ನಾಗರಿಕರ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ: ಉರ್ಜಿತ್ ಪಟೇಲ್

ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ಹಳೆ ನೋಟು ನಿಷೇಧದ ಕುರಿತು ಮೌನ ಮುರಿದಿದ್ದು, ಜನಸಾಮಾನ್ಯರ ನಿಜವಾದ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಹಳೆ ನೋಟು ನಿಷೇಧದ ಕುರಿತು ಮೌನ ಮುರಿದಿದ್ದು, ಜನಸಾಮಾನ್ಯರ ನಿಜವಾದ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಶೀಘ್ರದಲ್ಲಿಯೇ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲಾಗುವುದು ಎಂದು ಹೇಳಿದರು.

ನಗದು ಮೀಸಲು ಅನುಪಾತ ಏರಿಕೆ

ನಗದು ಮೀಸಲು ಅನುಪಾತ ಏರಿಕೆ

ರಿಸರ್ವ್ ಬ್ಯಾಂಕ್ ನಾಗರಿಕರ ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಹಳೆ ನೋಟುಗಳ ಚಲಾವಣೆ ರದ್ದತಿ ನಂತರ ಬ್ಯಾಂಕು/ಅಂಚೆ ಕಚೇರಿಗಳಲ್ಲಿ ಠೇವಣಿ ಹೂಡಿಕೆ ಹೆಚ್ಚಾಗಿರುವುದರಿಂದ ನಗದು ಮೀಸಲು ಅನುಪಾತ ಶೇ. 100 ಏರಿಕೆಯಾಗಿದೆ.

ಡಿಜಿಟಲ್ ಪೇಮೆಂಟ್ಸ್ ಗೆ ಪ್ರೋತ್ಸಾಹ

ಡಿಜಿಟಲ್ ಪೇಮೆಂಟ್ಸ್ ಗೆ ಪ್ರೋತ್ಸಾಹ

100 ಮತ್ತು 500 ಮುಖಬೆಲೆಯ ನೋಟುಗಳನ್ನು ಮುದ್ರಿಸಿ ನೋಟುಗಳ ಕೊರತೆಯನ್ನು ಸರಿದೂಗಿಸಲು ಪ್ರಯತ್ನಿಸಲಾಗುತ್ತಿದೆ. ಜನರು ಹೆಚ್ಚೆಚ್ಚು ಡೆಬಿಟ್ ಕಾರ್ಡುಗಳು, ಡಿಜಿಟಲ್ ಪೇಮೆಂಟ್ಸ್ ಗಳನ್ನು ಬಳಸುವಂತಾಗಬೇಕು. ದೀರ್ಘಾವಧಿಯಲ್ಲಿ ನಗದಿಗಿಂತ ಕಾರ್ಡುಗಳನ್ನು ಬಳಸುವ ಮೂಲಕ ವ್ಯವಹಾರಗಳನ್ನು ಮಾಡಬೇಕು ಎಂದು ಹೇಳಿದರು.

ಬ್ಯಾಂಕುಗಳೊಂದಿಗೆ ಸಂವಾದ

ಬ್ಯಾಂಕುಗಳೊಂದಿಗೆ ಸಂವಾದ

ರಿಸರ್ವ್ ಬ್ಯಾಂಕು ದೇಶದ ಬ್ಯಾಂಕುಗಳೊಂದಿಗೆ ಪ್ರತಿನಿತ್ಯ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸುತ್ತಿದ್ದು, ಪರಿಸ್ಥಿತಿ ನಿಧಾನವಾಗಿ ಸಮತೋಲನಕ್ಕೆ ಬರುತ್ತಿದೆ. ಜನಸಾಮಾನ್ಯರ ದಿನನಿತ್ಯದ ಸರಕುಗಳ ಬಳಕೆಗೆ ಯಾವುದೇ ಕೊರತೆಯಿಲ್ಲ. ಆರ್ ಬಿಐ ಮತ್ತು ಕೇಂದ್ರ ಸರ್ಕಾರ ನೋಟುಗಳ ಮುದ್ರಣ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಜನರ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+