ಕೇರಳ ಪ್ರವಾಹ, ಯುಎಇ ಸರ್ಕಾರದಿಂದ ರೂ. 700 ಕೋಟಿ ನೆರವು
ಪ್ರವಾಹದಿಂದ ನಾಶವಾಗಿರುವ ರಾಜ್ಯದ ಪುನರ್ ನಿರ್ಮಾಣಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರ ಆರ್ಥಿಕ ನೆರವನ್ನು ರೂ. 700 ಕೋಟಿಗೆ ವಿಸ್ತರಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿನರೈ ವಿಜಯನ್ ಹೇಳಿದ್ದಾರೆ.
ಕೇರಳ ಪ್ರವಾಹಕ್ಕೆ ಸಿಲುಕಿ ನಾಶವಾಗಿರುವುದರಿಂದ ರಾಜ್ಯದ ಪುನರ್ ನಿರ್ಮಾಣಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರ ಆರ್ಥಿಕ ನೆರವನ್ನು ರೂ. 700 ಕೋಟಿಗೆ ವಿಸ್ತರಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿನರೈ ವಿಜಯನ್ ಹೇಳಿದ್ದಾರೆ.
ಕೇರಳದಲ್ಲಿ ವಿನಾಶಕಾರಿ ಪ್ರವಾಹಗಳಿಂದಾಗಿ ಆಗಸ್ಟ್ 8 ರಿಂದ 223 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. "ಕೇರಳದ ವಿನಾಶಕಾರಿ ಪ್ರವಾಹಗಳು ಮತ್ತು ಭೂಕುಸಿತಗಳ ತೀವ್ರತೆ ಮತ್ತು ಪರಿಮಾಣವನ್ನು ಗಮನದಲ್ಲಿಟ್ಟುಕೊಂಡು "ತೀವ್ರ ಸ್ವರೂಪದ ವಿಪತ್ತು" ಎಂದು ಕೇಂದ್ರವು ಘೋಷಿಸಿದೆ.
ಕೇರಳದ ಹಲವಾರು ಜನರಿಗೆ ಯು.ಎ.ಇ ನೆಲೆಯಾಗಿದೆ. ಅಂದಾಜಿನ ಪ್ರಕಾರ, ಯುಎಇನಲ್ಲಿ 2 ಮಿಲಿಯನ್ ಭಾರತೀಯರು ವಾಸಿಸುತ್ತಿದ್ದಾರೆ.
ಕೇರಳದ ಜನರು ಯಾವಾಗಲೂ ಯುಎಇಯಲ್ಲಿ ನಮ್ಮ ಯಶಸ್ಸಿನ ಕಥೆಯ ಭಾಗವಾಗಿದ್ದಾರೆ,ಎಂದು ಯುಎಇ ಉಪಾಧ್ಯಕ್ಷರು ಟ್ವೀಟ್ ಮಾಡಿದ್ದಾರೆ. ಪ್ರವಾಹ ಪೀಡಿತರಿಗೆ ನೆರವಾಗಲು ಯುಎಇ ಸರ್ಕಾರ ರಾಷ್ಟ್ರೀಯ ತುರ್ತು ಸಮಿತಿ ರಚಿಸಿದೆ. ನೀವು ಕೊಡಗು ಪ್ರವಾಹ ಪೀಡಿತರಿಗೆ ಹೇಗೆ ಸಹಾಯ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ..