PM Kisan: ರೈತರೇ ಗಮನಿಸಿ.. ಪಿಎಂ ಕಿಸಾನ್ 20ನೇ ಕಂತು ಈ ತಿಂಗಳು ಬರಬಹುದು! ಈಗಲೇ ಇ-ಕೆವೈಸಿ ಕೆಲಸ ಮುಗಿಸಿ

ರೈತರೇ ಗಮನಿಸಿ.. ಪಿಎಂ ಕಿಸಾನ್ 20ನೇ ಕಂತು ಈ ತಿಂಗಳು ಬರಬಹುದು! ಹೌದು, ರೈತರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗಹುದು. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 20ನೇ ಕಂತಿನ ಹಣ ಬಿಡುಗಡೆಲ್ಲಿ ಜೂನ್‌ನಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಬಹುದು. ಆದರೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.ಕೋಟ್ಯಂತರ ರೈತರು ಇದಕ್ಕೆ ಕಾತರದಿಂದ ಕಾಯುತ್ತಿದ್ದಾರೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ, ರೈತರಿಗೆ ಸಾಲವಾಗಿ ಕೇಂದ್ರಸರ್ಕಾರ ಪ್ರತಿ ವರ್ಷ 6000 ರೂ.ಗಳ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಮೂರು ಸಮಾನ ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ. ಸರ್ಕಾರವು DBT (ನೇರ ಪ್ರಯೋಜನ ವರ್ಗಾವಣೆ) ಮೂಲಕ ಕಳುಹಿಸುವ ಪ್ರತಿ ಕಂತಿನಲ್ಲಿ ರೈತರು 2000 ರೂ.ಗನ್ನು ಪಡೆಯಬಹುದು.

ರೈತರೇ ಗಮನಿಸಿ.. ಪಿಎಂ ಕಿಸಾನ್ 20ನೇ ಕಂತು ಈ ತಿಂಗಳು ಬರಬಹುದು!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 20 ನೇ ಕಂತು ಯಾವಾಗ ಬಿಡುಗಡೆ..?

ಜೂನ್ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ರೈತರ ಖಾತೆಗಳಿಗೆ 20 ನೇ ಕಂತನ್ನು ವರ್ಗಾಯಿಸಬಹುದು ಎಂದು ಹೇಳಲಾಗುತ್ತಿದೆ. ಕೆಲವು ಮಾಧ್ಯಮ ವರದಿಗಳು ಪ್ರಕಾರ ಜೂನ್ 20 ರಂದು ಖಾತೆಗೆ ಹಣ ವರ್ಗಾವಣೆಯಾಗಬಹುದುಆದರೆ ಸರ್ಕಾರ ಈ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಹೆಚ್ಚಿನ ಮಾಗಿತಿಯನ್ನು ತಿಳಿದುಕೊಳ್ಳಲುರೈತರು pmkisan.gov.in ನಲ್ಲಿ ನಿಯಮಿತವಾಗಿ ನವೀಕರಣಗಳನ್ನು ಪರಿಶೀಲಿಸುತ್ತಿರಬೇಕು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ SMS ಅನ್ನು ಸಹ ಪರಿಶೀಲಿಸುತ್ತಿರಬೇಕು.

ಇ-ಕೆವೈಸಿ ಬೇಗನೆ ಮಾಡಿಸಿ

ಪಿಎಂ ಕಿಸಾನ್ ಯೋಜನೆಯ ಈ ಕಂತು ಪಡೆಯಲು ರೈತರು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಇ-ಕೆವೈಸಿ ಇಲ್ಲದೆ, 20 ನೇ ಕಂತಿನ 2000 ರೂ. ಸಿಲುಕಿಕೊಳ್ಳಬಹುದು. ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ, ರೈತರಿಗೆ ವಾರ್ಷಿಕವಾಗಿ 6000 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ವರ್ಷಕ್ಕೆ 3 ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ, ಇದರಲ್ಲಿ ಪ್ರತಿ ಕಂತು 2000 ರೂ.ಗಳಾಗಿರುತ್ತದೆ. ಇಲ್ಲಿಯವರೆಗೆ, ರೈತರು 19 ಕಂತುಗಳನ್ನು ಪಡೆದಿದ್ದಾರೆ. ಮುಂದಿನ 20 ನೇ ಕಂತು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಇ-ಕೆವೈಸಿ ಮಾಡುವುದು ಹೇಗೆ..?ರೈತರೇ ಗಮನಿಸಿ.. ಪಿಎಂ ಕಿಸಾನ್ 20ನೇ ಕಂತು ಈ ತಿಂಗಳು ಬರಬಹುದು! ಹೌದು, ರೈತರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗಹುದು. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 20ನೇ ಕಂತಿನ ಹಣ ಬಿಡುಗಡೆಲ್ಲಿ ಜೂನ್‌ನಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಬಹುದು. ಆದರೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.ಕೋಟ್ಯಂತರ ರೈತರು ಇದಕ್ಕೆ ಕಾತರದಿಂದ ಕಾಯುತ್ತಿದ್ದಾರೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ, ರೈತರಿಗೆ ಸಾಲವಾಗಿ ಕೇಂದ್ರಸರ್ಕಾರ ಪ್ರತಿ ವರ್ಷ 6000 ರೂ.ಗಳ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಮೂರು ಸಮಾನ ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ. ಸರ್ಕಾರವು DBT (ನೇರ ಪ್ರಯೋಜನ ವರ್ಗಾವಣೆ) ಮೂಲಕ ಕಳುಹಿಸುವ ಪ್ರತಿ ಕಂತಿನಲ್ಲಿ ರೈತರು 2000 ರೂ.ಗನ್ನು ಪಡೆಯಬಹುದು.

ಇ-ಕೆವೈಸಿ ಮಾಡುವ ವಿಧಾನ

1 ಮೊದಲು ಪಿಎಂ ಕಿಸಾನ್ ಸಮ್ಮಾನ್ ನಿಧಿ pmkisan.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
2 ನಂತರ "e-KYC" ಮೇಲೆ ಕ್ಲಿಕ್ ಮಾಡಿ
3 ಇದು ಆದ ನಂತರ ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ

4 OTP ಯೊಂದಿಗೆ ಪರಿಶೀಲನೆಯ ನಂತರ ಸಲ್ಲಿಸಿ.

ಈ ಯೋಜನೆಯ ಲಾಭ ಯಾರಿಗೆ ಸಿಗುವುದಿಲ್ಲ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಕಾರ, ಗಂಡ ಮತ್ತು ಹೆಂಡತಿ ಇಬ್ಬರೂ ಒಟ್ಟಿಗೆ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ಯಾರಾದರೂ ಹೀಗೆ ಮಾಡಿದರೆ, ಅದು ನಕಲಿ ಎಂದು ಪರಿಗಣಿಸಲಾಗುತ್ತದೆ ಮತ್ತು ಸರ್ಕಾರವು ಅವರಿಂದ ಕೊಟ್ಟ ಹಣವನ್ನು ವಸೂಲಿ ಮಾಡುತ್ತದೆ. ಇದಲ್ಲದೆ, ರೈತನ ಕುಟುಂಬದಲ್ಲಿ ಯಾರಾದರೂ ತೆರಿಗೆ ಪಾವತಿಸಿದರೆ ಅಂತವರಿಗೆ ಈ ಯೋಜನೆಯ ಪ್ರಯೋಜನವೂ ಸಿಗುವುದಿಲ್ಲ.

ಇದರರ್ಥ ಗಂಡ ಅಥವಾ ಹೆಂಡತಿ ಇಬ್ಬರೂ ಕಳೆದ ವರ್ಷ ಆದಾಯ ತೆರಿಗೆ ಪಾವತಿಸಿದ್ದರೆ, ಅವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ಒಬ್ಬ ರೈತ ಇನ್ನೊಬ್ಬ ರೈತರಿಂದ ಭೂಮಿಯನ್ನು ಬಾಡಿಗೆಗೆ ಪಡೆದು ಕೃಷಿ ಮಾಡುತ್ತಿದ್ದರೆ, ಅವರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಏಕೆಂದರೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಭೂ ಮಾಲೀಕತ್ವವು ಅವಶ್ಯಕ. ಒಬ್ಬ ರೈತ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರು ಉನ್ನತ ಹುದ್ದೆಯನ್ನು ಹೊಂದಿದ್ದರೆ, ಅವರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+