಟ್ಟ 11.51% ಕ್ಕೆ ಏರಿತು. ವರ್ಷದಿಂದ ವರ್ಷಕ್ಕೆ ತರಕಾರಿ ಹಣದುಬ್ಬರವು 37.43% ಅನ್ನು ತಲುಪಿದೆ. ಹಿಂದಿನ ತಿಂಗಳಲ್ಲಿ 1% ಕುಸಿತವಾಗಿ ಬಳಿಕ ತೀವ್ರವಾಗಿ ಹೆಚ್ಚಳವಾಗಿದೆ. ಧಾನ್ಯಗಳು ಮತ್ತು ಉತ್ಪನ್ನಗಳು ಸಹ ಗಮನಾರ್ಹ ಬೆಲೆ ಏರಿಕೆಯಾಘಿದ್ದು, ಜೂನ್ನಲ್ಲಿ 12.7% ರಿಂದ 13% ಕ್ಕೆ ಏರಿಕೆಯಾಗಿದೆ.
ಕಳೆದ ವಾರ RBI ಪ್ರಸಕ್ತ ಹಣಕಾಸು ವರ್ಷದಲ್ಲಿ ಅದರ ಹಣದುಬ್ಬರವನ್ನು ಆಹಾರ ಬೆಲೆಯ ಒತ್ತಡವನ್ನು ಉಲ್ಲೇಖಿಸಿ, ಅದರ ಜೂನ್ ಸಭೆಯಲ್ಲಿ 5.1% ರಿಂದ 5.4% ಕ್ಕೆ ಅಂದಾಜು ಪರಿಷ್ಕರಿಸಿತ್ತು. ಜುಲೈ-ಸೆಪ್ಟೆಂಬರ್ನ ಹಣದುಬ್ಬರ ಮುನ್ಸೂಚನೆಯು ಈಗ 6.2% ಆಗಿದೆ, ಇದು ಹಿಂದಿನ 5.2% ಗಿಂತ ಹೆಚ್ಚಾಗಿದೆ.
ಮಾನ್ಸೂನ್ ವೇಗವನ್ನು ಪಡೆದುಕೊಂಡಿದೆ, ಆದರೆ ದೇಶದ ವಿವಿಧೆಡೆ ಅಸಮತೋಲನದ ಪರಿಣಾಮವನ್ನು ಬೀರಿದೆ. ಭತ್ತ ಬೆಳೆಯುವ ಪ್ರದೇಶಗಳಲ್ಲಿನ ಕೊರತೆಯ ಮಳೆಯು ಬೆಳೆ ಬಿತ್ತನೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಂಭಾವ್ಯ ಎಲ್ ನಿನೊ ಪರಿಣಾಮವು ಹೆಚ್ಚಾಗಿದೆ. ಅನಿಯಮಿತ ಮಾನ್ಸೂನ್ನಿಂದಾಗಿ ಟೊಮೆಟೊ ತನ್ನ ಸಗಟು ಮಾರುಕಟ್ಟೆ ಬೆಲೆಗಳಲ್ಲಿ 1,400% ಕ್ಕಿಂತ ಹೆಚ್ಚು ಬೆಲೆ ಹೆಚ್ಚಳವಾಗಿದೆ.
ಭಾರತವು ತನ್ನ ಅತಿದೊಡ್ಡ ಅಕ್ಕಿ ರಫ್ತು ವರ್ಗವನ್ನು ಸ್ಥಗಿತಗೊಳಿಸಿದ್ದು, ಜಾಗತಿಕ ಆಹಾರ ಮಾರುಕಟ್ಟೆಗಳಲ್ಲಿ ಮತ್ತಷ್ಟು ಹಣದುಬ್ಬರದ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಜುಲೈನಲ್ಲಿ ಸತತ ನಾಲ್ಕನೇ ತಿಂಗಳು ಸಗಟು ಹಣದುಬ್ಬರ ಋಣಾತ್ಮಕವಾಗಿದೆ. ತರಕಾರಿ ಬೆಲೆಯಲ್ಲಿನ ಹೆಚ್ಚಳವು ಜೂನ್ನ ಅಂಕಿ ಅಂಶದಿಂದ ಬೆಲೆ ಏರಿಕೆ ಕಾರಣವಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications