ಬೆಂಗಳೂರು, ಫೆಬ್ರವರಿ 08: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ದೋಸ್ತಿ ಸರ್ಕಾರದ ಎರಡನೇ ಬಜೆಟ್ ಅನ್ನು ಮಂಡಿಸುದ್ದಾರೆ. ಇಂದಿನ ವಿಧಾನಸಭಾ ಅಧಿವೇಶನದ ಸಾಕಷ್ಟು ನಾಟಕೀಯ ಬದಲಾವಣೆಗಳಾಗಬಹುದು ಎಂಬ ನಿರೀಕ್ಷೆಗಳೆಲ್ಲ ಸುಳ್ಳಾಗಿದ್ದು, ಸುಸೂತ್ರವಾಗಿ ಬಜೆಟ್ ಮಂಡನೆಯಾಗಿದೆ.
ಕುಮಾರಸ್ವಾಮಿ ಬಜೆಟ್ ಮಂಡನೆ: ಬಿಜೆಪಿ ತಂತ್ರವೇನು?
ಬುಧವಾರದಿಂದ ಆರಂಭವಾಗಿದ್ದ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೂ ಅವಕಾಶ ನೀಡದೆ, ಯಾವುದೇ ರೀತಿಯ ಚರ್ಚೆಗೂ ಎಡೆಮಾಡಿಕೊಡದೆ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ಸರ್ಕಾರದ ಬಳಿ ಬಹುಮತವಿಲ್ಲ, ಆದ್ದರಿಂದ ಬಜೆಟ್ ಮಂಡಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಘೋಷಣೆ ಕೂಗಿ, ಬಿಜೆಪಿ ಶಾಸಕರು ಅಧಿವೇಶನಕ್ಕೆ ಅಡ್ಡಿಪಡಿಸಿದ್ದರು.
ಕಾಂಗ್ರೆಸ್ ಶಾಸಕರಿಗೆ ವ್ಹಿಪ್ ಜಾರಿಗೊಳಿಸಲಾಗಿದ್ದರೂ, ಕಾಂಗ್ರೆಸ್ ನ ಎಂಟಕ್ಕೂ ಹೆಚ್ಚು ಶಾಸಕರು ಮತ್ತು ಜೆಡಿಎಸ್ ನ ಓರ್ವ ಶಾಸಕ ಬುಧವಾರದಿಂದಲೂ ಗೈರಾಗಿದ್ದರು. ಇಂದು ಸಹ ಐವರು ಶಾಸಕರು ಗೈರಾಗಿದ್ದರೆ, ಬಜೆಟ್ ಮಂಡನೆಯಾಗುತ್ತಿದ್ದಂತೆಯೇ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿಬಿಟ್ಟರು.
ಬಜೆಟ್ ಅಧಿವೇಶನ ನಡೆಯಲು ಬಿಡದ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಬಜೆಟ್ ನಲ್ಲಿ ರೈತರಿಗೆ ಮತ್ತು ಜಲಸಂಪನ್ಮೂಲ ಇಲಾಖಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ರೈತರ ಆಭರಣದ ಮೇಲೆ ಸಾಲ ನೀಡುವ ಗೃಹಲಕ್ಷ್ಮಿ ಯೋಜನಯಿಂದ ಹಿಡಿದು, ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಸದನದಲ್ಲಿ ಮುಂದುವರಿದ ಬಿಜೆಪಿ ಗದ್ದಲ, ಕಲಾಪ ಮುಂದೂಡಿಕೆ
ಕರ್ನಾಟಕ ಬಜೆಟ್ ಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಗುಡ್ ರಿಟರ್ನ್ಸ್ ಕನ್ನಡ ಮತ್ತು ಒನ್ ಇಂಡಿಯಾ ಕನ್ನಡ ನೀಡಲಿದೆ.
Feb 08, 2019, 3:41 pm IST
3 ಗಂಟೆಗೂ ಹೆಚ್ಚು ಕಾಲ ಸುದೀರ್ಘ ಭಾಷಣ ಮಾಡಿದ ಎಚ್ ಡಿ ಕುಮಾರಸ್ವಾಮಿ
Feb 08, 2019, 3:35 pm IST
ತರಬೇತಿಗಾಗಿಕರಾವಳಿ ಪ್ಯಾಕೇಜ್ ಗೆ 5 ಕೋಟಿ ರೂ. ಅನುದಾನ
Feb 08, 2019, 3:33 pm IST
ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಲು ವಿತರಿಸಲು 638 ಕೋಟಿ ರೂ.
Feb 08, 2019, 3:14 pm IST
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಯರ ಸಹಾಯಧನ ಕ್ರಮವಾಗಿ ರೂ.500 , ರೂ.250 ಹೆಚ್ಚಳ
Feb 08, 2019, 3:09 pm IST
ಶೂನ್ಯ ಬಂಡವಾಳ ಕೃಷಿ ಯೋಜನೆಗೆ 40 ಕೋಟಿ ರೂ. ಅನುದಾನ
Feb 08, 2019, 2:58 pm IST
ಕಾಂಪಿಟ್ ವಿತ್ ಚೀನಾ ಯೋಜನೆ ಅನುಷ್ಠಾನಕ್ಕಾಗಿ 110 ಕೋಟಿ ರೂ.ಅನುದಾನ
Feb 08, 2019, 2:57 pm IST
ರಾಜ್ಯದ 600 ಸ್ಮಾರಕಗಳ ಸಂರಕ್ಷಣೆಗೆ ಕ್ರಮ
Feb 08, 2019, 2:54 pm IST
ಕೃಷಿ ಮತ್ತು ಕೃಷಿ ಸಂಬಂಧಿತ ಯೋಜನೆಗಳಿಗಾಗಿ 46850 ರೂ.
Feb 08, 2019, 2:45 pm IST
ಎಲ್ಲಾ ಮೆಟ್ರೋ ರೈಗಳಲ್ಲೂ ಆರು ಕೋಚ್ ವ್ಯವಸ್ಥೆ
Feb 08, 2019, 2:44 pm IST
ಸ್ಟಾರ್ಟ್ ಅಪ್ ಗೆ ಉತ್ತೇಜಿಸಲು ಪರಿಪೋಷಣಾ ಕೇಂದ್ರ ಸ್ಥಾಪನೆ
Feb 08, 2019, 2:41 pm IST
ಸಾಲಮನ್ನಾ ಮಾಡಲು ನಾಲ್ಕು ವರ್ಷದ ವರೆಗೆ ಕಾಯೋಲ್ಲ ಎಂದ ಎಚ್ ಡಿ ಕುಮಾರಸ್ವಾಮಿ
Feb 08, 2019, 2:37 pm IST
50 ಕೋಟಿ ರೂ. ವೆಚ್ಚದಲ್ಲಿ ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ
Feb 08, 2019, 2:33 pm IST
ಇಸ್ರೇಲ್ ಮಾದರಿ ಕೃಷಿ ಯೋಜನೆಗೆ 145 ಕೋಟಿ ರೂ.
Feb 08, 2019, 2:22 pm IST
ಪೆಟ್ರೋಲ್ ಆಟೋಗಳನ್ನು ಎಲೆಕ್ಟ್ರಿಕಲ್ ವಾಹನಗಳನ್ನಾಗಿ ಪರಿವರ್ತಿಸಲು ಪ್ರೋತ್ಸಾಹ
Feb 08, 2019, 2:22 pm IST
ಎಲ್ಲಾ ಟ್ಯಾಕ್ಸಿ, ಆಟೋ ಚಾಲಕರಿಗಾಗಿ ಗುಂಪುವಿಮೆ
Feb 08, 2019, 2:12 pm IST
ಸಂವಿಧಾನದ ಮಹತ್ವ ತಿಳಿಸಲು ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪನೆ
Feb 08, 2019, 2:10 pm IST
30 ಸಂಯುಕ್ತ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಯೋಜನೆ
Feb 08, 2019, 2:08 pm IST
ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ
Feb 08, 2019, 2:06 pm IST
ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಆರು ತಿಂಗಳ ಕಾಲ ನೀಡುವ ಮಾಸಿಕ 1000 ರೂ.ಗಳನ್ನು 2000 ರೂ.ಗೆ ಹೆಚ್ಚಳ
Feb 08, 2019, 2:03 pm IST
ಬೆಂಗಳೂರಿನ ಟ್ಯಾಕ್ಸಿ ಚಾಲಕರಿಗಾಗಿ
'ಸಾರಥಿ ಸೂರು' ಯೋಜನೆಗೆ 50 ಕೋಟಿ ರೂ.
Feb 08, 2019, 1:59 pm IST
ಕಾರವಾರ ಕೊಡಗಿನಲ್ಲಿ 450 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ
Feb 08, 2019, 1:54 pm IST
ಬೆಳ್ಳಂದೂರು, ವರ್ತೂರು ಕೆರೆಗಳಲ್ಲಿ ಜಲಗುಣಮಟ್ಟ ಮಾಪನ ಕೇಂದ್ರ ನಿರ್ಮಾಣ
Feb 08, 2019, 1:53 pm IST
500 ಕ್ಕೂ ಹೆಚ್ಚು ರೈಲು ಹಳಿಗಳಿಗೆ ತಡೆಗೋಡೆ ನಿರ್ಮಿಸಲು 620 ಕೋಟಿ ರೂ. ಅನುದಾನ
Feb 08, 2019, 1:50 pm IST
ಚಿಕ್ಕಮಗಳೂರಿನಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 50 ಕೋಟಿ ರೂ. ಅನುದಾನ
Feb 08, 2019, 1:47 pm IST
ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ ಭಾಷಾ ಕೌಶಲ್ಯ ಕೇಂದ್ರ
Feb 08, 2019, 1:46 pm IST
ಜಲಸಂಪನ್ಮೂಲ ಇಲಾಖೆಗೆ 17,202 ಕೋಟಿ ರೂ.
Feb 08, 2019, 1:44 pm IST
ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ
Feb 08, 2019, 1:44 pm IST
ವಿಸಿ ನಾಲೆ ಅಭಿವೃದ್ಧಿಗೆ 400 ಕೋಟಿ ರೂ. ಅನುದಾನ
Feb 08, 2019, 1:37 pm IST
ಹಾಲು ಉತ್ಪಾದಕರ ಉತ್ತೇಜನಕ್ಕಾಗಿ 2502 ಕೋಟಿ ರೂ.
Feb 08, 2019, 1:34 pm IST
ಶಿಕಾರಿಪುರ ಕೆರೆ ತುಂಬಿಸಲು 200 ಕೋಟಿ ರೂ.
Feb 08, 2019, 1:33 pm IST
ಕೊಪ್ಪಳ ಏತ ನೀರಾವರಿ ಯೋಜನೆಗೆ 500 ಕೋಟಿ ರೂ. ಅನುದಾನ
Feb 08, 2019, 1:31 pm IST
ಮಂಗನ ಕಾಯಿಲೆ ನಿವಾರಣೆಗೆ 5 ಕೋಟಿ ರೂ. ಅನುದಾನ
Feb 08, 2019, 1:30 pm IST
ರೈತ ಕಣಜ ಯೋಜನೆಗೆ 510 ಕೋಟಿ ರೂ, ಮೀಸಲು
Feb 08, 2019, 1:28 pm IST
ಗೃಹಲಕ್ಷ್ಮಿ ಯೋಜನೆಯಡಿ ಸಣ್ಣ, ಅತೀಸಣ್ಣ ರೈತರ ಆಭರಣದ ಮೇಲೆ ಶೇ.3 ರ ಬಡ್ಡಿದರದಲ್ಲಿ ಸಾಲ ಸೌಲಭ್ಯ
Feb 08, 2019, 1:27 pm IST
ಮೀನುಗಾರಿಕೆ ದೋಣಿಗಳಿಗೆ ಶೇ.50 ರಷ್ಟು ಸಹಾಯಧನ.
Feb 08, 2019, 1:25 pm IST
ತೋಟಗಾರಿಕೆಗೆ 15 ಕೋಟಿ ರೂ.ವಿಶೇಷ ಪ್ಯಾಕೇಜ್
Feb 08, 2019, 1:25 pm IST
ಧಾರವಾಡದಲ್ಲಿ ಮಾವು ಸಂಸ್ಕರಣಾ ಘಟಕ
Feb 08, 2019, 1:25 pm IST
ದಾಳಿಂಬೆ, ದ್ರಾಕ್ಷಿ ಬೆಳೆಗಾರರಿಗಾಗಿ ವಿಶೇಷ ಪ್ಯಾಕೇಜ್
ಮಿಡಿ ಸೌತೆ ಬೆಳೆ ಉತ್ತೇಜನಕ್ಕೆ ರೂ.6 ಕೋಟಿ.
Feb 08, 2019, 1:25 pm IST
ಕೋಲಾರದಲ್ಲಿ ಟೊಮ್ಯಾಟೋ ಉತ್ಪಾದಕ ಘಟಕ ಸ್ಥಾಪನೆಗೆ ಯೋಜನೆ
Feb 08, 2019, 1:25 pm IST
ರೇಷ್ಮೆ ಬೆಳಗಾರರಿಗೆ ಉತ್ತೇಜನ ನೀಡಲು 2 ಕೋಟಿ ರೂ.ಅನುದಾನ
Feb 08, 2019, 1:17 pm IST
ಇಸ್ರೇಲ್ ಮಾದರಿ ಕಿರುನೀರಾವರಿ ಯೋಜನೆಗೆ ಅನುಷ್ಠಾನ
Feb 08, 2019, 1:17 pm IST
ಸಿರಿಧಾನ್ಯ ಬೆಳೆ ಬೆಳೆಯುವ ರೈತರಿಗೆ ಸೂ.10 ಸಾವಿರ ಅನುದಾನ
Feb 08, 2019, 1:14 pm IST
ಸಿರಿಧಾನ್ಯ ಬೆಳೆಯಲು ಉತ್ತೇಜನ ನೀಡಲು 'ರೈತ ಸಿರಿ' ಯೋಜನೆ. ಅದಕ್ಕಾಗಿ 10 ಕೋಟಿ ರೂ.ಅನುದಾನ
Feb 08, 2019, 1:11 pm IST
ಕೃಷಿಹೊಂಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನ
Feb 08, 2019, 1:10 pm IST
ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆಗೆ ಆದ್ಯತೆ
Feb 08, 2019, 1:08 pm IST
ಬೆಂಗಳೂರು ಅಭಿವೃದ್ಧಿಗಾಗಿ 8015 ಕೋಟಿ ರೂ. ಅನುದಾನ
Feb 08, 2019, 1:06 pm IST
ಸಂಧ್ಯಾ ಸುರಕ್ಷಾ, ಮಾತೃಸುರಕ್ಷಾ ಯೋಜನೆಗಳಿಂದ ಸಾಕಷ್ಟು ಜನರಿಗೆ ನೆರವಾಗುತ್ತಿದೆ-ಎಚ್ ಡಿ ಕುಮಾರಸ್ವಾಮಿ
Feb 08, 2019, 1:06 pm IST
ಬೆಂಗಳೂರು ನಗರವನ್ನು ವಿಶ್ವದರ್ಜೆಗೆ ಏರಿಸುವುದಕ್ಕೆ ಆದ್ಯತೆ
Feb 08, 2019, 1:04 pm IST
ನಿರಾವರಿ ಯೋಜನೆಗಾಗಿ 1030 ಕೋಟಿ ರೂ. ಮಂಜೂರು
Feb 08, 2019, 1:03 pm IST
ಬರಪರಿಹಾರಕ್ಕೆ ಸುಮಾರು 300 ಕೋಟಿ ರೂ. ಅನುದಾನ
Feb 08, 2019, 1:00 pm IST
ಎಲ್ಲಾ ಜಿಲ್ಲೆಯ ಪ್ರಗತಿಪರ ರೈತರೊಂದಿಗೆ ಸಭೆ
Feb 08, 2019, 1:00 pm IST
ಎರಡನೇ ಹಂತದ ಮೆಟ್ರೋ ಯೋಜನೆಗೆ ಶ್ರೀಕಾರ
Feb 08, 2019, 12:59 pm IST
415 ಕೋಟಿ ರೂ ವೆಚ್ಚದಲ್ಲಿ ಒಳಚರಂಡಿ ಯೋಜನೆ
Feb 08, 2019, 12:58 pm IST
ಎಪಿಎಲ್ ಕುಟುಂಬಗಳಿಗೂ ಆರೋಗ್ಯ ಯೋಜನೆಯ ಲಾಭ
Feb 08, 2019, 12:56 pm IST
ಆಯುಷ್ಮಾನ್ ಯೋಜನೆ ಜೊತೆ ಆರೋಗ್ಯ ಕರ್ನಾಟಕ ಯೋಜನೆ ವಿಲೀನ
Feb 08, 2019, 12:56 pm IST
176 ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆ
Feb 08, 2019, 12:54 pm IST
ಬೀದಿ ವ್ಯಾಪಾರಿಗಳಿಗೆ 7.5 ಕೋಟಿ ರೂ.ಸಾಲವಿತರಣೆ
Feb 08, 2019, 12:51 pm IST
ಎತ್ತಿನಹೊಳೆ ಯೋಜನೆ ಜಾರಿಗೆ ಕ್ರಮ
Feb 08, 2019, 12:48 pm IST
ವಾಣಿಜ್ಯ ಬ್ಯಾಂಕುಗಳ ಸಾಲಮನ್ನಾಕ್ಕೂ ಪ್ರಯತ್ನಿಸಿದ್ದೇವೆ-ಎಚ್ ಡಿ ಕುಮಾರಸ್ವಾಮಿ
Feb 08, 2019, 12:47 pm IST
ಬಜೆಟ್ ಮಂಡನೆಗೆ ಅಡ್ಡಿ ಪಡಿಸುತ್ತಿರುವ ಶಾಸಕರು
Feb 08, 2019, 12:46 pm IST
ಕೊಡಗಿನಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಮನೆ ಕಲ್ಪಿಸಿದ್ದೇವೆ
Feb 08, 2019, 12:45 pm IST
ಬರಪರಿಹಾರಕ್ಕೆ ಕೇಂದ್ರದಿಂದ 2500 ಕೋಟಿ ರೂ.ಮನವಿ
Feb 08, 2019, 12:42 pm IST
ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ನಮ್ಮ ಸರ್ಕಾರದ ಧ್ಯೇಯ- ಎಚ್ ಡಿ ಕುಮಾರಸ್ವಾಮಿ
Feb 08, 2019, 12:35 pm IST
ವಿಧಾನಸಭೆಗೆ ಆಗಮಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
Feb 08, 2019, 12:24 pm IST
ಸಚಿವ ಸಂಪುಟ ಸಭೆಗೆ ತೆರಳಿದ ಮುಖ್ಯಮಂತ್ರಿ ಕುಮಾರಸ್ವಾಮಿ
Feb 08, 2019, 12:23 pm IST
ಸಿಎಲ್ ಪಿ ಸಭೆಗೆ ಐವರು ಕಾಂಗ್ರೆಸ್ ಶಾಸಕರು ಗೈರು. ಆದರೆ ಬಜೆಟ್ ಮಂಡನೆಗೆ ಯಾವುದೇ ತೊಂದರೆಯಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ
Feb 08, 2019, 12:23 pm IST
ಬಜೆಟ್ ಮಂಡನೆಗೆ ಅಡ್ಡಿಮಾಡುವುದಿಲ್ಲ ಎಂದು ಬಿ ಎಸ್ ಯಡಿಯೂರಪ್ಪ ಅಭಯ
Feb 08, 2019, 12:22 pm IST
ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡನೆ ಆರಂಭ
Feb 08, 2019, 10:26 am IST
ಇದೀಗ ಮಾಧ್ಯಮಗಳ ಮುಂದೆ ಆಡಿಯೂ ರಿಲೀಸ್ ಮಾಡಲಿರುವ ಎಚ್ ಡಿ ಕುಮಾರಸ್ವಾಮಿ
Feb 08, 2019, 10:17 am IST
ಆದರೆ ಇಲ್ಲಿ ಅವರ ಪಕ್ಷದ ನಾಯಕರಿಗೇ ಹೇಗೆ ನಡೆದುಕೊಳ್ಳುವುದು ಎಂಬುದು ಗೊತ್ತಿಲ್ಲ- ಎಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ
Feb 08, 2019, 10:17 am IST
ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಡೆ ಇಡೀ ದೇಶಕ್ಕೇ ಪಾಠ ಮಾಡುತ್ತಾರೆ.
Feb 08, 2019, 10:17 am IST
ಕರ್ನಾಟಕ ಬಜೆಟ್ ಮಂಡನೆಗೆ ಮುನ್ನ ದೇವರಿಗೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ
Feb 08, 2019, 10:16 am IST
ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಆಮಿಷವನ್ನೇ ಒಡ್ಡಿಲ್ಲ ಎಂಬಂತೆ ಮಾತನಾಡುತ್ತಿದ್ದಾರೆ-ಎಚ್ ಡಿ ಕುಮಾರಸ್ವಾಮಿ
Feb 08, 2019, 10:16 am IST
ಪ್ರಧಾನಿ ಮೋದಿಅವರು ಸಂಸತ್ತಿಗೆ ಆಗಮಿಸುವಾಗ ಸಂಸತ್ತಿನ ದ್ವಾರಕ್ಕೆ ತಲೆಬಾಗಿದ್ದು ನನಗೆ ನೆನಪಿದೆ. ಆದರೆ ಅಂದಿನ ಆ ವರ್ತನೆಗೆ ಸೂಕ್ತವಾಗುವಂತೆ ಅವರಿಂದು ವರ್ತಿಸುತ್ತಿದ್ದಾರಾ? ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ- ಎಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ
Feb 08, 2019, 10:16 am IST
ಪ್ರಧಾನಿ ಮೋದಿಅವರು ಸಂಸತ್ತಿಗೆ ಆಗಮಿಸುವಾಗ ಸಂಸತ್ತಿನ ದ್ವಾರಕ್ಕೆ ತಲೆಬಾಗಿದ್ದು ನನಗೆ ನೆನಪಿದೆ. ಆದರೆ ಅಂದಿನ ಆ ವರ್ತನೆಗೆ ಸೂಕ್ತವಾಗುವಂತೆ ಅವರಿಂದು ವರ್ತಿಸುತ್ತಿದ್ದಾರಾ? ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ- ಎಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ
Feb 08, 2019, 10:16 am IST
ಪತ್ರಿಕಾಗೋಷ್ಠಿಯಲ್ಲಿ ಮೋದಿ ವಿರುದ್ಧ ಹರಿಹಾಯುತ್ತಿರುವ ಎಚ್ ಡಿ ಕುಮಾರಸ್ವಾಮಿ
Feb 08, 2019, 10:16 am IST
ರಾಜ್ಯರಾಜಕೀಯ ಬೆಳವಣಿಗೆಯಿಂದಾಗಿ ತುರ್ತು ಪರಿಸ್ಥಿತಿ ಕರೆವ ಅನಿವಾರ್ಯತೆ ಆರಂಭವಾಗಿದೆ
Feb 08, 2019, 9:37 am IST
ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
Feb 08, 2019, 9:09 am IST
ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಸುಧಾಕರ್ ಮುಂಬೈನಿಂದ ವಾಪಸ್ಸಾಗಿದ್ದಾರೆ.
Feb 08, 2019, 8:31 am IST
ಇಂದು ಬೆಳಿಗ್ಗೆ 09 ಗಂಟೆಗೆ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಗೃಹಕಚೇರಿ ಕೃಷ್ಣಾ ದಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದಿದ್ದಾರೆ.
Feb 08, 2019, 8:29 am IST
ಇಂದು ಬೆಳಿಗ್ಗ 9:30 ಕ್ಕೆ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ ನಡೆಯುವ ಸಾಧ್ಯತೆ
Feb 08, 2019, 8:25 am IST
ಬಜೆಟ್ ಪ್ರತಿಯನ್ನು ಮಂಡನೆಗೂ ಮೊದಲು ಯಾರಿಗೂ ಕೊಡದಿರಲು ಮೈತ್ರಿ ಸರ್ಕಾರ ನಿರ್ಧಾರ. ಬಜೆಟ್ ಪ್ರತಿಯನ್ನು ಬಿಜೆಪಿ ಶಾಸಕರು ಹರಿದುಹಾಕುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ. ಮಾಧ್ಯಮಗಳಿಗೂ ಮೊದಲೇ ಬಜೆಟ್ ಪ್ರತಿನೀಡುವುದಿಲ್ಲ ಎಂದ ಸರ್ಕಾರ
Feb 08, 2019, 8:20 am IST
ಇಂದೂ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
Feb 08, 2019, 8:16 am IST
ನಾನು ಜೆಡಿಎಸ್ ಬಿಡೋಲ್ಲ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೂಡಲೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತೇನೆ- ನಾರಾಯಣಗೌಡ, ಕೆಆರ್ ಪೇಟೆ ಶಾಸಕ
Feb 08, 2019, 7:42 am IST
ಅಧಿವೇಶನಕ್ಕೆ ಹಾಜರಾಗದೆ ಇದ್ದ ಜೆಡಿಎಸ್ ನ ಕೆಆರ್ ಪೇಟೆ ಶಾಸಕ ನಾರಾಯಣಗೌಡ ಅವರು ಮುಂಬೈ ಆಸ್ಪತ್ರೆಗೆ ದಾಖಲಾಗಿರುವುದಾಗಿ ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ
Feb 08, 2019, 6:50 am IST
ಕಳೆದ ಎರಡೂ ದಿನಗಳಿಂದ ಅಧಿವೇಶನಕ್ಕೆ ಅಡ್ಡಿಪಡಿಸುತ್ತಿರುವ ಬಿಜೆಪಿ ಶಾಸಕರು ಇಂದು ಸಹ ಬಜೆಟ್ ಮಂಡನೆಗೆ ಅವಕಾಶ ನೀಡದಿರುವಂತೆ, ಗಲಾಟೆ ಎಬ್ಬಿಸಲು ಮುಂದಾಗಿದ್ದಾರೆ.
Feb 08, 2019, 6:47 am IST
ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಜ್ಯೋತಿಷಿ ಬಳಿ ಕೇಳಿರುವ ಮುಹೂರ್ತದಂತೆ ಶುಕ್ರವಾರ 12:32 ಕ್ಕೆ ಸರಿಯಾಗಿ ಬಜೆಟ್ ಮಂಡನೆ ಆರಂಭವಾಗಲಿದೆ.
Share This Article
English summary
Karnataka Budget 2019 LIVE coverage: HD Kumaraswamy to present budget today
Karnataka Budget 2019 LIVE coverage in Kannada. Chief minister HD Kumaraswamy who holds finance ministry with him, will be presenting Karnataka state budget 2019 today.
Story first published: Friday, February 8, 2019, 15:41 [IST]