ನೋಟುಬಂದಿ ನಂತರ ಇದೀಗ ನಾಣ್ಯ ಉತ್ಪಾದನೆ ಬಂದ್!
ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಹಿಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಹಿಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಂಡಿದೆ.
ದೇಶದ ಆರ್ಥಿಕತೆಯ ಮೇಲೆ ಜಿಎಸ್ಟಿ ಹಾಗು ಅನಾಣ್ಯೀಕರಣ ಅತಿಹೆಚ್ಚು ಪ್ರಭಾವ ಬೀರಿವೆ. ಅಧಿಕ ಮೌಲ್ಯದ ನೋಟುಗಳನ್ನು ನಿಷೇಧ ಮಾಡಿದ್ದ ಮೋದಿ ಸರ್ಕಾರ ಇದೀಗ ನಾಣ್ಯಗಳನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ತಯಾರಿ ನಡೆಸಿದೆ.
ನೋಯಿಡಾ, ಮುಂಬಯಿ, ಕೋಲ್ಕತ್ತಾ ಹಾಗು ಹೈದರಾಬಾದ್ ಗಳಲ್ಲಿ ನಾಣ್ಯ ಉತ್ಪಾದನೆಯನ್ನು ಸರ್ಕಾರ ಬಂದ್ ಮಾಡಿದೆ. ಈ ನಾಲ್ಕು ನಗರಗಳಲ್ಲಿ ಮಾತ್ರ ನಾಣ್ಯಗಳ ಉತ್ಪಾದನೆ ನಡೆಯುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಧಿಕಾರಿಗಳ ಪ್ರಕಾರ ಮಂಗಳವಾರದಿಂದ ನಾಣ್ಯ ತಯಾರಿ ಬಂದ್ ಆಗಿದೆ. ನೋಟು ರದ್ದತಿ ನಂತರದಲ್ಲಿ ನಾಣ್ಯಗಳ ಉತ್ಪಾದನೆಯನ್ನು ಹೆಚ್ಚು ಮಾಡಲಾಗಿತ್ತು. ಪ್ರಸ್ತುತ ಆರ್ಬಿಐ ಹತ್ತಿರ 2500 MPCS ನಾಣ್ಯಗಳಿವೆ ಎನ್ನಲಾಗಿದೆ. ಹೀಗಾಗಿ ನಾಣ್ಯಗಳ ಉತ್ಪಾದನೆ ನಿಲ್ಲಿಸಲಾಗಿದೆ. ಆರ್ಬಿಐ ಮುಂದಿನ ಆದೇಶದವರೆಗೆ ನಾಣ್ಯಗಳ ಉತ್ಪಾದನೆ ಇರುವುದಿಲ್ಲ ಎನ್ನಲಾಗಿದೆ.