ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ದೇಶದ ಪ್ರಮುಖ 9 ಬ್ಯಾಂಕುಗಳು ತಮ್ಮ ಶಾಖೆಗಳನ್ನು ಮುಚ್ಚಲು ಚಿಂತನೆ ನಡೆಸಿವೆ.
ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ದೇಶದ ಪ್ರಮುಖ 9 ಬ್ಯಾಂಕುಗಳು ತಮ್ಮ ಶಾಖೆಗಳನ್ನು ಮುಚ್ಚಲು ಚಿಂತನೆ ನಡೆಸಿವೆ.

ಕಳೆದ ತಿಂಗಳು ಈ 11 ಬ್ಯಾಂಕುಗಳ ಹಣಕಾಸನ್ನು ಬಲಪಡಿಸಲು ಮತ್ತು ಆರ್ಬಿಐ ಬಂಡವಾಳದ ಅಗತ್ಯತೆಗಳನ್ನು ಪೂರೈಸುವ ಯೋಜನೆಯನ್ನು ರೂಪಿಸಲು ಹಣಕಾಸು ಸಚಿವ ಪಿಯೂಷ್ ಗೋಯಲ್ ಕೇಳಿಕೊಂಡಿದ್ದರು. ಆ ಶಾಖೆಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಬ್ಯಾಂಕ್ ಗಳು ಈ ನಿರ್ಧಾರಕ್ಕೆ ಬಂದಿವೆ. ಹಾಗಾಗಿ ಬ್ಯಾಂಕ್ ಗಳು ಅನೇಕ ಕಡೆಯಿರುವ ತಮ್ಮ ಶಾಖೆಗಳನ್ನು ಬಂದ್ ಮಾಡಲಿವೆ.
ದೇನಾ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಕಾರ್ಪೊರೇಶನ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಯುಕೋ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ಇವು ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (ಪಿಸಿಎ) ಅಡಿಯಲ್ಲಿವೆ. 9 ಬ್ಯಾಂಕ್ ಗಳು ಈ ಬಗ್ಗೆ ವರದಿ ತಯಾರಿಸಿ ಹಣಕಾಸು ಇಲಾಖೆಗೆ ಸಲ್ಲಿಸಿವೆ. ಸಾರ್ವಜನಿಕ ಕ್ಷೇತ್ರದ 11 ಬ್ಯಾಂಕುಗಳ ಪೈಕಿ 9 ಬ್ಯಾಂಕ್ ಗಳು ಎರಡು ವರ್ಷದ ಸುಧಾರಣಾ ಯೋಜನೆಯನ್ನು ಸಲ್ಲಿಸಿವೆ.
ಹಣಕಾಸು ಪರಿಸ್ಥಿತಿ ಸುಧಾರಿಸಲು ಯಾವ ಕ್ರಮ ಕೈಗೊಳ್ಳಲಿವೆ ಎಂಬುದನ್ನು ವರದಿ ಮೂಲಕ ತಿಳಿಸುವಂತೆ ಹಣಕಾಸು ಸಚಿವಾಲಯ ಸೂಚಿಸಿತ್ತು.


Click it and Unblock the Notifications