Ayushman Bharat: ಆಯುಷ್ಮಾನ್ ಭಾರತ್ ಯೋಜನೆ ಕಾರ್ಡ್‌ದಾರರಿಗೆ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದರೆ ಏನು ಮಾಡುವುದು?

ಆರ್ಥಿಕ ಸಮಸ್ಯೆಗಳಿಂದಾಗಿ ಭಾರತದಲ್ಲಿ ಬಹುತೇಕ ವರ್ಗವು ದುಬಾರಿ ಆರೋಗ್ಯ ವಿಮಾ ಯೋಜನೆಗಳನ್ನು ಖರೀದಿಸಲು ತೊಂದರೆಯನ್ನು ಅನುಭವಿಸುತ್ತಿದೆ. ಆರೋಗ್ಯ ತುರ್ತು ಸ್ಥಿತಿ ಉಂಟಾದಾಗ ನಮಗೆ ಆರ್ಥಿಕ ಸಹಾಯವಾಗಬೇಕಾದರೆ ನಾವು ವಿಮೆಯನ್ನು ಹೊಂದಿರಬೇಕಾಗುತ್ತದೆ. ಆಸ್ಪತ್ರೆಯ ಅತೀ ಉದ್ದವಾದ ಬಿಲ್ ಅನ್ನು ಪಾವತಿಸಲು ವಿಮೆ ಸಹಾಯವಾಗುತ್ತದೆ. ಆದರೆ ಅಷ್ಟು ದುಬಾರಿಯಾದ ವಿಮೆಯನ್ನು ಖರೀದಿಸುವುದು ಹೇಗೆ?

ಇದಕ್ಕೆ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆ ಸಹಾಯಕವಾಗಿದೆ. ಈ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆಯೊಂದಿಗೆ ಬಡ ಮತ್ತು ದುರ್ಬಲ ಕುಟುಂಬಗಳು ಉತ್ತಮ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಲು ಸಹಾಯಕವಾಗುತ್ತದೆ. ಸಮಾಜದ ಬಡ, ಕೆಳ ಮತ್ತು ದುರ್ಬಲ ವರ್ಗಗಳಿಗೆ ಸೇವೆ ಒದಗಿಸುವ ಯೋಜನೆಯು ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಆರ್ಥಿಕ ರಕ್ಷಣೆ ನೀಡುತ್ತದೆ.

 ಆಯುಷ್ಮಾನ್ ಕಾರ್ಡ್‌ದಾರರಿಗೆ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದರೆ....

ಅಧಿಕೃತ ವೆಬ್‌ಸೈಟ್ ಪ್ರಕಾರ, ಆಯುಷ್ಮಾನ್ ಭಾರತ್ ಯೋಜನೆಯು 50 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ. ಇದನ್ನು ಸೆಪ್ಟೆಂಬರ್ 2018 ರಲ್ಲಿ ಸರ್ಕಾರವು ಪ್ರಾರಂಭಿಸಿತು. ಈ ಯೋಜನೆಯು ದೇಶದ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 5 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆಯನ್ನು ನೀಡುವ ಯೋಜನೆಯಾಗಿದೆ.

ಆಯುಷ್ಮಾನ್ ಭಾರತ್ ಯೋಜನೆ ಕಾರ್ಡುದಾರರು ದೇಶದಾದ್ಯಂತ ಯೋಜನೆಯಡಿ ನೋಂದಾಯಿಸಲ್ಪಟ್ಟ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಬಹುದು. ಸರ್ಕಾರಿ ಆರೋಗ್ಯ ವಿಮಾ ಯೋಜನೆಯಲ್ಲಿ ಔಷಧಿಗಳು, ತಪಾಸಣೆ, ಪೂರ್ವ-ಆಸ್ಪತ್ರೆ ವೆಚ್ಚಗಳು ಸೇರಿರುತ್ತದೆ. ಈ ಯೋಜನೆಯು ಇ-ಕಾರ್ಡ್ ಮೂಲಕ ನಗದು ರಹಿತ ಆಸ್ಪತ್ರೆ ಸೇವೆಗಳನ್ನು ಸಹ ನೀಡುತ್ತದೆ. ಆದರೆ ಯೋಜನೆಯ ಅಡಿಯಲ್ಲಿ ಆಸ್ಪತ್ರೆಯು ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ ಏನು ಮಾಡುವುದು?

ಕಾರ್ಡ್‌ದಾರರಿಗೆ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದರೆ?

ಮೊದಲಿಗೆ, ಯಾವ ಸಂದರ್ಭಗಳಲ್ಲಿ ಆಸ್ಪತ್ರೆಯ ವಿರುದ್ಧ ದೂರು ನೀಡಬೇಕು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಯೋಜನೆಯಡಿ ನೋಂದಾಯಿಸಲಾದ ಆಸ್ಪತ್ರೆಯಲ್ಲಿ ನಿರ್ದಿಷ್ಟ ಚಿಕಿತ್ಸಾ ಸೌಲಭ್ಯವಿಲ್ಲದಿದ್ದರೆ, ಅದರಿಂದಾಗಿ ಚಿಕಿತ್ಸೆ ನಿರಾಕರಿಸಿದರೆ, ಕಾರ್ಡುದಾರರು ದೂರು ಸಲ್ಲಿಸಲು ಸಾಧ್ಯವಿಲ್ಲ. ಸಂಬಂಧಪಟ್ಟ ಎಲ್ಲಾ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದ್ದರೂ ಆಸ್ಪತ್ರೆಯು ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ, ಕಾರ್ಡುದಾರರು ದೂರು ಸಲ್ಲಿಸಬಹುದು. ಆಸ್ಪತ್ರೆಯ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ.

ಯೋಜನೆಯ ಕಾರ್ಡುದಾರರು ತಮ್ಮ ದೂರುಗಳನ್ನು 14555 ಗೆ ಸಲ್ಲಿಸಬಹುದು. ಇದು ಆಯುಷ್ಮಾನ್ ಭಾರತ್ ಯೋಜನೆಯ ರಾಷ್ಟ್ರೀಯ ಟೋಲ್-ಫ್ರೀ ಸಂಖ್ಯೆಯಾಗಿದೆ. ವಿವಿಧ ರಾಜ್ಯಗಳಿಗೂ ಟೋಲ್ ಫ್ರೀ ಸಂಖ್ಯೆಗಳನ್ನು ನೀಡಲಾಗಿದೆ. ಉತ್ತರ ಪ್ರದೇಶದ ನಿವಾಸಿಗಳು 180018004444 ಗೆ ದೂರು ಸಲ್ಲಿಸಬಹುದು.

ಮಧ್ಯಪ್ರದೇಶದ ನಿವಾಸಿಗಳು ತಮ್ಮ ದೂರುಗಳನ್ನು 18002332085 ಗೆ ದಾಖಲಿಸಬಹುದು. ಬಿಹಾರದಲ್ಲಿ ವಾಸಿಸುವ ಜನರು 104 ಗೆ ಕರೆ ಮಾಡಬಹುದು. ಉತ್ತರಾಖಂಡಕ್ಕೆ ಎರಡು ಟೋಲ್ ಫ್ರೀ ಸಂಖ್ಯೆಗಳಿವೆ, 155368 ಮತ್ತು 180530088053008 ಟೋಲ್‌ ಫ್ರೀ ಸಂಖ್ಯೆಯಾಗಿದೆ. ಕರ್ನಾಟಕದಲ್ಲಿ ಟೋಲ್‌ ಫ್ರೀ ಸಂಖ್ಯೆ 104 ಆಗಿದೆ. ಸಹಾಯವಾಣಿ ಸಂಖ್ಯೆ 1800 425 8330 ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+