ಕೋಟಕ್ ಮಹೀಂದ್ರಾ ಬ್ಯಾಂಕ್ನ ಮಂಡಳಿಯು ಶುಕ್ರವಾರ ಅಶೋಕ್ ವಾಸ್ವಾನಿ ಅವರನ್ನು ಬ್ಯಾಂಕ್ನ ನಿರ್ದೇಶಕ, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕ ಮಾಡಲು ಅನುಮೋದನೆ ನೀಡಿದೆ. ಕಳೆದ ತಿಂಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ವಾಸ್ವಾನಿಯನ್ನು ಮೂರು ವರ್ಷಗಳ ಅವಧಿಗೆ ಬ್ಯಾಂಕಿನ ಎಂಡಿ ಮತ್ತು ಸಿಇಒ ಆಗಿ ನೇಮಿಸಲು ಅನುಮೋದನೆ ನೀಡಿತು.
ಶುಕ್ರವಾರ ನಡೆದ ತಮ್ಮ ಸಭೆಯಲ್ಲಿ ನಿರ್ದೇಶಕರ ಮಂಡಳಿಯು ವಾಸ್ವಾನಿ ಅವರನ್ನು ಜನವರಿ 1, 2024 ರಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಬ್ಯಾಂಕ್ನ ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮತ್ತು ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ ನೇಮಕ ಮಾಡಿದೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ.

ಬ್ಯಾಂಕಿನ ಸದಸ್ಯರ ಅನುಮೋದನೆ ಪಡೆಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಬಾರ್ಕ್ಲೇಸ್ನಲ್ಲಿ ಕೆಲಸ ಮಾಡಿದ ವಾಸ್ವಾನಿ ಅವರು ಸೆಪ್ಟೆಂಬರ್ 1 ರಿಂದ ಬ್ಯಾಂಕ್ನ ಎಂಡಿ ಹುದ್ದೆಯನ್ನು ತೊರೆದಿರುವ ಉದಯ್ ಕೋಟಕ್ರ ಸ್ಥಾನವನ್ನು ತುಂಬಲಿದ್ದಾರೆ. ಹಾಗಾದರೆ ವಾಸ್ವಾನಿ ಯಾರೆಂದು ತಿಳಿಯೋಣ ಮುಂದೆ ಓದಿ...
ಅಶೋಕ್ ವಾಸ್ವಾನಿ ಯಾರು?
ಪ್ರಸ್ತುತ, ವಾಸ್ವಾನಿ ಅವರು ಯುಎಸ್- ಇಸ್ರೇಲಿ ಎಐ ಫಿನ್ಟೆಕ್ ಸಂಸ್ಥೆಯಾದ ಪಗಾಯಾ ಟೆಕ್ನಾಲಜೀಸ್ ಲಿಮಿಟೆಡ್ನ ಅಧ್ಯಕ್ಷರಾಗಿದ್ದಾರೆ. ಹಾಗೆಯೇ ವಾಸ್ವಾನಿ ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಗ್ರೂಪ್, ಯುಕೆ ಎಸ್ಪಿ ಜೈನ್ ಇನ್ಸ್ಟಿಟ್ಯೂಟ್ ಆಫ್ ಗ್ಲೋಬಲ್ ಮ್ಯಾನೇಜ್ಮೆಂಟ್ನ ಮಂಡಳಿಯಲ್ಲಿದ್ದಾರೆ. ಪ್ರಥಮ್ ಮತ್ತು ಲೆಂಡ್ ಎ ಹ್ಯಾಂಡ್ ಸೇರಿದಂತೆ ವಿವಿಧ ಲೋಕೋಪಕಾರಿ ಸಂಸ್ಥೆಗಳಿಗೆ ಬೆಂಬಲಿಸುತ್ತಿದ್ದಾರೆ.
62 ವರ್ಷದ ವಾಸ್ವಾನಿ ಅವರು ಮೂರೂವರೆ ದಶಕಗಳ ಕಾಲ, ಆರಂಭದಲ್ಲಿ ಸಿಟಿಗ್ರೂಪ್ನಲ್ಲಿ ಮತ್ತು ಇತ್ತೀಚೆಗಷ್ಟೇ ಬಾರ್ಕ್ಲೇಸ್ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಕಾರ್ಪೊರೇಟ್ ಮತ್ತು ಗ್ರಾಹಕ ವ್ಯವಹಾರ, ಕೈಗಾರಿಕಾ ಶಕ್ತಿ ನಿರ್ವಹಣೆಯಲ್ಲಿ ಉತ್ತಮ ಅನುಭವವನ್ನು ಹೊಂದಿದ್ದಾರೆ.
ವಾಸ್ವಾನಿ ಯುಕೆಯ ಬಾರ್ಕ್ಲೇಸ್ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ನಂತರ ಅದರ ಜಾಗತಿಕ ಗ್ರಾಹಕ, ಖಾಸಗಿ, ಕಾರ್ಪೊರೇಟ್ ಮತ್ತು ಪಾವತಿ ವ್ಯವಹಾರಗಳ ಸಿಇಒ ಮತ್ತು ಗುಂಪಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಇದಕ್ಕೂ ಮೊದಲು, ಸಿಟಿಗ್ರೂಪ್ ಏಷ್ಯಾ ಪೆಸಿಫಿಕ್ ಸಿಇಒ ಮತ್ತು ಸಿಟಿಗ್ರೂಪ್ ಗ್ಲೋಬಲ್ ಆಪರೇಟಿಂಗ್ ಆಂಡ್ ಮ್ಯಾನೆಜ್ಮೆಂಟ್ ಕಮಿಟಿಗಳ ಸದಸ್ಯರಾಗಿದ್ದರು.
ಹಾಗೆಯೇ ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಗ್ರೂಪ್ನಂತಹ ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಮಂಡಳಿಯಲ್ಲಿದ್ದಾರೆ. ಯುಕೆಯ ಎಸ್ಪಿ ಜೈನ್ ಇನ್ಸ್ಟಿಟ್ಯೂಟ್ ಆಫ್ ಗ್ಲೋಬಲ್ ಮ್ಯಾನೇಜ್ಮೆಂಟ್ನರಿ ಮಂಡಳಿಯಲ್ಲಿದ್ದರು. ಸಿಟಿಜನ್ ಅಡ್ವೈಸ್ ಬ್ಯೂರೋದ ಮಾಜಿ ಟ್ರಸ್ಟಿ, ಬ್ರಿಟಿಷ್ ಬ್ಯಾಂಕರ್ಸ್ ಅಸೋಸಿಯೇಷನ್ನ ರಿಟೇಲ್ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದರು.
ಇನ್ನು ಎಂಟರ್ಕಾರ್ಡ್ನ ಮಂಡಳಿಯ ಮಾಜಿ ಅಧ್ಯಕ್ಷ, ಟೆಲಿನಾರ್ನ ಮಾಜಿ ಬೋರ್ಡ್ ಸದಸ್ಯ, ವಿಸಾ ಏಷ್ಯಾ ಪೆಸಿಫಿಕ್ ಮತ್ತು ವಿಸಾದ ಯುಕೆಯ ಮಾಜಿ ಮಂಡಳಿಯ ಸದಸ್ಯರಾಗಿದ್ದರು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications