For Quick Alerts
ALLOW NOTIFICATIONS  
For Daily Alerts

Karnataka Budget 2019 LIVE : ರೈತರಿಗಾಗಿ 'ಗೃಹಲಕ್ಷ್ಮಿ' ಯೋಜನೆ

|

ಬೆಂಗಳೂರು, ಫೆಬ್ರವರಿ 08: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ದೋಸ್ತಿ ಸರ್ಕಾರದ ಎರಡನೇ ಬಜೆಟ್ ಅನ್ನು ಮಂಡಿಸುದ್ದಾರೆ. ಇಂದಿನ ವಿಧಾನಸಭಾ ಅಧಿವೇಶನದ ಸಾಕಷ್ಟು ನಾಟಕೀಯ ಬದಲಾವಣೆಗಳಾಗಬಹುದು ಎಂಬ ನಿರೀಕ್ಷೆಗಳೆಲ್ಲ ಸುಳ್ಳಾಗಿದ್ದು, ಸುಸೂತ್ರವಾಗಿ ಬಜೆಟ್ ಮಂಡನೆಯಾಗಿದೆ.

ಕುಮಾರಸ್ವಾಮಿ ಬಜೆಟ್ ಮಂಡನೆ: ಬಿಜೆಪಿ ತಂತ್ರವೇನು?

ಬುಧವಾರದಿಂದ ಆರಂಭವಾಗಿದ್ದ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೂ ಅವಕಾಶ ನೀಡದೆ, ಯಾವುದೇ ರೀತಿಯ ಚರ್ಚೆಗೂ ಎಡೆಮಾಡಿಕೊಡದೆ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ಸರ್ಕಾರದ ಬಳಿ ಬಹುಮತವಿಲ್ಲ, ಆದ್ದರಿಂದ ಬಜೆಟ್ ಮಂಡಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಘೋಷಣೆ ಕೂಗಿ, ಬಿಜೆಪಿ ಶಾಸಕರು ಅಧಿವೇಶನಕ್ಕೆ ಅಡ್ಡಿಪಡಿಸಿದ್ದರು.

ಕಾಂಗ್ರೆಸ್ ಶಾಸಕರಿಗೆ ವ್ಹಿಪ್ ಜಾರಿಗೊಳಿಸಲಾಗಿದ್ದರೂ, ಕಾಂಗ್ರೆಸ್ ನ ಎಂಟಕ್ಕೂ ಹೆಚ್ಚು ಶಾಸಕರು ಮತ್ತು ಜೆಡಿಎಸ್ ನ ಓರ್ವ ಶಾಸಕ ಬುಧವಾರದಿಂದಲೂ ಗೈರಾಗಿದ್ದರು. ಇಂದು ಸಹ ಐವರು ಶಾಸಕರು ಗೈರಾಗಿದ್ದರೆ, ಬಜೆಟ್ ಮಂಡನೆಯಾಗುತ್ತಿದ್ದಂತೆಯೇ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿಬಿಟ್ಟರು.

ಬಜೆಟ್ ಅಧಿವೇಶನ ನಡೆಯಲು ಬಿಡದ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Karnataka Budget 2019 LIVE :ರೈತರಿಗಾಗಿ 'ಗೃಹಲಕ್ಷ್ಮಿ' ಯೋಜನೆ

ಬಜೆಟ್ ನಲ್ಲಿ ರೈತರಿಗೆ ಮತ್ತು ಜಲಸಂಪನ್ಮೂಲ ಇಲಾಖಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ರೈತರ ಆಭರಣದ ಮೇಲೆ ಸಾಲ ನೀಡುವ ಗೃಹಲಕ್ಷ್ಮಿ ಯೋಜನಯಿಂದ ಹಿಡಿದು, ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಸದನದಲ್ಲಿ ಮುಂದುವರಿದ ಬಿಜೆಪಿ ಗದ್ದಲ, ಕಲಾಪ ಮುಂದೂಡಿಕೆ

ಕರ್ನಾಟಕ ಬಜೆಟ್ ಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಗುಡ್ ರಿಟರ್ನ್ಸ್ ಕನ್ನಡ ಮತ್ತು ಒನ್ ಇಂಡಿಯಾ ಕನ್ನಡ ನೀಡಲಿದೆ.

English summary

Karnataka Budget 2019 LIVE coverage: HD Kumaraswamy to present budget today

Karnataka Budget 2019 LIVE coverage in Kannada. Chief minister HD Kumaraswamy who holds finance ministry with him, will be presenting Karnataka state budget 2019 today.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X