ಬಾಬಾ ರಾಮದೇವ್ VS ರವಿ ಶಂಕರ್ ಗುರೂಜಿ! ಪತಂಜಲಿ ಜತೆ ಪೈಪೋಟಿ ಮಾಡುವರೆ?
ದೇಶದ ಪ್ರಸಿದ್ದ ಯೋಗ ಗುರು ಬಾಬಾ ರಾಮದೇವ್ ಹಾಗು ಆಧ್ಯಾತ್ಮ ಗುರು ಶ್ರೀ ರವಿ ಶಂಕರ್ ನಡುವೆ ಪೈಪೋಟಿ! ಹೇಗೆ ಅಂತಿರಾ? ಪತಂಜಲಿ ಉತ್ಪನ್ನಗಳಂತೆ ರವಿ ಶಂಕರ್ ಗುರೂಜಿ ಕೂಡ ಆಯುರ್ವೇದಿಕ್/ಹರ್ಬಲ್ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ.
ದೇಶದ ಪ್ರಸಿದ್ದ ಯೋಗ ಗುರು ಬಾಬಾ ರಾಮದೇವ್ ಹಾಗು ಆಧ್ಯಾತ್ಮ ಗುರು ಶ್ರೀ ರವಿ ಶಂಕರ್ ನಡುವೆ ಪೈಪೋಟಿ!
ಹೇಗೆ ಅಂತಿರಾ? ಪತಂಜಲಿ ಉತ್ಪನ್ನಗಳಂತೆ ರವಿ ಶಂಕರ್ ಗುರೂಜಿ ಕೂಡ ಆಯುರ್ವೇದಿಕ್/ಹರ್ಬಲ್ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ.
ಶೀಘ್ರದಲ್ಲೇ ಬಾಬಾ ರಾಮದೇವ್ ಪತಂಜಲಿ ಬ್ರ್ಯಾಂಡ್ ಬಟ್ಟೆಗಳು!
1000 ಮಳಿಗೆಗಳು
ಆರ್ಟ್ ಆಫ್ ಲಿವಿಂಗ್ ಫೌಂಡೆಶನ್ ಸಂಸ್ಥಾಪಕರಾದ ಶ್ರೀ ರವಿ ಶಂಕರ್ ಗುರೂಜಿಯವರು ದೇಶದಾದ್ಯಂತ ಸುಮಾರು ಒಂದು ಸಾವಿರ ಚಿಲ್ಲರೆ ಮಳಿಗೆಗಳನ್ನು ತೆರೆಯಲಿದ್ದಾರೆ.
ಯಾವ ಉತ್ಪನ್ನಗಳು
ಪತಂಜಲಿಯ ವೇಗವಾಗಿ ಚಲಿಸುವ ಗ್ರಾಹಕ ಸರಕುಗಳಂತೆ(FMCG)ಇದು ಕೂಡ ಆಯುರ್ವೇದಿಕ್ ಉತ್ಪನ್ನಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಿದೆ. ಇದರಲ್ಲಿ ಟೂಥ್ ಪೇಸ್ಟ್, ಸೋಪ್, ಡಿಟರ್ಜೆಂಟ್, ಮೊಸರು, ಅಡುಗೆ ಉತ್ಪನ್ನಗಳು, ಆರೋಗ್ಯ ಪಾನೀಯಗಳು, ಸುಗಂಧ ದ್ರವ್ಯಗಳು ಮತ್ತು ಮಸಾಲೆಗಳನ್ನು ಮಾರಾಟ ಮಾಡಲಿದೆ.
ಹರ್ಬಲ್ ಬೇಡಿಕೆ ಮಹಿಮೆ!
ಪತಂಜಲಿ ಉತ್ಪನ್ನಗಳ ನಂತರದಲ್ಲಿ ದೇಶದಾದ್ಯಂತ ಆರ್ಯುವೇದಿಕ್/ಗಿಡಮೂಲಿಕೆ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಕಂಡುಬರುತ್ತಿದೆ. ಜನರು ಹರ್ಬಲ್ ಉತ್ಪನ್ನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಶ್ರೀ ರವಿಶಂಕರ್ ಗುರೂಜಿ ಕೂಡ ಈ ಉತ್ಪನ್ನಗಳ ಮಾರಾಟದತ್ತ ಆಕರ್ಷಿತರಾಗಿದ್ದಾರೆ!
ಕ್ಲಿನಿಕ್ ಮತ್ತು ಚಿಕಿತ್ಸಾ ಕೇಂದ್ರ ಆರಂಭ
ದೇಶದ ಎರಡನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ಗೌರವ ಪಡೆದ ಶ್ರೀ ಶ್ರೀ ಅವರು, ಕ್ಲಿನಿಕ್ ಮತ್ತು ಚಿಕಿತ್ಸಾ ಕೇಂದ್ರಗಳನ್ನು ಪ್ರಾರಂಭಿಸಲಿದ್ದಾರೆ. ಇಲ್ಲಿಯವರೆಗೆ ಭಾರತದ ಎಂಎನ್ಸಿ (ಬಹುರಾಷ್ಟ್ರೀಯ ಕಾರ್ಪೊರೇಷನ್) ಗ್ರಾಹಕ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿರುವ ಬಾಬಾ ರಾಮದೇವ್ ನೇತೃತ್ವದ ಪತಂಜಲಿ ತಂತ್ರಗಾರಿಕೆಯಂತೆಯೇ ರವಿ ಶಂಕರ್ ಗುರೂಜಿ ಪೈಪೋಟಿ ನೀಡಲಿದ್ದಾರೆ.
ಲಾಂಚ್ ಯಾವಾಗ?
ಕೆಎಫ್ಸಿ, ಮ್ಯಾಕ್ ಡೊನಾಲ್ಡ್ ಗೆ ಸ್ಪರ್ಧಿಯಾಗಿ ಪತಂಜಲಿ ಸರಣಿ ರೆಸ್ಟೋರೆಂಟ್ ಸ್ಥಾಪನೆ