ಸಾಂದೀಪನಿ ಶಿಷ್ಯವೇತನ 2025: ಬ್ರಾಹ್ಮಣ ವಿದ್ಯಾರ್ಥಿಗಳಿಗೆ 1 ಲಕ್ಷ ರೂ.ವರೆಗಿನ ನೆರವು...ಅರ್ಜಿ ಸಲ್ಲಿಸುವುದೇಗೆ ತಿಳಿಯಿರಿ

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆರ್ಥಿಕವಾಗಿ ದುರ್ಬಲ ಪರಿಸ್ಥಿತಿಯಲ್ಲಿರುವ ಬ್ರಾಹ್ಮಣ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸಲು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿ ಅತ್ಯಂತ ಜನಪ್ರಿಯ ಮತ್ತು ಉಪಯುಕ್ತ ಯೋಜನೆ "ಸಾಂದೀಪನಿ ಶಿಷ್ಯವೇತನ". 2025-26ನೇ ಸಾಲಿನ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಈಗ ಆರಂಭವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳಿಗೆ ಇದು ದೊಡ್ಡ ಸಹಾಯವಾಗಲಿದೆ.

ಸಾಂದೀಪನಿ ಶಿಷ್ಯವೇತನ 2025: ನೆರವು ವಿವರ!

ಸಾಂದೀಪನಿ ಶಿಷ್ಯವೇತನ ಯೋಜನೆ ಎಂದರೇನು?

ಬ್ರಾಹ್ಮಣ ಸಮುದಾಯದ ಕಡಿಮೆ ಆದಾಯದ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳು ಉನ್ನತ ಮತ್ತು ವೃತ್ತಿಪರ ಶಿಕ್ಷಣವನ್ನು ಸುಗಮವಾಗಿ ಮುಂದುವರಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಸರ್ಕಾರಿ ಅನುದಾನದ ನೆರವಿನಿಂದ ನಡೆಯುವ ಈ ವಿದ್ಯಾರ್ಥಿವೇತನವು ಮೆಟ್ರಿಕ್ ನಂತರದ ಎಲ್ಲಾ ಕೋರ್ಸ್‌ಗಳಿಗೆ ಅನ್ವಯಿಸುವಂತೆ ವಿನ್ಯಾಸಗೊಂಡಿದೆ.
ಶುಲ್ಕ ಮರುಪಾವತಿ, ಮಾಸಿಕ ಭತ್ಯೆ, ಪುಸ್ತಕ-ಉಪಕರಣ ವೆಚ್ಚ, ಹಾಸ್ಟೆಲ್ ಹಾಗೂ ಪ್ರಯಾಣದಂತ ಮೂಲಭೂತ ಖರ್ಚುಗಳನ್ನು ಕಡಿಮೆ ಮಾಡಲು ಈ ಯೋಜನೆ ಪರಿಣಾಮಕಾರಿ ಸಹಾಯ ಒದಗಿಸುತ್ತದೆ.

ಈ ಯೋಜನೆಯಡಿ ಸಿಗುವ ಆರ್ಥಿಕ ನೆರವು:

1. ವಾರ್ಷಿಕ ನಿರ್ವಹಣಾ ಭತ್ಯೆ

ಪಿ.ಯು.ಸಿ., ಡಿಪ್ಲೋಮಾ ಮತ್ತು ಸಾಮಾನ್ಯ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ.1,500ರಂತೆ 10 ತಿಂಗಳಿಗೆ ಒಟ್ಟು ರೂ.15,000 ನೀಡಲಾಗುತ್ತದೆ. ಇದು ವಿದ್ಯಾರ್ಥಿಯ ದೈನಂದಿನ ಶಿಕ್ಷಣ ವೆಚ್ಚ ಭರಿಸಲು ಉಪಯೋಗವಾಗುತ್ತದೆ.

2. ಶುಲ್ಕ ಮರುಪಾವತಿ ಸೌಲಭ್ಯ

  • CET ಅಥವಾ NEET ಮೂಲಕ ಸಾಮಾನ್ಯ ಪ್ರವೇಶ ಪಡೆದು ವೃತ್ತಿಪರ ಪದವಿ ಅಥವಾ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಸೇರಿರುವವರಿಗೆ ಈ ಸೌಲಭ್ಯ ಅನ್ವಯಿಸುತ್ತದೆ.
  • ಸರ್ಕಾರಿ ನಿಗದಿತ ಶುಲ್ಕದ 2/3 ಭಾಗವನ್ನು ಮರುಪಾವತಿ ರೂಪದಲ್ಲಿ ಪಡೆಯಬಹುದು.
  • ಗರಿಷ್ಠ ಮಿತಿಯಾಗಿ ರೂ.1 ಲಕ್ಷ ವರೆಗೆ ಪಾವತಿಸಲಾಗುತ್ತದೆ.

ಗಮನಿಸಬೇಕಾದುದು:

  • ಬೋಧನಾ ಶುಲ್ಕ, ಪ್ರಯೋಗಾಲಯ ಶುಲ್ಕ, ಗ್ರಂಥಾಲಯ, ಪರೀಕ್ಷಾ ಮತ್ತು ಕ್ರೀಡಾ ಶುಲ್ಕ ಮಾತ್ರ ಮರುಪಾವತಿಗೆ ಒಳಪಡುತ್ತದೆ.
  • COMED-K ಮೂಲಕ ಪ್ರವೇಶ ಪಡೆದವರಿಗೆ ಬೋಧನಾ ಶುಲ್ಕದ ಶೇ.50ಕ್ಕಷ್ಟೇ ಮರುಪಾವತಿ.
  • ಮ್ಯಾನೇಜ್‌ಮೆಂಟ್ ಸೀಟ್ ಪಡೆದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನ ಸಿಗುವುದಿಲ್ಲ.

ಯಾರು ಅರ್ಹರು?

ಈ ಯೋಜನೆಗೆ ರಾಜ್ಯ ಸರ್ಕಾರವು ಕೆಲವು ನಿಯಮಗಳನ್ನು ನಿಗದಿಪಡಿಸಿದೆ:

  • ಕುಟುಂಬದ ವಾರ್ಷಿಕ ಆದಾಯ ರೂ. 8 ಲಕ್ಷ ಒಳಗೆ ಇರಬೇಕು.
  • ಅಭ್ಯರ್ಥಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿರಬೇಕು.
  • ಕರ್ನಾಟಕ ರಾಜ್ಯಕ್ಕೆ ಸೇರಿದ ಸರ್ಕಾರಿ, ಅನುದಾನಿತ ಅಥವಾ ಮಾನ್ಯತೆ ಪಡೆದ ಖಾಸಗಿ ಕಾಲೇಜುಗಳಲ್ಲಿ ಮೆಟ್ರಿಕ್ ನಂತರದ ಅಧ್ಯಯನ ಮಾಡುತ್ತಿರಬೇಕು.
  • ಹಿಂದಿನ ವರ್ಷ ಬರೆಯಲಾದ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.
  • ಅರ್ಜಿದಾರರ ಆಧಾರ್ ಕಾರ್ಡಿನಲ್ಲಿ ಕರ್ನಾಟಕದ ಶಾಶ್ವತ ವಿಳಾಸ ಇರಬೇಕು.
  • ಒಂದೇ ಕುಟುಂಬದಲ್ಲಿ ಇಬ್ಬರು ಗಂಡು ಮಕ್ಕಳಿಗೆ ಮಾತ್ರ ಸೌಲಭ್ಯ. ಹೆಣ್ಣು ಮಕ್ಕಳಿಗೆ ಈ ಮಿತಿ ಅನ್ವಯಿಸುವುದಿಲ್ಲ.

ಯಾರು ಅರ್ಹರಲ್ಲ?

  • ಒಂದೇ ತರದ ಕೋರ್ಸ್‌ನ್ನು ಎರಡು ಬಾರಿ ಓದುತ್ತಿರುವ ವಿದ್ಯಾರ್ಥಿಗಳು.
  • ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಓದುತ್ತಾ ಸ್ಟೈಪೆಂಡ್ ಪಡೆಯುವ ಇಂಟರ್ನ್ ವಿದ್ಯಾರ್ಥಿಗಳು.
  • ಪದೇಪದೇ ಕೋರ್ಸ್ ಬದಲಾಯಿಸಿರುವವರು.

ಅರ್ಜಿಗೆ ಕೊನೆಯ ದಿನ:

  • ಈ ಯೋಜನೆಗಾಗಿ ಪ್ರಕಟಣೆ ಡಿಸೆಂಬರ್ 03, 2025ರಂದು ಹೊರಬೀಳಲಾಗಿದೆ.
  • ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.
  • ಅರ್ಜಿಯ ಕೊನೆಯ ದಿನಾಂಕ: ಫೆಬ್ರವರಿ 28, 2026

ಆನ್‌ಲೈನ್ ಮೂಲಕ ಅರ್ಜಿ ಹೇಗೆ ಸಲ್ಲಿಸಬೇಕು?

  • ಸಾಂದೀಪನಿ ಶಿಷ್ಯವೇತನಕ್ಕೆ ಕಡ್ಡಾಯವಾಗಿ SSP (State Scholarship Portal) ಮೂಲಕವೇ ಅರ್ಜಿ ಸಲ್ಲಿಸಬೇಕು.
  • ಜಾಲತಾಣಕ್ಕೆ ಭೇಟಿ ನೀಡಿ: ssp.postmatric.karnataka.gov.in
  • ಹೊಸದಾಗಿ ನೋಂದಣಿ ಮಾಡಿ ಅಥವಾ ಲಾಗಿನ್ ಆಗಿ.
  • ವೈಯಕ್ತಿಕ ವಿವರ, ಶಿಕ್ಷಣ ಮಾಹಿತಿ, ಬ್ಯಾಂಕ್ ವಿವರ ಸೇರಿ ಎಲ್ಲಾ ಅಗತ್ಯ ಮಾಹಿತಿಯನ್ನು ನಮೂದಿಸಿ.
  • ಶುಲ್ಕ ಮರುಪಾವತಿ ಮತ್ತು ಮಾಸಿಕ ಭತ್ಯೆ ಎರಡಕ್ಕೂ ಒಂದೇ ಅರ್ಜಿ ಸಲ್ಲಿಸಬೇಕು.

ಅರ್ಜಿಗೆ ಬೇಕಾಗುವ ದಾಖಲೆಗಳು:

  • ತಹಶೀಲ್ದಾರರಿಂದ ಪಡೆದ ಬ್ರಾಹ್ಮಣ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಥವಾ EWS ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • 10ನೇ ತರಗತಿಯ ಅಂಕಪಟ್ಟಿ
  • ಹಿಂದಿನ ತರಗತಿಯ ಅಂಕಪಟ್ಟಿ
  • ಪಿ.ಯು.ಸಿ. ನೊಂದಣಿ ಸಂಖ್ಯೆ (1ನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ)
  • ಶುಲ್ಕ ಪಾವತಿ ರಸೀದಿ
  • ಪ್ರಾಂಶುಪಾಲರಿಂದ ಅಧ್ಯಯನ ದೃಢೀಕರಣ
  • ದಿವ್ಯಾಂಗ ವಿದ್ಯಾರ್ಥಿಗಳಿಗೆ ಸರ್ಕಾರದ ವಿಶೇಷ ಚೇತನ ಪ್ರಮಾಣ ಪತ್ರ

ಹೆಚ್ಚಿನ ಮಾಹಿತಿಗೆ:

ಯೋಜನೆ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಮಂಡಳಿಯ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು:
📞 080 2960 5888

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+