
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ಬಡ್ಡಿ ದರವನ್ನು ಶೇ. 0.25ರಷ್ಟು ಕಡಿತಗೊಳಿಸಿದೆ. ದಶಕದ ಅತಿ ಕಡಿಮೆ ವೃದ್ಧಿ ದರ ಹೊಂದಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಆರ್ಬಿಐ ಈ ಕ್ರಮ ಕೈಗೊಂಡಿದೆ. ಕಳೆದ ಒಂಭತ್ತು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಬಡ್ಡಿದರ ಕಡಿತಗೊಳಿಸಲಾಗಿತ್ತು.
ಎಸ್ಬಿಐ ತನ್ನ ಮೂಲ ಬಡ್ಡಿ ದರವನ್ನು ಶೇ. 0.05ರಷ್ಟು ಕಡಿತಗೊಳಿಸಿದೆ. ಇದೀಗ ಬಡ್ಡಿ ದರ ಶೇ.9.7ರಷ್ಟಾಗಿದ್ದು, ಫೆ.4ರಿಂದ ಈ ಪರಿಷ್ಕೃತ ಬಡ್ಡಿದರ ಜಾರಿಗೆ ಬರಲಿದೆ ಎಂದು ಬ್ಯಾಂಕ್ನ ಉಪ ನಿರ್ದೇಶಕ ಆರ್. ವೆಂಕಟರಾಮನ್ ತಿಳಿಸಿದ್ದಾರೆ.
ಮೂಲ ಬಡ್ಡಿ ದರ ಕಡಿತದಿಂದಾಗಿ ಸಾಲದ ಬಡ್ಡಿ ದರದಲ್ಲೂ ಇಳಿಕೆಯಾಗುವ ಸಾಧ್ಯತೆ ಇದೆ. ಐಡಿಬಿಐ ಹಾಗೂ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲ್ಯಾಂಡ್ ಸಹ ಮೂಲಬಡ್ಡಿದರವನ್ನು ಕ್ರಮವಾಗಿ ಶೇ 0.75 ರಷ್ಟು ಹಾಗೂ ಶೇ.0.25 ರಷ್ಟು ಕಡಿತಗೊಳಿಸಿವೆ.
ಎಚ್ಡಿಎಫ್ಸಿ ಬ್ಯಾಂಕ್ ತನ್ನ ಕಾರ್ ಲೋನ್ನ ಬಡ್ಡಿ ದರವನ್ನು ಶೇ.0.05ರಷ್ಟು ಇಳಿಕೆ ಮಾಡಿದೆ. ದ್ವಿಚಕ್ರ ವಾಹನ ಬಡ್ಡಿದರ ಶೇ 0.5 ರಷ್ಟು ಇಳಿಕೆಯಾಗಿದೆ.
ಮುಂಬೈ ಮೂಲದ ಎಚ್ ಡಿಎಫ್ ಸಿ ಬ್ಯಾಂಕ್ ಪ್ರಸ್ತುತ ಶೇ 10.75 ಹಾಗೂ 11.75 ಬಡ್ಡಿದರರಂತೆ ವಾಹನ ಸಾಲ ನೀಡುತ್ತಿದೆ. ಪರಿಷ್ಕೃತ ದರದಂತೆ ಶೇ 10.5-11.5 ಆಗಲಿದೆ. ಇದೇ ರೀತಿ ದ್ವಿಚಕ್ರ ವಾಹನ ಸಾಲ ಶೇ 19.25-22.25 ರಷ್ಟಾಗಲಿದೆ.
ಬ್ಯಾಂಕಿನ ಈ ಕ್ರಮ ಮನೆ ಕಟ್ಟುವವರಿಗೆ ವರದಾನವಾಗಲಿದ್ದು, ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ಲಭ್ಯವಾಗಲಿದೆ. ಬಡ್ಡಿ ದರವನ್ನು ಎಷ್ಟು ಇಳಿಸಬೇಕೆನ್ನುವುದನ್ನು ಕೇಂದ್ರ ವಿತ್ತ ಇಲಾಖೆ ನಿರ್ಧರಿಸಿಲ್ಲ,
ಅದು ಆಯಾಯ ಬ್ಯಾಂಕ್ ಗಳಿಗೆ ಬಿಟ್ಟ ವಿಚಾರ ಎಂದು ಎ.ಎಲ್.ಸಿ.ಒ (Asset Liability Committee) ತಿಳಿಸಿದೆ. ಬ್ಯಾಂಕ್ಗಳು ಆರ್ ಬಿಐನಲ್ಲಿ ಇಡಬೇಕಾಗಿರುವ ಇಡುಗಂಟಿನ ಪ್ರಮಾಣ ಅಂದರೆ ಸಿಆರ್ಆರ್ ಅನ್ನೂ ಕಡಿತಗೊಳಿಸಿದೆ.
ಇದು ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ 18 ಸಾವಿರ ಕೋಟಿ ಹಣವನ್ನು ತುಂಬಲಿದ್ದು, ಬ್ಯಾಂಕ್ ಗಳ ವಹಿವಾಹಿಟಿಗೆ ಇನ್ನಷ್ಟು ಚೇತರಿಕೆ ನೀಡಲಿದೆ. ಕೇಂದ್ರ ಸರ್ಕಾರದ ಆರ್ಥಿಕ ಸುಧಾರಣಾ ನೀತಿಗೆ ಆರ್ಬಿಐನ ಈ ಕ್ರಮ ನೆರವಾಗಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕಾರ್ಪೋರೇಶನ್ ಬ್ಯಾಂಕ್, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಗಳು ಬಡ್ಡಿದರ ಇಳಿಕೆ ಬಗ್ಗೆ ಚಿಂತನೆ ನಡೆಸಿರುವ ಸುದ್ದಿ ಬಂದಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications
