ಕಳೆದ ಐದು ವರ್ಷದಲ್ಲೇ ಈ ಪರಿ ಕರಡಿ ಹೊಡೆತವನ್ನು (ಷೇರು ಕುಸಿತ) ಭಾರ್ತಿ ಏರ್ ಟೆಲ್ ಕಂಡಿರಲಿಲ್ಲ. ಆ.8 ನಿಂದ ಇಲ್ಲಿವರೆಗೆ ಶೇ 15 ರಷ್ಟು ಪ್ರಮಾಣದಲ್ಲಿ ಷೇರುಗಳು ಇಳಿಮುಖವಾಗಿದೆ. ಕಳೆದ ತ್ರೈಮಾಸಿಕದಲ್ಲಿ ಮಸಿ ಬಳಿದುಕೊಂಡಿದ್ದ ಭಾರ್ತಿ ಮತ್ತೆ ಚೇತರಿಸಲು ಸಾಕಷ್ಟು ಶ್ರಮ ಪಡುತ್ತಿದೆ.
ಬಿಎಸ್ ಇನಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ 250 ರು. ದರದಂತೆ ಶೇ 3.15 ರಷ್ಟು ಕುಸಿತ ಕಂಡಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ 250 ರು ದರದಂತೆ ಶೇ 3 ರಷ್ಟು ಇಳಿಮುಖವಾಗಿತ್ತು.
ಆದರೆ, ಈಗ [ಸಮಯ 3.25] ಬಿಎಸ್ ಇನಲ್ಲಿ 248.50 ರು ದರದಂತೇ ಶೇ 3.89ರಷ್ಟು ಕುಸಿತ ಕಂಡಿದ್ದು 10 ರು ಕಳೆದುಕೊಂಡಿದೆ. ಎನ್ ಎಸ್ ಇನಲ್ಲಿ 248.60 ರು ದರದಂತೆ ಶೇ 3.83 ರಷ್ಟು ಕುಸಿತ ಕಂಡಿದ್ದು 9.85 ರು ಕಳೆದುಕೊಂಡಿದೆ.
ಭಾರ್ತಿ ಏರ್ ಟೆಲ್ ಷೇರುಗಳ ಕುಸಿತಕ್ಕೆ ಭಾರತೀಯ ವೈರ್ ಲೆಸ್ ಮಾರುಕಟ್ಟೆಗೆ ರಿಲಯನ್ಸ್ ಇಂಡಸ್ಟ್ರೀಸ್ ಪ್ರವೇಶಕ್ಕೆ ಕಾರಣ ಎನ್ನಲಾಗಿದೆ. ಕ್ರೆಡಿಟ್ ಸುಸ್ಸೈ ಕೂಡಾ ರಿಲೆಯನ್ಸ್ ಇನ್ಫೋಟೆಲ್ ಗೆ ಉತ್ತಮ ಶ್ರೇಯಾಂಕ ನೀಡಿದೆ. ಷೇರುಗಳ ಕಟ್ ಆಫ್ ಮೌಲ್ಯವನ್ನು 220 ರು ಗೆ ನಿಲ್ಲಿಸಿ ಷೇರುಗಳ ಮೌಲ್ಯ ಏರಿಳಿಕೆಯ ಬಗ್ಗೆ ಅಂಕ ನೀಡಿದ್ದ ಕ್ರೆಡಿಟ್ ಸುಸ್ಸೈ ಸಂಸ್ಥೆ ಭಾರ್ತಿ ಸಂಸ್ಥೆಗೆ ನೀಡಿದ ಅಂಕ ಅದರ ಷೇರು ಮೌಲ್ಯ ಕುಸಿತಕ್ಕೆ ನಾಂದಿ ಹಾಡಿದೆ.
ಇತ್ತೀಚೆಗೆ ಭಾರ್ತಿ ಸಂಸ್ಥೆ ಮಾರುಕಟ್ಟೆ ಮೌಲ್ಯ (m-cap: what is m-cap?) 1,08,305 ಕೋಟಿ ರು.ಗೆ ಕುಸಿದಿತ್ತು. ಹೀಗಾಗಿ ಅತಿ ಹೆಚ್ಚು ಮೌಲ್ಯಯುತ ಸಂಸ್ಥೆಗಳ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಇಳಿದಿದೆ.1,12,006 ಕೋಟಿ ರು m-cap ಮೌಲ್ಯದೊಂದಿಗೆ ಐಸಿಐಸಿಐ 10ನೇ ಸ್ಥಾನಕ್ಕೇರಿತ್ತು.
'ಭಾರ್ತಿ ಸಂಸ್ಥೆಯ ತ್ರೈಮಾಸಿಕದಲ್ಲಿ ಕುಸಿತ ಹಾಗೂ ದೇಶಿ ಮಾರುಕಟ್ಟೆ ಮತ್ತು ಅಫ್ರಿಕಾದ ಘಟಕದಲ್ಲಿ ನಿರೀಕ್ಷಿತ ಲಾಭ ಬರದಿರುವುದು ಸಂಸ್ಥೆಯ m-cap ಕುಸಿತಕ್ಕೆ ಕಾರಣವಾಗಿದೆ' ಎಂದು ಮೋತಿಲಾಲ್ ಓಸ್ವಾಲ್ ಸೆಕ್ಯುರಿಟಿಸ್ ನ ಉಪಾಧ್ಯಕ್ಷ ರಿಕೇಶ್ ಪಾರೀಖ್ ಹೇಳಿದ್ದರು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications

