ಆದಾಯ ತೆರಿಗೆ ಮರು ಪಾವತಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು 2023ರ ಜುಲೈ 31 ಕೊನೆಯ ದಿನಾಂಕವಾಗಿತ್ತು. ಆ ನಂತರದಲ್ಲಿ ದಂಡ ಅನ್ವಯವಾಗಲಿದ್ದು, ದಂಡದೊಂದಿಗೆ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31 ರವರೆಗೂ ಅವಕಾಶವಿದೆ. ವಾರ್ಷಿಕ 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಇರುವವರಿಗೆ 1000 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಅಧಿಕ ದಂಡವನ್ನು ವಿಧಿಸಲಾಗುತ್ತದೆ.
ಒಮ್ಮೆ ನೀವು ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ ನಂತರ ಇ-ವೆರಿಫಿಕೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಬಹಳ ಮುಖ್ಯ. ಒಂದುವೇಳೆ ಇದನ್ನು ಸರಿಯಾಗಿ ಮಾಡದೆ ಹೋದರೆ ನಿಮ್ಮ ಐಟಿಆರ್ ಸಲ್ಲಿಕೆಯು ಅಮಾನ್ಯವಾಗಿರುತ್ತದೆ. ಆಗ ಮರು ಫೈಲಿಂಗ್ ಅನ್ನು ಮಾಡಬೇಕಾದ ಅಗತ್ಯವಿರುತ್ತದೆ. ಐಟಿ ರಿಟರ್ನ್ಸ್ನಲ್ಲಿ ಯಾವುದೇ ಮರುಪಾವತಿಯನ್ನು ಸ್ವೀಕರಿಸುವುದಕ್ಕೆ ಇದು ಅತ್ಯಗತ್ಯವಾಗಿದೆ.

ಒಂದುವೇಳೆ ಐಟಿಆರ್ ರೀಫಂಡ್ಗಾಗಿ ಈಗಲೂ ಕಾಯುತ್ತಿದ್ದರೆ ಮತ್ತು ಫೈಲಿಂಗ್ ಮಾಡದೆ ಗಮನಾರ್ಹ ಸಮಯವನ್ನು ಕಳೆದಿದ್ದರೆ ಅದು ನಾನಾ ಸಮಸ್ಯೆಗಳಿಗೆ ಕಾರಣವಾಗಬಹುದು. ಕಾರಣಗಳನ್ನು ಪರಿಶೀಲಿಸುವ ಮೊದಲು ನಿಮ್ಮ ಮರುಪಾವತಿ ಸ್ಟೇಟಸ್ ಅನ್ನು ಚೆಕ್ ಮಾಡಿ.
ನಿರೀಕ್ಷಿತ ರೀ-ಫಂಡ್ ಸಮಸ್ಯೆಗಳು:
1. ಅರ್ಹತೆ: ಕೆಲವು ತೆರಿಗೆದಾರರು ಅರ್ಹರಲ್ಲದ ಕಾರಣ ಅಂಥವರು ಮರುಪಾವತಿಯನ್ನು ಪಡೆಯುವುದಿಲ್ಲ. ನೀವು ಅರ್ಹರಾಗಿದ್ದರೆ ಫೈಲಿಂಗ್ ಸಮಯದಲ್ಲಿ ತೆರಿಗೆ ವೆಬ್ಸೈಟ್ ಅದನ್ನು ಖಚಿತಪಡಿಸುತ್ತದೆ ಹಾಗೂ ನೀವು ರೀ-ಫಂಡ್ ಅನ್ನು ನಿರೀಕ್ಷಿಸಬಹುದು.
2. ಬ್ಯಾಂಕ್ ಖಾತೆ ವಿವರಗಳು: ನಿಮ್ಮ ಬ್ಯಾಂಕ್ ಖಾತೆ ಮಾಹಿತಿಗಳು ಸಮರ್ಪಕವಾಗಿರಬೇಕು ಹಾಗೂ ಪೂರ್ವ ಮೌಲ್ಯೀಕರಣಗೊಂಡಿರಬೇಕು. ಇಲ್ಲದಿದ್ದರೆ ನೀವು ಮರುಪಾವತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.
3. ಪ್ಯಾನ್ ಹಾಗೂ ಬ್ಯಾಂಕ್ ಮಾಹಿತಿ: ನಿಮ್ಮ ಪ್ಯಾನ್ ವಿವರಗಳು ಐಎಫ್ಎಸ್ಸಿ ಕೋಡ್ ಒಳಗೊಂಡಂತೆ ಬ್ಯಾಂಕ್ ಖಾತೆ ಮಾಹಿತಿಗೆ ಸರಿ ಹೊಂದಿಕೆಯಾಗಿರಬೇಕು.
4. ಸಮಯಕ್ಕೆ ಸರಿಯಾಗಿ ವೆರಿಫಿಕೇಷನ್: ಐಟಿಆರ್ ವೆರಿಫಿಕೇಷನ್ ಪ್ರಕ್ರಿಯೆಯನ್ನು 30 ದಿನದೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಐಟಿಆರ್ ಅಪೂರ್ಣವೆಂದು ಪರಿಗಣಿಸಲಾಗುತ್ತದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications