ಬೆಂಗಳೂರು, ಸೆ. 29 : ಆತನ ಕಣ್ಣಲ್ಲಿ ಮಿಂಚಿತ್ತು, ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು. ಉತ್ಸಾಹದ ಚಿಲುಮೆಯಂತೆ ಕಾಣುತ್ತಿದ್ದವ ಮಕ್ಕಳಂತೆ ಲಾರಿಯನ್ನು ಏರಿ ಸಂಭ್ರಮಿಸಿದ. ಆತ್ಮವಿಶ್ವಾಸದ ಮಾತುಗಳನ್ನಾಡಿದ.
ಭಾನುವಾರ ಬೆಂಗಳೂರಿನ ಓರಿಯಾನ್ ಮಾಲ್ ಎದುರಿಗಿದ್ದವರಿಗೆ ದಿಢೀರ್ ಪ್ರತ್ಯಕ್ಷನಾದ ವ್ಯಕ್ತಿ ಯಾರೆಂಬುದು ಆ ಕ್ಷಣಕ್ಕೆ ಗೊತ್ತಾಗಲಿಲ್ಲ. ಬೋಳು ತಲೆ, ಅತ್ತ ಕುರ್ತಾನೂ ಅಲ್ಲದ, ಇತ್ತ ಸೂಟು ಬೂಟು ಅಲ್ಲದ ಡ್ರೆಸ್, ಕುತ್ತಿಗೆ ಮೇಲೊಂದು ಶಾಲು, ವಿಚಿತ್ರ ಅವತಾರದ ವ್ಯಕ್ತಿ ಲಾರಿ ಏರಿ ಸಂಭ್ರಮಿಸುತ್ತಿದ್ದ. ಹೌದು.. ಆನ್ ಲೈನ್ ಶಾಪಿಂಗ್ ಕಂಪನಿ ದೈತ್ಯ ಅಮೆಜಾನ್ ಡಾಟ್ ಕಾಮ್ ಸಿಇಒ ಜೆಫ್ ಬೆಜೋಸ್ ಭಾನುವಾರ ಸಂಭ್ರಮಿಸಿದ ಪರಿ ಹೀಗೆ ಇತ್ತು.

ವಿಶ್ವವೇ ಇಂದು ಸಮತೋಲಿತವಾಗಿ ಸಾಗುತ್ತಿದೆ, ನಾವು ಅದರಂತೆ ವಹಿವಾಟು ನಡೆಸುತ್ತಿದ್ದೇವೆ. ಭಾರತೀಯರಿಗೆ ಏನು ಬೇಕೋ ಅದನ್ನೇ ನೀಡುತ್ತಿದ್ದೇವೆ ಎಂಬುದು ಒಂದು ವರ್ಷದಲ್ಲಿ ಒಂದು ಬಿಲಿಯನ್ ಡಾಲರ್ (ಆರು ಸಾವಿರ ಕೋಟಿ ರೂ) ವಹಿವಾಟು ನಡೆಸಿರುವ ಆನ್ ಲೈನ್ ಶಾಪಿಂಗ್ ಕಂಪನಿ ದೈತ್ಯ ಅಮೆಜಾನ್ ಡಾಟ್ ಕಾಮ್ ಸಿಇಒ ಜೆಫ್ ಬೆಜೋಸ್ ಸ್ಷಷ್ಟಮಾತು.(ಅಮೆಜಾನ್ ತೆರಿಗೆ ಹೇರಿಕೆಗೆ ದಿಗ್ವಿಜಯ್ ಡಿಚ್ಚಿǃ)
ಬೆಂಗಳೂರಿನ ಒರಾಯನ್ ಮಾಲ್ ಎದುರು ಭಾನುವಾರ ಪ್ರತ್ಯಕ್ಷರಾದ ಜೆಫ್ ಬೆಜೋಸ್ ಲಾರಿ ಏರಿ ಸಂಭ್ರಮಿಸಿದರು. ಅವರಿಗೆ ಅಮೆಜಾನ್ ಡಾಟ್ ಕಾಮ್ ಭಾರತದ ಮ್ಯಾನೇಜರ್ ಅಮಿತ್ ಅಗರ್ ವಾಲ್ ಸಾಥ್ ನೀಡಿದರು.
ಕರ್ನಾಟಕ ಸರ್ಕಾರ ಅಮೆಜಾನ್ ಮೇಲೆ ಹೇರಿರುವ ತೆರಿಗೆಯಿಂದ ವ್ಯಾಪಾರ-ವಹಿವಾಟಿಗೆ ಯಾವ ತೊಂದರೆಯೂ ಆಗಿಲ್ಲ. ಎಂದಿನಂತೆ ಕಂಪನಿ ನಡೆದುಕೊಂಡು ಹೋಗುತ್ತಿದೆ. ಜನರಿಗೆ ಏನು ಬೇಕೋ ಅದನ್ನೇ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಬೆಜೋಸ್ ಹೇಳಿದರು.

ಸಾವಿರಾರು ಸಣ್ಣ ಉದ್ಯಮಿಗಳಿಗೆ ಕಂಪನಿ ನೆರವಾಗಿದೆ. ಪ್ರವಾಸದ ವೇಳೆ ಅನೇಕ ಅಧಿಕಾರಿಗಳನ್ನು ಭೇಟಿ ಮಾಡಲಿದ್ದೇನೆ. ನರೇಂದ್ರ ಮೋದಿ ಉದ್ಯಮ ಸ್ನೇಹಿ ನೀತಿ ಮೆಚ್ಚಲೇಬೇಕು. ಭಾರತದಲ್ಲಿ ಎರಡು ಮಿಲಿಯನ್ ಡಾಲರ್ ಬಂಡವಾಳ ಹೂಡಲು ಸಿದ್ಧರಾಗಿದ್ದೇವೆ. ಆಯ್ಕೆಗೆ ತಕ್ಕ ಅನಕೂಲತೆ ನಮ್ಮ ಆದ್ಯತೆ ಎಂದು ಹೇಳಿದರು.
ಅಮೆಜಾನ್ ಎದುರಾಳಿಗಳು ಯಾರು ?
ಬೆಂಗಳೂರು ಮೂಲದ ಫ್ಲಿಫ್ ಕಾರ್ಟ್, ಸ್ನಾಪ್ ಡೀಲ್ ಮತ್ತು ದೆಹಲಿ ಮೂಲದ ಇಬೇ ಅಮೆಜಾನ್ಗೆ ಪೈಪೋಟಿ ನೀಡುತ್ತಿವೆ. ಆದರೆ ವಹಿವಾಟಿನ ದೃಷ್ಟಿಯಲ್ಲಿ ಯಾವುದೂ ಸರಿಸಾಟಿಯಾಗುತ್ತಿಲ್ಲ. ಅತ್ತ ಚೀನಾದ 'ಅಲಿಬಾಬಾ' ನಿಂದಲೂ ನನಗೇನೂ ತೊಂದರೆಯಿಲ್ಲ ಎಂಬ ವಿಶ್ವಾಸದ ಮಾತು ಬೆಜೋಸ್ ಅವರದ್ದು.(ದಾಸ್ತಾನು ಎಲೆಕ್ಟ್ರಾನಿಕ್ ವಸ್ತುಗಳ ಮೇಲೂ ತೆರಿಗೆ ಭೂತ)
ಇದು ಎರಡನೇ ಭೇಟಿ
ಬೆಜೋಸ್ ಅವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಎರಡನೇ ಸಾರಿ. ಹಿಂದೆ ಭಾರತದಲ್ಲಿ ಅಮೆಜಾನ್ ಆರಂಭವಾದಾಗ ಬಂದಿದ್ದರು. ಈಗ ತಮ್ಮ 9 ವರ್ಷದ ಮಗನ ಜತೆ ಆಗಮಿಸಿದ್ದು ದೆಹಲಿ, ಪುಣೆ, ಮುಂಬೈ ಮತ್ತಿತರ ಮಹಾನಗರಗಳ ಪ್ರವಾಸ ಮಾಡುವ ಚಿಂತನೆಯಿದೆ ಎಂದು ತಿಳಿಸಿದರು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications