ತತ್ಕಾಲ್ ನಲ್ಲಿ ರೈಲು ಟಿಕೆಟ್ ಬುಕ್ ಮಾಡುವವರು ಓದಲೇಬೇಕಾದ ಸ್ಟೋರಿ ಇದು. ಏಕೆಂದರೆ ತತ್ಕಾಲ್, ಟಿಕೆಟ್ ಬುಕಿಂಗ್ನಲ್ಲಿ ಹೊಸ ಸುರಕ್ಷತಾ ಕ್ರಮವನ್ನ ಪರಿಚಯಿಸಿದೆ. ಅಂದರೆ ಇನ್ನುಮುಂದೆ ಟಿಕೆಟ್ ಪಡೆಯಬೇಕು ಅಂದ್ರೆ, ಮೊದಲು ಪ್ರಯಾಣಿಕರ ಮೊಬೈಲ್ ಸಂಖ್ಯೆಗೆ ಕಳಿಸಲಾಗುವ OTP ಪರಿಶೀಲಿಸಬೇಕಾಗುತ್ತೆ. ಡಿಸೆಂಬರ್ 1, 2025ರಿಂದ ಈ ಹೊಸ OTP ಪರಿಶೀಲನಾ ವ್ಯವಸ್ಥೆ ಜಾರಿಗೆ ಬಂದಿದೆ ಎನ್ನಲಾಗಿದೆ. ಹೀಗಂತ ವೆಸ್ಟರ್ನ್ ರೈಲು ವಿಭಾಗ ತಿಳಿಸಿದೆ.

ಹೌದು ವೆಸ್ಟರ್ನ್ ರೈಲು ವಿಭಾಗ ಹೇಳಿರುವ ಪ್ರಕಾರ, ರೈಲು ಮಂಡಳಿಯ ಮಾರ್ಗಸೂಚಿಯಂತೆ ತತ್ಕಾಲ್ ಟಿಕೆಟ್ ಬುಕಿಂಗ್ನಲ್ಲಿ ಇದೊಂದು ಪ್ರಮುಖ ಬದಲಾವಣೆ ಎನ್ನಲಾಗಿದೆ. ಅಂದರೆ ತತ್ಕಾಲ್ ಟಿಕೆಟ್ಗಳನ್ನು ಇನ್ಮುಂದೆ ಸಿಸ್ಟಮ್ ನಿರ್ಮಿತ OTP ಪರಿಶೀಲನೆಯ ನಂತರ ಮಾತ್ರವೇ ನೀಡಲಾಗುತ್ತೆ ಎಂಬುದಾಗಿದೆ. ಹಾಗೆಯೇ ಇನ್ನೊಂದು ಪ್ರಮುಖ ವಿಷಯ ಏನಂದ್ರೆ, ಪ್ರಯಾಣಿಕರು ಬುಕಿಂಗ್ ಸಮಯದಲ್ಲಿ ನೀಡಿದ ಮೊಬೈಲ್ ಸಂಖ್ಯೆಗೆ, ಈ ಒಟಿಪಿ ಬರುತ್ತದೆ. ಮತ್ತು OTP ಯಶಸ್ವಿಯಾಗಿ ಪರಿಶೀಲನೆಯಾದ ನಂತರ ಮಾತ್ರ ಟಿಕೆಟ್ ಇಶ್ಯೂ ಆಗುತ್ತದೆ.
ಅಂದಹಾಗೆ ಪ್ರಾರಂಭಿಕ ಹಂತದಲ್ಲಿ, OTP ಆಧಾರಿತ ತಾತ್ಕಲ್ ದೃಢೀಕರಣವನ್ನು ಮುಂಬೈ ಸೆಂಟ್ರಲ್-ಅಹಮದಾಬಾದ್ ಶತಾಬ್ದಿ ಎಕ್ಸ್ಪ್ರೆಸ್ (ಟ್ರೇನ್ ನಂ. 12009/12010)ನಲ್ಲಿ ಜಾರಿಗೆ ತರುವಂತೆ ಯೋಜಿಸಲಾಗಿದೆ. ನಂತರ ಇವನ್ನು ದೇಶದ ಇತರ ರೈಲುಗಳಿಗೆ ಹಂತ ಹಂತವಾಗಿ ವಿಸ್ತರಿಸಲಾಗುವುದು.
ಈ ಹೊಸ ವ್ಯವಸ್ಥೆ ಎಲ್ಲಾ ಬುಕ್ಕಿಂಗ್ ಚಾನೆಲ್ಗಳಿಗೆ ಅನ್ವಯಿಸುತ್ತದೆ, ಅದರಲ್ಲಿ IRCTC ವೆಬ್ಸೈಟ್, ಮೊಬೈಲ್ ಆಪ್ ಮತ್ತು ರೈಲು ಕೌಂಟರ್ಗಳು ಸೇರಿವೆ. ಈ ಬದಲಾವಣೆಯ ಉದ್ದೇಶವು ತತ್ಕಾಲ್ ಬುಕ್ಕಿಂಗ್ಗಳಲ್ಲಿ ಪಾರದರ್ಶಕತೆ ತರುತ್ತದೆ ಮತ್ತು ನಿಜವಾದ ಪ್ರಯಾಣಿಕರಿಗೆ ತತ್ಕಾಲ್ ಟಿಕೆಟ್ಗಳಿಗೆ ಸುಲಭ ಪ್ರವೇಶವನ್ನು ನೀಡುವುದು.
ತತ್ಕಾಲ್ ಟಿಕೆಟ್ ಹೇಗೆ ಬುಕ್ ಮಾಡುವುದು?
IRCTC ವೆಬ್ಸೈಟ್ ಅಥವಾ ಯಾವುದೇ ಮಾನ್ಯತಾಪ್ರಾಪ್ತ ಪ್ಲಾಟ್ಫಾರ್ಮ್ನಲ್ಲಿ ಲಾಗಿನ್ ಆಗಿ, ಬುಕ್ಕಿಂಗ್ ಸಮಯಕ್ಕೆ ಮುಂಚೆ ಲಾಗಿನ್ ಮಾಡಿರುವುದು ಉತ್ತಮ.
- ಪ್ರಯಾಣದ ಮೂಲ ಮತ್ತು ಗಮ್ಯಸ್ಥಾನ, ದಿನಾಂಕವನ್ನು ನಮೂದಿಸಿ.
- ಹುಡುಕಾಟ ಫಾರ್ಮ್ನಲ್ಲಿ 'ತತ್ಕಾಲ್' ಆಯ್ಕೆಮಾಡಿ, ಲಭ್ಯವಿರುವ ರೈಲುಗಳನ್ನು ಪರಿಶೀಲಿಸಿ ಮತ್ತು ನಿಮ್ಮ ಮೆಚ್ಚಿನ ರೈಲು ಆಯ್ಕೆಮಾಡಿ.
- ಪ್ರಯಾಣಿಕರ ವಿವರಗಳನ್ನು ನಮೂದಿಸಿ (ಹೆಸರು, ವಯಸ್ಸು, ಲಿಂಗ ಇತ್ಯಾದಿ). ಭವಿಷ್ಯದ ಬುಕ್ಕಿಂಗ್ಗಾಗಿ "ಮಾಸ್ಟರ್ ಲಿಸ್ಟ್" ಫೀಚರ್ ಬಳಸಿ ವಿವರಗಳನ್ನು ಉಳಿಸಬಹುದು.
- ನೆಟ್ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಪೇಮೆಂಟ್ ವಾಲೆಟ್ ಮೂಲಕ ಪಾವತಿ ಮಾಡಿ ಮತ್ತು ಬುಕ್ಕಿಂಗ್ ಪೂರ್ಣಗೊಳಿಸಿ.
ಇನ್ನು 28 ಅಕ್ಟೋಬರ್, 2025ರಿಂದ IRCTC ನವೀಕರಣದ ಪ್ರಕಾರ, ಮೊದಲ ಬುಕ್ಕಿಂಗ್ ದಿನದ 8 ರಿಂದ 10 ಗಂಟೆಯವರೆಗೆ ಟಿಕೆಟ್ ಬುಕ್ಕಿಂಗ್ ಮಾಡಲು ಆಧಾರ್ ದೃಢೀಕರಣ ಅನಿವಾರ್ಯವಾಗಿದೆ. ಆಧಾರ್ ಪರಿಶೀಲನೆ ಇಲ್ಲದ ಬಳಕೆದಾರರು ಈ ಸಮಯ ಹೊರತುಪಡಿಸಿ ಟಿಕೆಟ್ ಬುಕ್ ಮಾಡಬಹುದು.
ಈ ಹೊಸ OTP ವ್ಯವಸ್ಥೆಯಿಂದ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಇನ್ನೂ ಹೆಚ್ಚು ಸುರಕ್ಷಿತ ಮತ್ತು ಪಾರದರ್ಶಕವಾಗಲಿದೆ, ಹಾಗೂ ನಿಜವಾದ ಪ್ರಯಾಣಿಕರಿಗೆ ಸುಲಭ ಪ್ರವೇಶವನ್ನು ನೀಡಲಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications