For Quick Alerts
ALLOW NOTIFICATIONS  
For Daily Alerts

ಟಾಟಾ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ

|

ಟಾಟಾ ಸನ್ಸ್ ಸಂಸ್ಥೆ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಸೈರಸ್ ಮಿಸ್ತ್ರಿ ಅವರಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದರೆ ಮೂವರು ಗಾಯಗೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, "ಮಿಸ್ತ್ರಿ ಅವರು ಅಹಮದಾಬಾದಿನಿಂದ ಮುಂಬೈ ಕಡೆಗೆ ಪ್ರಯಾಣಿಸುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಮಧ್ಯಾಹ್ನ ಸುಮಾರು 3.15ಕ್ಕೆ ಅಪಘಾತ ನಡೆದಿದ್ದು, ಸೂರ್ಯ ನದಿಯ ಮೇಲಿನ ಸೇತುವೆ ಬಳಿ ಅಪಘಾತ ಸಂಭವಿಸಿದೆ,'' ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಟಾಟಾ ಸಂಸ್ಥೆ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ಮೃತಟಾಟಾ ಸಂಸ್ಥೆ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ಮೃತ

ಟಾಟಾ ಸಮೂಹದ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಯಾರು, ಸೈರಸ್ ಮಿಸ್ತ್ರಿ Vs ಟಾಟಾ ಪ್ರಕರಣವೇನು?, ಈ ಹಿಂದಿನ ಪ್ರಮುಖ ಘಟನೆಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 2012 ರಿಂದ 2016 ರವರೆಗೆ ಟಾಟಾ ಸಮೂಹದಲ್ಲಿ

2012 ರಿಂದ 2016 ರವರೆಗೆ ಟಾಟಾ ಸಮೂಹದಲ್ಲಿ

ಮಿಸ್ತ್ರಿ 1991 ರಲ್ಲಿ ಕುಟುಂಬ ನಿರ್ಮಾಣ ಕಂಪನಿಯಾದ ಶಾಪೂರ್ಜಿ ಪಲ್ಲೋಂಜಿ & ಕಂ. ಲಿಮಿಟೆಡ್‌ಗೆ ನಿರ್ದೇಶಕರಾಗಿ ಸೇರಿದ್ದರು. 2012 ರಿಂದ 2016 ರವರೆಗೆ ಭಾರತೀಯ ವ್ಯಾಪಾರ ಸಮೂಹವಾದ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು. ಟಾಟಾ ಗ್ರೂಪ್‌ನ ಆರನೇ ಅಧ್ಯಕ್ಷರಾಗಿದ್ದರು.

2012: ಟಾಟಾ ಗ್ರೂಪ್‌ನ ಮುಖ್ಯಸ್ಥರಾಗಿ ಆಯ್ಕೆಯಾದರು ಮತ್ತು ಅದೇ ವರ್ಷ ಡಿಸೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡರು.

ಅಕ್ಟೋಬರ್ 24, 2016: ಟಾಟಾ ಸನ್ಸ್ ನ ಅಧ್ಯಕ್ಷ ಹುದ್ದೆಯಿಂದ ಸೈರಸ್ ಮಿಸ್ತ್ರಿ ವಜಾ; ರತನ್ ಟಾಟಾ ಮಧ್ಯಂತರ ಅಧ್ಯಕ್ಷರಾಗಿ ನೇಮಕ

ಅಕ್ಟೋಬರ್ 25, 2016: ಟಾಟಾ ಟ್ರಸ್ಟಿಗಳ ನೆರಳಿನಂಥ ನಿಯಂತ್ರಣ ಇದೆ ಎಂದು ಟಾಟಾ ಸನ್ಸ್ ಆಡಳಿತ ಮಂಡಳಿಗೆ ಪತ್ರ ಬರೆದ ಸೈರಸ್ ಮಿಸ್ತ್ರಿ

ಡಿಸೆಂಬರ್ 19, 2016: ಟಾಟಾ ಗ್ರೂಪ್ ಎಲ್ಲ ಸಂಸ್ಥೆಗಳ ನಿರ್ದೇಶಕ ಹುದ್ದೆಗೆ ಸೈರಸ್ ಮಿಸ್ತ್ರಿ ರಾಜೀನಾಮೆ

ಡಿಸೆಂಬರ್ 20, 2016: National Company Law Tribunal (NCLT) ಮೆಟ್ಟಿಲೇರಿದ ಮಿಸ್ತ್ರಿ. ಅಧಿಕಾರ ದುರುಪಯೋಗದ ಆರೋಪ.

 

 ಟಾಟಾ ಸನ್ಸ್ ಆಡಳಿತ ಮಂಡಳಿ ನಿರ್ದೇಶಕ ಹುದ್ದೆಯಿಂದ ವಜಾ
 

ಟಾಟಾ ಸನ್ಸ್ ಆಡಳಿತ ಮಂಡಳಿ ನಿರ್ದೇಶಕ ಹುದ್ದೆಯಿಂದ ವಜಾ

ಜನವರಿ 12, 2017: ಟಾಟಾ ಸನ್ಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ಹೆಸರು ಘೋಷಣೆ

ಫೆಬ್ರವರಿ 6, 2017: ಟಾಟಾ ಸನ್ಸ್ ಆಡಳಿತ ಮಂಡಳಿ ನಿರ್ದೇಶಕ ಹುದ್ದೆಯಿಂದ ಸೈರಸ್ ಮಿಸ್ತ್ರಿ ವಜಾ

ಸೆಪ್ಟೆಂಬರ್ 21, 2017: ಖಾಸಗಿ ಕಂಪೆನಿ ಆಗುವ ಯೋಜನೆಗೆ ಟಾಟಾ ಸನ್ಸ್ ಮಂಡಳಿಯಿಂದ ಒಪ್ಪಿಗೆ

ಫೆಬ್ರವರಿ 6, 2017: ಟಾಟಾ ಸನ್ಸ್ ಆಡಳಿತ ಮಂಡಳಿ ನಿರ್ದೇಶಕ ಹುದ್ದೆಯಿಂದ ಸೈರಸ್ ಮಿಸ್ತ್ರಿ ವಜಾ

ಸೆಪ್ಟೆಂಬರ್ 21, 2017: ಖಾಸಗಿ ಕಂಪೆನಿ ಆಗುವ ಯೋಜನೆಗೆ ಟಾಟಾ ಸನ್ಸ್ ಮಂಡಳಿಯಿಂದ ಒಪ್ಪಿಗೆ

 

 NCLT ಆದೇಶ ಹೇಳಿದ್ದೇನು, ಸುಪ್ರೀಂ ಹೇಳಿದ್ದೇನು?

NCLT ಆದೇಶ ಹೇಳಿದ್ದೇನು, ಸುಪ್ರೀಂ ಹೇಳಿದ್ದೇನು?

ಜೂನ್ 12, 2018: National Company Law Tribunal (NCLT) ಜುಲೈ 4ರಂದು ಆದೇಶದ ದಿನವಾಗಿ ನಿಗದಿ

ಜುಲೈ 4, 2018: NCLTಯಿಂದ ತೀರ್ಪು ಜುಲೈ 9ರ ತನಕ ಮುಂದೂಡಿಕೆ

ಜುಲೈ 9, 2018: ಟಾಟಾ ಸನ್ಸ್ ನಿಂದ ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಿದ ಕ್ರಮ ಪ್ರಶ್ನಿಸಿ, ಸೈರಸ್ ಮಿಸ್ತ್ರಿ ಸಲ್ಲಿಸಿದ್ದ ಅರ್ಜಿ NCLTಯಿಂದ ವಜಾ. ಆಡಳಿತ ಮಂಡಳಿಯು ವಿಶ್ವಾಸ ಕಳೆದುಕೊಂಡ ಕಾರಣಕ್ಕೆ ಮಿಸ್ತ್ರಿ ಅವರನ್ನು ವಜಾ ಮಾಡಿದೆ ಎಂದ ನ್ಯಾಯಮಂಡಳಿ.

ಡಿಸೆಂಬರ್ 18, 2019: National Company Law Appellate Tribunal (NCLAT)ನಿಂದ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಗ್ರೂಪ್ ನ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಮತ್ತೆ ನೇಮಕ. ಟಾಟಾ ಗ್ರೂಪ್ ನ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರ ನೇಮಕ ಕಾನೂನು ಬಾಹಿರ ಎಂದು ಘೋಷಣೆ.

ಜನವರಿ 10 , 2020: NCLAT ನ ಆದೇಶವನ್ನು ತಡೆಹಿಡಿದ ಸುಪ್ರೀಂ ಕೋರ್ಟ್. ಸೈರಸ್ ಮಿಸ್ತ್ರಿ ವಜಾವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಜೂನ್ 2020: ನ್ಯಾನೋ, ಟಾಟಾ ಸ್ಟೀಲ್ ಯುರೋಪ್ ಸೇರಿದಂತೆ ನಷ್ಟದಲ್ಲಿ ಇರುವ ಯೋಜನೆ, ಉದ್ಯಮದಲ್ಲಿ ಹೂಡಿಕೆ ಮುಂದುವರಿಸಿರುವ ಬಗ್ಗೆ ಟಾಟಾ ಸನ್ಸ್ ಉಚ್ಚಾಟಿತ ಅಧ್ಯಕ್ಷ ಸೈರಸ್ ಮಿಸ್ತ್ರಿ ಪ್ರಶ್ನೆ. ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ಸಲ್ಲಿಕೆ

 

English summary

Interesting Facts about Former Tata Chairman Cyrus Mistry in Kannada

Former Tata Sons chairman Cyrus Mistry was on Sunday killed in a road accident. Here's A Few Facts On cyrus mistry.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X