ಜನವರಿ 31 ರಿಂದ ಫೆಬ್ರವರಿ 9 ರವರೆಗೆ 17 ನೇ ಲೋಕಸಭೆಯ ಅಂತಿಮ ಅಧಿವೇಶನವು ನಡೆಯಲಿದೆ. ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ. 2024-25 ರ ಆರ್ಥಿಕ ವರ್ಷದ ಸಮಗ್ರ ಬಜೆಟ್ ಅನ್ನು ಸಾರ್ವತ್ರಿಕ ಚುನಾವಣೆಯ ನಂತರ ಮಂಡಿಸಲಾಗುತ್ತದೆ.
ಮಧ್ಯಂತರ ಬಜೆಟ್ ಆಗಲಿ ಅಥವಾ ಸಂಪೂರ್ಣ ಬಜೆಟ್ ಆಗಲಿ, ಬಜೆಟ್ನ ಒಂದು ಅವಿಭಾಜ್ಯ ಆರಂಭಿಕ ಸಂಪ್ರದಾಯವು "ಹಲ್ವಾ ಸಮಾರಂಭ" ಆಗಿದೆ. ಇದು ಬಜೆಟ್ಗೆ ಸಂಬಂಧಿಸಿದ ವಿವಿಧ ದಾಖಲೆಗಳ ಮುದ್ರಣ ಪ್ರಕ್ರಿಯೆಯ ಅಧಿಕೃತ ಪ್ರಾರಂಭದ ಸೂಚಕವಾಗಿದ್ದು, ಪ್ರತಿ ಬಜೆಟ್ ಮುನ್ನ ಮಾಡಲಾಗುತ್ತದೆ. ಈ ಹಲ್ವಾ ಸಮಾರಂಭದ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಹಣಕಾಸು ಸಚಿವರು ಆಯೋಜಿಸುವ ಮತ್ತು ಇತರ ಅಧಿಕಾರಿಗಳು ಭಾಗವಹಿಸುವ ಈ ಸಮಾರಂಭವು ಹಲವಾರು ತಿಂಗಳುಗಳ ಕಾಲ ವ್ಯಾಪಕವಾದ ಬಜೆಟ್ ತಯಾರಿಕೆಯ ಕಾರ್ಯವಿಧಾನದ ಅಂತಿಮ ಹಂತಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಧಿಕೃತವಾಗಿ ಸಮಾರಂಭದ ಆರಂಭವನ್ನು ಇದು ಸೂಚಿಸುತ್ತದೆ.
ಹಣಕಾಸು ಸಚಿವರು, ಇತರ ಅಧಿಕಾರಿಗಳೊಂದಿಗೆ, ಕೇಂದ್ರ ದೆಹಲಿಯಲ್ಲಿರುವ ಹಣಕಾಸು ಸಚಿವಾಲಯದ ನೆಲಮಾಳಿಗೆಯಲ್ಲಿ 'ಹಲ್ವಾ' ತುಂಬಿದ ದೊಡ್ಡ ಲೋಹದ ಮಡಕೆ ಅಥವಾ ಕಡಾಯಿಯನ್ನು ಬೆರೆಸುವ ಮೂಲಕ ಹಲ್ವಾ ಸಮಾರಂಭ ನಡೆಯುತ್ತದೆ. ಇದು ಮೀಸಲಾದ ಮುದ್ರಣಾಲಯದ ನೆಲೆಯಾಗಿದೆ.
ಕೇಂದ್ರ ಸರ್ಕಾರದ ವಾರ್ಷಿಕ ಹಣಕಾಸು ಹೇಳಿಕೆಯನ್ನು ಸಿದ್ಧಪಡಿಸುವಲ್ಲಿ ತೊಡಗಿರುವ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಔಪಚಾರಿಕವಾಗಿ ಸೆಂಡ್ ಆಫ್ ಮಾಡುವ ಮಹತ್ವವನ್ನು ಈ ಸಮಾರಂಭ ಹೊಂದಿದೆ. ಸಮಾರಂಭದ ನಂತರ, ಈ ವ್ಯಕ್ತಿಗಳು ನಿಗದಿತ ಸಮಯದವರೆಗೆ ಯಾರ ಸಂಪರ್ಕಕ್ಕೂ ಸಿಗುವುದಿಲ್ಲ. ಸಚಿವಾಲಯದ ಆವರಣದಲ್ಲಿ ಇವರನ್ನು ಪ್ರತ್ಯೇಕವಾಗಿ ಕೂರಿಸಲಾಗುತ್ತದೆ.
ಬಜೆಟ್ ದಾಖಲೆಯ ಸುತ್ತಲಿನ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳನ್ನು ಸ್ನೇಹಿತರು ಮತ್ತು ಕುಟುಂಬದಿಂದ ದೂರ ಇರಿಸಲಾಗುತ್ತದೆ, ಸಂಪರ್ಕ ಮಾಡುವ ಅವಕಾಶವನ್ನು ಕೂಡಾ ನೀಡಲಾಗುವುದಿಲ್ಲ. ಮೊಬೈಲ್ ಫೋನ್ಗಳ ಬಳಕೆಯನ್ನು ನಿಷೇಧಿಸುವುದು ಸೇರಿದಂತೆ ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಲಾಗುತ್ತದೆ.
ಯಾವಾಗ ಈ ಸಮಾರಂಭ ಆರಂಭ?
ಫೆಬ್ರವರಿ 1 ರಂದು ಲೋಕಸಭೆಯಲ್ಲಿ ಹಣಕಾಸು ಸಚಿವರು ಬಜೆಟ್ ಮಂಡಿಸಿದ ನಂತರ ಮಾತ್ರ ಸಿಬ್ಬಂದಿಗೆ ನಾರ್ತ್ ಬ್ಲಾಕ್ನಿಂದ ನಿರ್ಗಮಿಸಲು ಅನುಮತಿ ನೀಡಲಾಗುತ್ತದೆ. ಹಣಕಾಸು ಸಚಿವ ಜಾನ್ ಮಥಾಯ್ ಅವರ ಅಧಿಕಾರಾವಧಿಯಲ್ಲಿ 1950 ರ ಕೇಂದ್ರ ಬಜೆಟ್ ತಯಾರಿಕೆಯ ಸಮಯದಲ್ಲಿ ಸಂಭವಿಸಿದ ಮಾಹಿತಿ ಸೋರಿಕೆಯ ಬಳಿಕ ಈ ಕಠಿಣ ಕ್ರಮವನ್ನು ಪಾಲಿಸಲಾಗುತ್ತಿದೆ.
ರಾಷ್ಟ್ರಪತಿ ಭವನದಲ್ಲಿ ಮುದ್ರಣ ಪ್ರಕ್ರಿಯೆಯಲ್ಲಿ ಬಜೆಟ್ನ ಒಂದು ಭಾಗ ಸೋರಿಕೆಯಾಗಿದೆ. ಅದಾದ ಬಳಿಕ ಮುದ್ರಣ ಸ್ಥಳವನ್ನು ಮಿಂಟೋ ರಸ್ತೆಯಲ್ಲಿರುವ ಸರ್ಕಾರಿ ಮುದ್ರಣಾಲಯಕ್ಕೆ ಸ್ಥಳಾಂತರಿಸಲಾಗಿದೆ. 1980 ರಿಂದ, ದೆಹಲಿಯ ಸೆಕ್ರೆಟರಿಯೇಟ್ ಕಟ್ಟಡದಲ್ಲಿ ನಾರ್ತ್ ಬ್ಲಾಕ್ ನೆಲಮಾಳಿಗೆಯನ್ನು ಬಜೆಟ್ ಮುದ್ರಣಕ್ಕಾಗಿ ಶಾಶ್ವತ ಸ್ಥಳವಾಗಿ ಸ್ಥಾಪಿಸಲಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications