ಕ್ರೆಡಿಟ್ ಸುಸ್ಸೆ ಸಾಲದ ಪ್ರಮಾಣದ ಬಗ್ಗೆ ನೀಡಿರುವ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಜೆಎಸ್ ಡಬ್ಲ್ಯೂ ವಕ್ತಾರರು ಬಿಎಸ್ ಇ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಜಿಂದಾಲ್ ಸಂಸ್ಥೆ ಷೇರುಗಳು 704 ಮುಖಬೆಲೆಯಂತೆ ಟ್ರೇಡಿಂಗ್ ಆರಂಭಿಸಿ 12.05ರ ಸುಮಾರಿಗೆ 1.48 ರು ಕಳೆದುಕೊಂಡಿದೆ.
ಸಂಸ್ಥೆಯ ವಾರ್ಷಿಕ ವಾಣಿಜ್ಯ ವರದಿಯನ್ನು ಭಾರತದ GAAP ನಿರ್ದೇಶನದಂತೆ ರೂಪಿಸಲಾಗಿದೆ ಹಾಗೂ ಪ್ರತಿಷ್ಠಿತ ಚಾರ್ಟ್ರೆಡ್ ಅಕೌಂಟೆಂಟ್ ಗಳಿಂದ ಪರಿಶೀಲನೆ ನಂತರವೇ ಪ್ರಕಟಿಸಲಾಗಿದೆ. ಕ್ರೆಡಿಟ್ ಸುಸ್ಸೆ ವರದಿಯಲ್ಲಿರುವ ಮಾಹಿತಿ ಸುಳ್ಳು ಎಂದು ಜಿಂದಾಲ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸಂಸ್ಥೆ ಪಾಲಿಸಿಕೊಂಡು ಬಂದಿರುವ ನಿಯಮಾವಳಿಗಳಂತೆ ವರದಿ ರಚಿಸಲಾಗಿದೆ. ವರದಿಯಲ್ಲಿರುವಂತೆ ಸಂಸ್ಥೆಯ ಆಸ್ತಿ ಪಾಸ್ತಿ ವಿವರಗಳು Indian Accounting Regulations ಗೆ ಒಳಪಟ್ಟಿದೆ. ಹೀಗಾಗಿ ತಪ್ಪಾಗಲು ಸಾಧ್ಯವಿಲ್ಲ ಎಂದು ಜಿಂದಾಲ್ ಸಂಸ್ಥೆ ವಿವರಿಸಿದೆ.
ಆದರೆ, ಜಿಂದಾಲ್ ಸಂಸ್ಥೆಯ ಇನ್ನಷ್ಟು ಮಾಹಿತಿ ಹೊರ ಹಾಕಿರುವ ಕ್ರೆಡಿಟ್ ಸುಸ್ಸೆ, ರುಪಾಯಿ ಅಪಮೌಲ್ಯದಿಂದ ಸಂಸ್ಥೆಗೆ ಸುಮಾರು 1,200 ಕೋಟಿ ರು ನಷ್ಟವಾಗಿದೆ ಎಂದು ವರದಿ ಮಾಡಿದೆ.
ಮುಂದುವರೆದ ಜಿಂದಾಲ್ ಸಂಕಷ್ಟ: ವಿಶ್ವದಲ್ಲೇ ಅತಿ ಕಡಿಮೆ ಮೌಲ್ಯದಲ್ಲಿ ಉಕ್ಕು ಉತ್ಪಾದಿಸುವ ಜಿಂದಾಲ್ ಗ್ರೂಪ್ ಭಾರತ ಮೂರನೇ ಅತಿದೊಡ್ಡ ಉಕ್ಕು ಉದ್ಯಮ ಸಂಸ್ಥೆಯಾಗಿದೆ. ಜಿಂದಾಲ್ ನ ಷೇರು ಖರೀದಿ, ಬಂಡವಾಳ ಹೂಡಿಕೆಯಿಂದ ಹಿಂದೆ ಸರಿಯುವಂತೆ ಹೂಡಿಕೆದಾರರಿಗೆ ಆರ್ಥಿಕ ತಜ್ಞರು ಸೂಚಿಸಿರುವುದು ಕಂಪನಿಗೆ ಭಾರಿ ಹಿನ್ನೆಡೆಯಾಗಿದೆ.4ನೇ ತ್ರೈಮಾಸಿಕ ವರದಿಯಲ್ಲಿ ಶೇ 10 ರಷ್ಟು ಲಾಭ ಕಳೆದುಕೊಂಡಿತ್ತು.
ಯಡಿಯೂರಪ್ಪ ಗಣಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಂದಾಲ್ ಸಂಸ್ಥೆ ಕೂಡಾ ಆರೋಪ ಹೊತ್ತಿದೆ. ಲೋಕಾಯುಕ್ತ ವರದಿ, ಜನಾರ್ದನ ರೆಡ್ಡಿ ಅದಿರು ಅಕ್ರಮ ಸಾಗಾಟ, ಸಿಇಸಿ ವರದಿ ಒಟ್ಟಾರೆ ಅಕ್ರಮ ಗಣಿಗಾರಿಕೆಗೂ ನಮಗೂ ಸಂಬಂಧವಿಲ್ಲ ಎಂದು ಮುಖ್ಯಸ್ಥ ಸಜ್ಜನ್ ಜಿಂದಾಲ್ ಇತ್ತೀಚೆಗೆ ಹೇಳಿದ್ದರು. ಕರ್ನಾಟಕದಲ್ಲಿನ ಅಕ್ರಮ ಗಣಿಗಾರಿಕೆಯಿಂದ ನಮ್ಮ ಸಂಸ್ಥೆಗೆ ಭಾರಿ ನಷ್ಟವಾಗಿದೆ. ನಮ್ಮ ಕಷ್ಟ ಕೇಳುವ ಬದಲು ನಮ್ಮ ಮೇಲೆ ಆರೋಪ ಹೊರೆಸುವುದು ಎಷ್ಟು ಸರಿ ಎಂದು ಸಜ್ಜನ್ ಜಿಂದಾಲ್ ಪ್ರಶ್ನಿಸಿದ್ದರು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications

