ಕೇಂದ್ರ ಸರ್ಕಾರ ಅನೇಕ ಹೊಸ ಯೋಜನೆಗಳಿಗೆ ಆಧಾರ್ ಕಡ್ಡಾಯ ಮಾಡುತ್ತಿದ್ದು, ಇದೀಗ ಬ್ಯಾಂಕು ವಹಿವಾಟುಗಳಿಗೆ ಆಧಾರ್ ಸಂಖ್ಯೆ ಕಡ್ಡಾಯ ಮಾಡುತ್ತಿದೆ. ರೂ. 50 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ವ್ಯವಹಾರ ನಡೆಸಲು ಆಧಾರ್ ನಮೂದಿಸುವುದು ಕಡ್ಡಾಯ.
ಕೇಂದ್ರ ಸರ್ಕಾರ ಅನೇಕ ಹೊಸ ಯೋಜನೆಗಳಿಗೆ ಆಧಾರ್ ಕಡ್ಡಾಯ ಮಾಡುತ್ತಿದ್ದು, ಇದೀಗ ಬ್ಯಾಂಕು ವಹಿವಾಟುಗಳಿಗೆ ಆಧಾರ್ ಸಂಖ್ಯೆ ಕಡ್ಡಾಯ ಮಾಡುತ್ತಿದೆ.
ಆಧಾರ್ ಸಂಖ್ಯೆ ಪ್ರತಿ ಭಾರತೀಯ ನಾಗರಿಕರ ಗುರುತು ಹಾಗೂ ಹೆಮ್ಮೆಯ ಪ್ರತೀಕವಾಗಿ ಮಾರ್ಪಡುತ್ತಿದೆ. ಹಲವು ಸೇವೆಗಳ ಆಧಾರ ಸ್ಥಂಭವಾಗಿ ಹಾಗೂ ಅಪಾರ ಪ್ರಯೋಜನಗಳಗಳನ್ನು ಪಡೆಯುವ ಸೇತುವೆಯಾಗಿ ಆಧಾರ್ ಪ್ರಾಮುಖ್ಯತೆ ಪಡೆದಿದೆ. ದೇಶದ ಯಾವುದೇ ಮೂಲೆಗೂ ಹೋದರೂ ವಿಳಾಸ ಮತ್ತು ಗುರುತಿನ ದಾಖಲಾತಿಯಾಗಿ ಪ್ರಮುಖ ಪಾತ್ರ ವಹಿಸುತ್ತಿದೆ. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ
ನೂತನ ಬ್ಯಾಂಕ್ ಖಾತೆ
ಹೊಸದಾಗಿ ಬ್ಯಾಂಕು ಖಾತೆ ತೆರೆಯಲು ಬಯಸುವ ಗ್ರಾಹಕರು ಆಧಾರ್ ಸಂಖ್ಯೆ ಕಡ್ಡಾಯವಾಗಿ ಒದಗಿಸಬೇಕು. ಜತೆಗೆ ರೂ. 50 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಹಣಕಾಸು ವ್ಯವಹಾರ ನಡೆಸಲು ಆಧಾರ್ ನಂಬರ್ ನಮೂದಿಸುವುದು ಕಡ್ಡಾಯ ಎಂದು ಸರ್ಕಾರ ಹೇಳಿದೆ.
ಹಳೆ ಬ್ಯಾಂಕು ಖಾತೆ ಸ್ಥಗಿತ
ಹೌದು. ಹೊಸ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಒದಗಿಸುವಂತೆ, ಈಗಾಗಲೇ ಬ್ಯಾಂಕ್ ಖಾತೆಗಳನ್ನು ಹೊಂದಿರುವವರು ಕೂಡ ಡಿಸೆಂಬರ್ 31, 2017ರ ಒಳಗಾಗಿ ಸಂಬಂಧಿಸಿದ ಬ್ಯಾಂಕುಗಳಿಗೆ ಆಧಾರ್ ಸಂಖ್ಯೆ ಸಲ್ಲಿಸಬೇಕು. ಇಲ್ಲದಿದ್ದರೆ ಅಂತಹ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು.
ಪ್ಯಾನ್ ನೊಂದಿಗೆ ಆಧಾರ್ ಕಡ್ಡಾಯ
ಕೇಂದ್ರ ನಿಯಮಾನುಸಾರ ಇನ್ನು ಮುಂದೆ ರೂ. 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಆರ್ಥಿಕ ವಹಿವಾಟು ನಡೆಸುವಂತಹ ವ್ಯಕ್ತಿಗಳು, ಕಂಪೆನಿ ಮತ್ತು ಪಾಲುದಾರಿಕೆ ಕಂಪನಿಗಳು ಪ್ಯಾನ್ ನಂಬರ್ ನೊಂದಿಗೆ ಆಧಾರ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು ಎಂದು ತಿಳಿಸಿದೆ.
6 ತಿಂಗಳ ಗಡುವು
ಪ್ಯಾನ್, ಆಧಾರ್ ಇಲ್ಲದಿದ್ದರೂ ಖಾತೆ ತೆರೆಯಲು ಸಾಧ್ಯ!
ಹಲವು ಬಾರಿ ಅನೇಕ ಗ್ರಾಹಕರ ಬಳಿ ಪ್ಯಾನ್ ಮತ್ತು ಆಧಾರ್ ಕಾರ್ಡ್ ಇರುವುದಿಲ್ಲ. ಅಂತಹ ಸಂದರ್ಭದಲ್ಲೂ ಬ್ಯಾಂಕುಗಳು ಖಾತೆ ತೆರೆಯಲು ಅವಕಾಶ ನೀಡಬೇಕು. ಆದರೆ ಅಂತಹ ಗ್ರಾಹಕರು ತಾವು ಆಧಾರ್ ಮತ್ತು ಪ್ಯಾನ್ ಕಾರ್ಡ್ ಪಡೆಯಲು ಅರ್ಹತೆ ಹೊಂದಿರುವುದನ್ನು ಬ್ಯಾಂಕಿಗೆ ಮನವರಿಕೆ ಮಾಡಿಸಬೇಕು. ಇಲ್ಲದಿದ್ದರೆ ಆಧಾರ್, ಪ್ಯಾನ್ ಗಾಗಿ ನೋಂದಣಿ ಮಾಡಿಕೊಂಡಿರುವ ದಾಖಲೆ ಒದಗಿಸಬೇಕು.
ಕೆವೈಸಿ ಸಂಗ್ರಹ
ಇನ್ನುಮುಂದೆ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ಗುರುತಿನ ವಿವರಗಳನ್ನು(know you customer) ತಪ್ಪದೆ ದಾಖಲಿಸಿ ಸಂಗ್ರಹಿಸಿಕೊಳ್ಳಬೇಕು. ಅಗತ್ಯವಿರುವ ಸಂದರ್ಭಗಳಲ್ಲಿ ಈ ಮಾಹಿತಿಯನ್ನು ಹಣಕಾಸು ಇಲಾಖೆಯ ಗುಪ್ತಚರ ವಿಭಾಗಕ್ಕೆ ಸಲ್ಲಿಸುವುದು ಕಡ್ಡಾಯ ಎಂದು ತಿದ್ದುಪಡಿ ನಿಯಮದಲ್ಲಿ ಉಲ್ಲೇಖಿಸಲಾಗಿದೆ.
ಸಣ್ಣ ಖಾತೆದಾರರಿಗೂ ನಿಯಮ
ಹೊಸ ನಿಯಮಾನುಸಾರ ಸಣ್ಣ ಖಾತೆದಾರರಿಗೂ ಕಟ್ಟುನಿಟ್ಟಿನ ನಿಯಮ ಅನ್ವಯವಾಗಲಿದೆ. ನಿಮ್ಮ ಗ್ರಾಹಕರನ್ನು ಅರಿಯಿರಿ(kyc) ದಾಖಲೆ ಇಲ್ಲದೆ ತೆರೆಯಲಾದ ಸಣ್ಣ ಖಾತೆದಾರರ ಖಾತೆಗಳ ಮೇಲೂ ಇನ್ನು ಮುಂದೆ ನೀಗಾ ಇಡಲಾಗುವುದು. ಹೊಸ ನಿಯಮದನ್ವಯ ರೂ. 50 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಇರಬಾರದು ಎಂದು ಹೇಳಿದೆ.
ಅಕ್ರಮ ವಹಿವಾಟುಗಳ ಮೇಲೆ ಖಡಕ್ ನೀಗಾ
ಭ್ರಷ್ಟಾಚಾರ, ಅಕ್ರಮ, ಭಯೋತ್ಪಾದಕ ಚಟುವಟಿಕೆ ಸೇರಿದಂತೆ ಕಾನೂನುಬಾಹಿರ ನಡೆಸಲಾಗುವ ಚಟುವಟಿಕೆಗಳಿಗೆ ಈ ಖಡಕ್ ನಿಯಮ ಅನ್ವಯವಾಗಲಿದೆ. ಅಕ್ರಮ ಹಣ ವರ್ಗಾವಣೆ ಮಾಡಿರುವಂತ ಶಂಕೆ ಅಥವಾ ಮಾಹಿತಿ ದೊರೆತರೆ ಕೂಡಲೇ ಅಂತಹ ಖಾತೆದಾರರನ್ನು ಕರೆಯಿಸಿ ವಿಚಾರಣೆಗೆ ಒಳಪಡಿಸಲಾಗುವುದು. ಜತೆಗೆ ಹಣದ ಮೂಲದ ದಾಖಲೆ ಒದಗಿಸುವಂತೆ ಸೂಚಿಸಲಾಗುವುದು ಎಂದು ಹೊಸ ತಿದ್ದುಪಡಿ ನಿಯಮ ಹೇಳುತ್ತದೆ. ಈ 20 ವ್ಯವಹಾರಗಳಿಗೆ ಪಾನ್ ಕಾರ್ಡ್ ಕಡ್ಡಾಯ
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications