For Quick Alerts
For Daily Alerts
ನಂದನ್ ನಿಲಕೇಣಿ ಇನ್ಫೋಸಿಸ್ ಸಾರಥಿ ಆಗುವರೆ?
ಇನ್ಫೋಸಿಸ್ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ನಂದನ್ ನಿಲೇಕಣಿ ಅವರನ್ನು ಕಂಪನಿಗೆ ವಾಪಸ್ಸು ಕರೆತರುವ ಕೂಗು ಜೋರಾಗಿದೆ!
|
ಇನ್ಫೋಸಿಸ್ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ನಂದನ್ ನಿಲೇಕಣಿ ಅವರನ್ನು ಕಂಪನಿಗೆ ವಾಪಸ್ಸು ಕರೆತರಬೇಕೆಂಬ ಕೂಗು ಜೋರಾಗಿದೆ!
ವಿಶಾಲ್ ಸಿಕ್ಕಾ ಅವರ ನಿರ್ಗಮನದ ನಂತರ ಅನೇಕ ತೊಡಕುಗಳು ಸಂಭವಿಸಿದ್ದು, ನಂದನ್ ನಿಲೇಕಣಿ ಅವರ ಹಿಂತಿರುಗುವಿಕೆಯಿಂದ ಕಂಪನಿಯ ಪುನರ್ ಚೇತನ ಸಾಧ್ಯವಾಗಲಿದೆ ಎಂದು ಹಲವು ತಜ್ಞರು ಮತ್ತು ಸಲಹಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಸಮರ್ಥ ವ್ಯಕ್ತಿಯಾಗಿರುವ ನಿಲೇಕಣಿ ಅವರನ್ನು ಅಹ್ವಾನಿಸಲು ಮಂಡಳಿಗೆ ಪತ್ರ ಬರೆಯಲಾಗಿದೆ.
ಪ್ರಸ್ತುತ ಇನ್ಫೋಸಿಸ್ ನಲ್ಲಿರುವ ಗೊಂದಲಗಳನ್ನು ನಿವಾರಿಸಲು ನಂದನ್ ನಿಲೇಕಣಿಯಂತಹ ವ್ಯಕ್ತಿಗಳಿಂದ ಮಾತ್ರ ಸಾಧ್ಯವಿದ್ದು, ಮಂಡಳಿಯೊಂದಿಗೆ ಉತ್ತಮ ಸಮನ್ವಯತೆ ವಾತಾವರಣ ಉಂಟುಮಾಡಬೇಕಿದೆ. ಎನ್ ಆರ್ ನಾರಾಯಣ ಮೂರ್ತಿಯವರನ್ನು ಕೂಡ ನಿಲೇಕಣಿ ಸಮರ್ಥವಾಗಿ ನಿಭಾಯಿಸಬಲ್ಲರು ಎನ್ನಲಾಗಿದೆ.
English summary