
'ಭಾನುವಾರ ಬ್ಯಾಂಕ್ ತೆರೆಯುವುದರಿಂದ ಹೆಚ್ಚಿನ ಸಮಯ ದೊರೆಯುತ್ತದೆ ಮತ್ತು ವಹಿವಾಟಿನಲ್ಲೂ ವೃದ್ಧಿಯಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.
ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್ ಬಿಐ, ತಾಂತ್ರಿಕ ತೊಂದರೆಗಳಿಂದ ಒಂದು ದಿನ ವಹಿವಾಟು ನಿಂತು ಹೋದಾಗ ಕಳೆದ ವರ್ಷ ಅಕ್ಟೋಬರ್ 2 ರಂದು ಕಾರ್ಯ ನಿರ್ವಹಿಸಿ ಅಚ್ಚರಿ ಮೂಡಿಸಿತ್ತು.
ಈ ದಿನದ ವಹಿವಾಟಿನಿಂದ ಬ್ಯಾಂಕ್ ಗ್ರಾಹಕರು ಸಂತುಷ್ಟರಾಗಿದ್ದರು. ಈಗ ಅದೇ ನಿಯಮವನ್ನಾಗಿ ಮಾಡಲು ಆಲೋಚಿಸಿದೆ. ಅನೇಕ ಖಾಸಗಿ ಬ್ಯಾಂಕುಗಳು ತಮ್ಮ
ಕೆಲವು ಶಾಖೆಗಳನ್ನು ಭಾನುವಾರವೂ ತೆರೆದಿದ್ದು ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.
ಮುಖ್ಯವಾಗಿ ಭಾನುವಾರ ಬ್ಯಾಂಕ್ ತೆರೆಯುವುದರಿಂದ ಹೊಸ ಪೀಳಿಗೆಯ ದುಡಿಯುವ ಯುವಕರಿಗೆ ಬ್ಯಾಂಕಿಂಗ್ ಸೇವೆ ಒದಗಿಸಲು ಅನುಕೂಲವಾಗುತ್ತದೆ ಮತ್ತು ದಂಪತಿಯರಿಬ್ಬರೂ ನೌಕರಿಗೆ ಹೋಗುವವರಿಗೆ ಅನುಕೂಲವಾಗುತ್ತದೆ ಎಂದು ಎಸ್ ಬಿಐ ಮುಖ್ಯಸ್ಥ ಪ್ರತೀಪ್ ಚೌಧುರಿ ಹೇಳಿದ್ದಾರೆ.
ದೇಶಾದ್ಯಂತ 14 ಸಾವಿರ ಶಾಖೆಗಳಿರುವ ಎಸ್ ಬಿಐ ತನ್ನ ಖಾತೆಯ ಠೇವಣಿಯಿಂದಲೇ ಹೆಚ್ಚು ಲಾಭ ಗಳಿಸುತ್ತದೆ. ಕಳೆದ ದಶಕದಲ್ಲಿ 'ಪರಿವರ್ತನ' ಕಾರ್ಯಕ್ರಮದ ಮೂಲಕ ಎಸ್ ಬಿಐ ಮಾರುಕಟ್ಟೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.
ಎಸ್ ಬಿಐ ಕ್ರಮ ಅಗತ್ಯವಿದೆಯೇ?: ಖಾಸಗಿ ಬ್ಯಾಂಕ್ ಮ್ಯಾನೇಜ್ಮೆಂಟ್ ಗಳು ತಮ್ಮ ಬ್ಯಾಂಕ್ ಗಳ ವಿಸ್ತರಣೆ ಜೊತೆಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಬೆಳೆಯುತ್ತಿದೆ. ಸಾಲ ಸೌಲಭ್ಯಗಳಲ್ಲಿ ಬಡ್ಡಿದರ ಇಳಿಕೆ, EMI ಸೌಲಭ್ಯ ಕಾಲ ಕಾಲಕ್ಕೆ ಬದಲಾಗುತ್ತಿದೆ.
ಇದಕ್ಕೆ ಪೂರಕವಾಗಿ ಎಸ್ ಬಿಐ ಕೂಡಾ ಇತ್ತೀಚೆಗೆ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗೃಹ ಮತ್ತು ವಾಹನ ಸಾಲಗಳ ಬಡ್ಡಿದರಗಳನ್ನು ಶೇ 0.5 ರಷ್ಟು ಕಡಿತಗೊಳಿಸಿತ್ತು. ಆಗಸ್ಟ್ 7 ರಿಂದ ಇದು ಜಾರಿಗೆ ಬಂದಿದೆ. ಬಡ್ಡಿದರ ಇಳಿಕೆ ಹೊಸ ಸಾಲಗಾರರಿಗೆ ಅನುಕೂಲಕಾರವಾಗಿದ್ದರೂ, ಈಗಾಗಲೇ ಖಾತೆ ಹೊಂದಿರುವ ಗ್ರಾಹಕರಿಗೆ ಕೊಂಚ ಗೊಂದಲ ಮೂಡಿಸಿತ್ತು.
ಇದಕ್ಕೂ ಮುನ್ನ ಭಾರತೀಯ ಸ್ಟೇಟ್ಬ್ಯಾಂಕ್ ವಿಶೇಷವಾಗಿ ಕಿರು ಹಾಗೂ ಮಧ್ಯಮ ಉದ್ಯಮಗಳಿಗಾಗಿ ನೀಡುವ ಸಾಲ ದ ಬಡ್ಡಿದರವನ್ನು ಶೇ.05-ಶೇ.3.5ರಷ್ಟು ಕಡಿತಗೊಳಿಸುವ ಪ್ರಕಟಣೆ ನೀಡಿತ್ತು. ಗ್ರಾಹಕರ ಮೇಲಿನ ಹಿಡಿತವನ್ನು ಮುಂದುವರೆಸಿತ್ತು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications