ಜಿಯೋ ಪ್ರಾರಂಭದಿಂದ ಇಲ್ಲಿಯವರೆಗೆ ಹೊಸ ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಾ ಹೊಸ ಹೊಸ ಆಫರ್ ಗಳನ್ನು ಘೋಷಿಸುತ್ತಾ ಬಂದಿದೆ. ಇದೀಗ ದೀಪಾವಳಿಗೆ ಜಿಯೋ ಧನ್ ಧನಾ ಧನ್ 100% ಕ್ಯಾಶ್ ಬ್ಯಾಕ್ ಕೊಡುಗೆ ನೀಡಿದೆ.
ದೇಶದ ಟೆಲಿಕಾಂ ರಂಗದಲ್ಲಿ ಜಿಯೋ ಪ್ರವೇಶಾತಿ ನಂತರ ಹೊಸ ಸಂಚಲನದ ಅಲೆಗಳು ಶುರುವಾಗಿದ್ದು, ಜಿಯೋಮಯದಿಂದ ದರ ಸಮರಗಳು ಗಗನಕ್ಕೆರಿವೆ..!
ಜಿಯೋ ಪ್ರಾರಂಭದಿಂದ ಇಲ್ಲಿಯವರೆಗೆ ಹೊಸ ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಾ ಹೊಸ ಹೊಸ ಆಫರ್ ಗಳನ್ನು ಘೋಷಿಸುತ್ತಾ ಬಂದಿದೆ. ಇದೀಗ ದೀಪಾವಳಿಗೆ ಜಿಯೋ ಧನ್ ಧನಾ ಧನ್ 100% ಕ್ಯಾಶ್ ಬ್ಯಾಕ್ ಕೊಡುಗೆ ನೀಡಿದೆ. ಜಿಯೋಗೆ ತಿರುಗೇಟು! ರೂ. 1,399 ಬೆಲೆಗೆ ಏರ್ಟೆಲ್ 4G ಸ್ಮಾರ್ಟ್ಫೋನ್ ಲಭ್ಯ!!
ಏನಿದು 100% ಕ್ಯಾಶ್ ಬ್ಯಾಕ್ ಆಫರ್?
ಮೂರು ತಿಂಗಳ ಅವಧಿಗೆ ಅನ್ ಲಿಮಿಟೆಡ್ ಕರೆ ಹಾಗೂ ಪ್ರತಿ ದಿನ 1gbಯಂತೆ ಡೇಟಾ ಬಳಕೆಗಾಗಿ ರೂ. 399 ರೀಚಾರ್ಜ್ ಆಫರ್ ನೀಡಿತ್ತು. ಇದೀಗ ಜಿಯೋ ರೂ. 399 ರೀಚಾರ್ಜ್ ಹಣವನ್ನು ಗ್ರಾಹಕರಿಗೆ ವಾಪಾಸ್ ಮರಳಿಸಲು ನಿರ್ಧರಿಸಿದೆ. ಜಿಯೋ ಧನ್ ಧನಾ ಧನ್ ಫೋಸ್ಟರ್ಗಳ ಮೂಲಕ ಈ ಆಫರ್ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದೆ.
ಕ್ಯಾಶ್ ಬ್ಯಾಕ್ ವೋಚರ್
ಗ್ರಾಹಕರು ರೂ. 399 ಪ್ಲಾನ್ ರೀಚಾರ್ಜ್ ಮಾಡುವಾಗ ನೀಡುವ ಹಣ ಕ್ಯಾಶ್ಬ್ಯಾಕ್ ವೋಚರ್ ರೂಪದಲ್ಲಿ ನೀಡಲಾಗುತ್ತದೆ. ಅಂದರೆ ರೂ. 50ರ 8 ವೋಚರ್ಗಳ ಮೂಲಕ ಮರಳಿ ಪಡೆಯಬಹುದಾಗಿದೆ. ಗ್ರಾಹಕರು ಆ ವೋಚರ್ಗಳನ್ನು ಮುಂದಿನ ದಿನಗಳಲ್ಲಿ ಅವಶ್ಯಕತೆ ಇದ್ದಾಗ ಬಳಸಿಕೊಂಡು ಪುನಃ ರೀಚಾರ್ಜ್ ಮಾಡಿಕೊಳ್ಳಬಹುದು.
ವೋಚರ್ ಗಳನ್ನು ಯಾವಾಗ ಬಳಸಬಹುದು?
ರೂ. 399 ಪ್ಲಾನ್ ರೀಚಾರ್ಜ್ ಮಾಡುವಾಗ ಪಡೆಯುವ ವೋಚರ್ಗಳನ್ನು ನವೆಂಬರ್ 15ರ ನಂತರ ಮಾತ್ರ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು.
ಕ್ಯಾಶ್ಬ್ಯಾಕ್ ಆಫರ್ ಅವಧಿ
100% ಕ್ಯಾಶ್ ಬ್ಯಾಕ್ ಆಫರ್ ಅಕ್ಟೋಬರ್ 12ರಿಂದ 19ರವರೆಗೆ ಮಾತ್ರ ಅನ್ವಯವಾಗಲಿದೆ. ಈ ದಿನಾಂಕದೊಳಗೆ ರೀಚಾರ್ಜ್ ಮಾಡಿಸಿದವರು ಜಿಯೋ ನೀಡುವ ವೋಚರ್ಗಳ ಲಾಭ ಪಡೆದುಕೊಳ್ಳಬಹುದು.
ಧನ್ ಧನಾ ಧನ್ ಆಫರ್ ಸೌಲಭ್ಯಗಳೇನು?
ಡೇಟಾ ಪ್ಯಾಕ್ ಆ್ಯಕ್ಟಿವ್ ಇರುವ ಗ್ರಾಹಕರು ಕೂಡ ಈ ಆಫರ್ ಲಾಭ ಪಡೆಯಬಹುದಾಗಿದೆ. ಜಿಯೋ ರೂ. 399 ರೂಪಾಯಿಯ ಧನ್ ಧನಾ ಧನ್ ಪ್ರಿಪೇಡ್ ಗ್ರಾಹಕರಿಗೆ 84GB ಡೇಟಾ ನೀಡಲಿದೆ. 84 ದಿನಗಳ ಕಾಲ ಪ್ರತಿದಿನ ಬಳಕೆದಾರ 1gb ಡೇಟಾ ಬಳಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಉಚಿತ ಎಸ್ಎಂಎಸ್, ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಪೋಸ್ಟ್ ಪೇಯ್ಡ್ ಗ್ರಾಹಕರಿಗೂ ಈ ಸೌಲಭ್ಯವಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications