ಬೆಂಗಳೂರಿನಲ್ಲಿ ಮೇಕ್ ಇನ್ ಇಂಡಿಯಾ–ಕರ್ನಾಟಕ’ ಸಮ್ಮೇಳನ
ಫೆಬ್ರವರಿ 13 ಮತ್ತು 14 ರಂದು ‘ಮೇಕ್ ಇನ್ ಇಂಡಿಯಾ–ಕರ್ನಾಟಕ’ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಫೆಬ್ರವರಿ 13 ಮತ್ತು 14 ರಂದು 'ಮೇಕ್ ಇನ್ ಇಂಡಿಯಾ-ಕರ್ನಾಟಕ' ಸಮ್ಮೇಳನ ಆಯೋಜಿಸಲಾಗಿದೆ ಎಂದು ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಬೆಂಗಳೂರಿನಲ್ಲಿ 'ವೈಮಾನಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ರಾಕೆಟ್, ಉಪಗ್ರಹಗಳು, ನ್ಯಾನೊ ತಂತ್ರಜ್ಞಾನ, ರೊಬೋಟಿಕ್ಸ್, 3 ಡಿ ಪ್ರಿಂಟಿಂಗ್, ಡ್ರೋನ್ ಮುಂತಾದ ಕಂಪನಿಗಳು ಬೆಂಗಳೂರಿನಲ್ಲಿದ್ದು, ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆಗೆ ಸಮ್ಮೇಳನ ವೇದಿಕೆಯಾಗಲಿದೆ ಎಂದರು.
ಉಪಸ್ಥಿತರಿರುವ ಗಣ್ಯರು
ಮೇಕ್ ಇನ್ ಇಂಡಿಯಾ-ಕರ್ನಾಟಕ' ಸಮ್ಮೇಳನವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವರಾದ ಮನೋಹರ ಪರಿಕ್ಕರ್, ಎಂ.ವೆಂಕಯ್ಯನಾಯ್ಡು, ಸುರೇಶ್ ಪ್ರಭು, ಅನಂತಕುಮಾರ್, ಸ್ಮೃತಿ ಇರಾನಿ ಮುಂತಾದವರು ಉಪಸ್ಥಿತರಿರುವರು.
ಅರಾಕಲ್ ಘಟಕ
2,400 ಕೋಟಿ ವೆಚ್ಚದಲ್ಲಿ ಅರಾಕಲ್ ಕಂಪನಿಯು ಬೆಂಗಳೂರಿನಲ್ಲಿ ತಯಾರಿಕಾ ಘಟಕ ಸ್ಥಾಪಿಸಲಿದ್ದು, 10 ಸಾವಿರ ಉದ್ಯೋಗ ಸೃಷ್ಟಿ ಆಗಲಿದೆ ಎಂದು ದೇಶಪಾಂಡೆ ಹೇಳಿದರು.
ಎಲ್ & ಟಿ ಪಾರ್ಕ್
ಯಲಹಂಕ ಬಳಿ ವಿಶೇಷ ಆರ್ಥಿಕ ವಲಯ ಮತ್ತು ಐ.ಟಿ ಮೂಲ ಸೌಕರ್ಯದ ಪಾರ್ಕ್ ಸ್ಥಾಪಿಸಲು ಎಲ್ & ಟಿ ಸಂಸ್ಥೆ ಮುಂದಾಗಿದೆ. ಈ ಯೋಜನೆಗಳಿಗೆ ರೂ. 1230 ಕೋಟಿ ಬಂಡವಾಳ ತೊಡಗಿಸಲಿದ್ದು, 9,500 ಉದ್ಯೋಗಗಳು ಸೃಷ್ಟಿ ಆಗಲಿವೆ.