
ಫ್ರೀಡಂ ಸುರಕ್ಷಾ ಯೋಜನೆ ಕೆನರಾ ಬ್ಯಾಂಕಿನ ಎಲ್ಲಾ ಸೇವಿಂಗ್ ಬ್ಯಾಂಕ್ ಖಾತೆವುಳ್ಳ ಗ್ರಾಹಕರಿಗೆ ಲಭ್ಯವಾಗಲಿದೆ. ನೈಜ ಹಾಗೂ ಅಪಘಾತದಿಂದ ಮರಣ ಹೊಂದಿದ ಪ್ರಕರಣಗಳು ಈ ಯೋಜನೆ ವ್ಯಾಪ್ತಿಗೆ ಒಳಪಡಲಿದೆ.
'ಕೆನರಾ ಎಚ್ ಎಸ್ ಬಿಸಿ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ' ಎಂಬ ಜಂಟಿ ಯೋಜನೆಯನ್ನು ಕೆನರಾ ಬ್ಯಾಂಕಿನ ಕಾರ್ಯಕಾರಿ ನಿರ್ದೇಶಕ ಎಕೆ ಗುಪ್ತಾ ಅವರು ಲೋಕಾರ್ಪಣೆ ಮಾಡಿದರು.
ಗ್ರಾಹಕರು ಯಾವುದೇ ವೈದ್ಯಕೀಯ ಪರೀಕ್ಷೆ ಇಲ್ಲದೆ ಉತ್ತಮ ದೇಹಸ್ವಾಸ್ಥ್ಯ ಹೊಂದಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ ಈ ಯೋಜನೆಗೆ ಬಾಧ್ಯರಾಗಬಹುದಾಗಿದೆ. ನೈಜ ಹಾಗೂ ಅನೈಜ ಸಾವಿನ ಪ್ರಕರಣಗಳನ್ನು ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಸದ್ಯಕ್ಕೆ 1 ಲಕ್ಷದ ತನಕ ಗ್ರಾಹಕರಿಗೆ ಪರಿಹಾರ ಧನ ತ್ವರಿತವಾಗಿ ದೊರೆಯಲಿದೆ. ನಂತರ ಮೊತ್ತವನ್ನು ಹೆಚ್ಚಿಸುವ ಚಿಂತನೆ ಇದೆ ಎಂದು ಎಕೆ ಗುಪ್ತಾ ಹೇಳಿದ್ದಾರೆ.
ವಾರ್ಷಿಕ ದರಗಳು(ಸೇವಾ ತೆರಿಗೆ ಸೇರಿಸಿ) ರು.177, ರು.366 ಹಾಗೂ ರು.988 ಹಾಗೂ ವಯೋಮಿತಿ ಕ್ರಮವಾಗಿ 18-35, 36-50 ಹಾಗೂ 51-59 ವರ್ಷ. ಎಂದು ಕೆನರಾ ಬ್ಯಾಂಕ್ ಪ್ರಕಟಿಸಿದೆ.
ವಿನೂತನ ಸಲಹೆಗಾರ್ತಿ: ಕೆನರಾ ಬ್ಯಾಂಕ್ ವಿಮೆ ಆಯ್ಕೆ ಮಾಡುವ ಮೊದಲು ಗ್ರಾಹಕರಿಗೆ ತಲೆದೋರಬಹುದಾದ ಪ್ರಶ್ನೆಗಳನ್ನು ಪರಿಹರಿಸಲು ವಿನೂತನವಾಗಿ ಪ್ರಶ್ನೋತ್ತರ ಮಾದರಿಯಲ್ಲಿ ಸಿಮ್ಯುಲೇಟರ್ ಬಳಸಿ ಗ್ರಾಹಕರ ಭವಿಷ್ಯದ ಫೈನಾನ್ಸ್ ಯೋಜನೆ ಸಮಸ್ಯೆಯನ್ನು ಬಗೆಹರಿಸುವ ವಿಧಾನ ಕೆನರಾ ಬ್ಯಾಂಕಿನ ವೆಬ್ ತಾಣದಲ್ಲಿ ಲಭ್ಯವಿದೆ.
ಕೆನರಾಎಚ್ ಎಸ್ ಬಿಸಿ ಲೈಫ್ ವೆಬ್ ಸೈಟ್ ನಲ್ಲಿ -ಲೈಫ್ ಇನ್ಶೂರೆನ್ಸ್ ಸಿಮ್ಯುಲೇಟರ್ ಕ್ಲಿಕ್ ಮಾಡಿದರೆ ಗ್ರಾಹಕರಿಗೆ ವಿವಿಧ ಭಾಷೆಯಲ್ಲಿ ಆಡಿಯೋ ಸಿಮ್ಯುಲೇಟರ್ ಮಾಹಿತಿ ನೀಡುತ್ತದೆ. ಗ್ರಾಹಕರ ಹಣಕಾಸು ಗುರಿಗಳು, ಅವಶ್ಯಕತೆಗೆ ತಕ್ಕಂತೆ ವಿಮೆ ಹಾಗೂ ಬಂಡವಾಳ ಹೂಡಿಕೆ ಬಗ್ಗೆ ಲೆಕ್ಕಾಚಾರ ಹಾಕಿ ನಿಮ್ಮ ಮುಂದೆ ನಿಮ್ಮದೆ ಖಾಸಗಿ ಸಲಹೆಗಾರ್ತಿಯಾಗಿ ಈ ಸಿಮ್ಯುಲೇಟರ್ ವರ್ತಿಸುತ್ತದೆ. ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ಕ್ಲಿಕ್ಕಿಸಿ
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications