ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) 2018-19 ಸಾಲಿನಲ್ಲಿ ಶೇ. 8.65 ಬಡ್ಡಿ ದರವನ್ನು ಪಾವತಿಸಲು ಸಾಕಷ್ಟು ಹೆಚ್ಚುವರಿ ಮೊತ್ತವನ್ನು ಹೊಂದಿದೆಯೇ? ಇದರಿಂದ ಐಎಲ್ & ಎಫ್ಎಸ್ (IL&FS) ನಂತಹ ಸಂಸ್ಥೆಗಳಿಗೂ ಗಂಡಾಂತರ ಎದುರಾಗಬಹುದಾಗಿದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) 2018-19 ಸಾಲಿನಲ್ಲಿ ಶೇ. 8.65 ಬಡ್ಡಿ ದರವನ್ನು ಪಾವತಿಸಲು ಸಾಕಷ್ಟು ಹೆಚ್ಚುವರಿ ಮೊತ್ತವನ್ನು ಹೊಂದಿದೆಯೇ? ಇದರಿಂದ ಐಎಲ್ & ಎಫ್ಎಸ್ (IL&FS) ನಂತಹ ಸಂಸ್ಥೆಗಳಿಗೂ ಗಂಡಾಂತರ ಎದುರಾಗಬಹುದಾಗಿದ್ದು, ಅವುಗಳಿಂದ ವಿವರ ಪಡೆಯಲಾಗಿದೆಯೆ? ಎಂಬುದರ ವಿವರ ನೀಡುವಂತೆ ಹಣಕಾಸು ಸಚಿವಾಲಯವು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವನ್ನು ಕೇಳಿದೆ.

ಫೆಬ್ರವರಿ ತಿಂಗಳಲ್ಲಿ ಕಾರ್ಮಿಕ ಸಚಿವ ಸಂತೋಷ ಗಂಗ್ವಾರ್ ನೇತೃತ್ವದಲ್ಲಿ ನಡೆದ ಇಪಿಎಫ್ಒ ಮಂಡಳಿ ಸಭೆಯಲ್ಲಿ ಇಪಿಎಫ್ ಬಡ್ಡಿದರ ಏರಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು.
ಮುಂದಿನ ಹಣಕಾಸು ವರ್ಷಕ್ಕೆ ಸಾಕಾಗುವಷ್ಟು ಹೆಚ್ಚುವರಿ ಹಣ ಇದೆಯೇ ಎಂದು ಕಾರ್ಮಿಕ ಸಚಿವಾಲಯ ಕೇಳಿದೆ. ಇಪಿಎಫ್ಓ ಚಂದಾದಾರರಿಗೆ ಹಣ ಪಾವತಿಸುವ ಹೊಣೆಗಾರಿಕೆ ಸರ್ಕಾರದ್ದಾಗಿರುತ್ತದೆ. ಅದಕ್ಕಾಗಿಯೇ ಪೂರ್ವನಿಯೋಜಿತವಾಗಿ ಇಪಿಎಫ್ಒ ಖಾತೆಗಳ ಜವಾಬ್ಧಾರಿಯನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ನಮ್ಮ ಲೆಕ್ಕಾಚಾರಗಳು ಸರಿಯಾಗಿದ್ದು, ಕಳೆದ 20ಕ್ಕಿಂತ ಹೆಚ್ಚು ವರ್ಷಗಳಿಂದ ನಾವು ಈ ಪ್ರಕ್ರಿಯೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ನಾವು ಅನುಸರಿಸುತ್ತಿರುವ ವಿಧಾನ ಹೊಸದಲ್ಲ. ಹಣಕಾಸು ಸಚಿವಾಲಯ ಕೆಲವು ಪ್ರಶ್ನೆಗಳನ್ನು ನಮ್ಮ ಮುಂದೆ ಇಟ್ಟಿದ್ದು, ನಾವು ಅವುಗಳಿಗೆ ಉತ್ತರಿಸುತ್ತಿದ್ದೇವೆ ಎಂದು ಇಪಿಎಫ್ಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಎಲ್ ಮತ್ತು ಎಫ್ಎಸ್ ಸಂಸ್ಥೆಯ ಮಾನ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ, ಇಪಿಎಫ್ಒ ಅಧಿಕಾರಿಯು ಐಎಲ್ ಮತ್ತು ಎಫ್ಎಸ್ ನಲ್ಲಿ ಹೂಡಿಕೆ ಮಾಡಿದ ಹಣವನ್ನು ಕಳೆದುಕೊಂಡರೆ ಅದನ್ನು ಹೇಗೆ ನಿರ್ವಹಿಸುತ್ತಿರಿ ಎಂಬುದನ್ನು ವಿವರಿಸುವಂತೆ ಅವರಲ್ಲಿ ಕೇಳಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಇಪಿಎಫ್ ಬಡ್ಡಿದರ ಶೇ. 8.65ರಷ್ಟು ಹೆಚ್ಚಿಸಿ ಪಾವತಿಸಲು ನಿರ್ಧರಿಸಲಾಗಿದೆ. 2017-18 ರಲ್ಲಿ ಇಪಿಎಫ್ ಬಡ್ಡಿದರ ಶೇ. 8.55ರಷ್ಟಿತ್ತು. 2016-17 8.65ರಷ್ಟಿತ್ತು. ಅಂದರೆ ಮುರು ವರ್ಷಗಳ ನಂತರ ಮತ್ತೆ ಶೇ. 8.65ರಷ್ಟು ಏರಿಸಲಾಗಿದೆ. ಹೀಗಾಗಿ ಇಷ್ಟೊಂದು ಬಡ್ಡಿದರ ಪಾವತಿಸಲು ಸಾಧ್ಯವಿದೆಯೇ ಎಂದು ಹಣಕಾಸು ಸಚಿವಾಲಯ ಪ್ರಶ್ನಿಸಿ ವಿವರ ನೀಡುವಂತೆ ಇಪಿಎಫ್ಒ ಸಂಸ್ಥೆಗೆ ಹೇಳಿದೆ.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications