For Quick Alerts
For Daily Alerts
ಬ್ಯಾಂಕ್ ಗ್ರಾಹಕರಿಗೆ ಆಧಾರ್ ಕೆವೈಸಿ ನಿಯಮ: ಆರ್ಬಿಐ
ಬ್ಯಾಂಕುಗಳು ಗ್ರಾಹಕರ ಒಪ್ಪಿಗೆಯನ್ನು ಪಡೆದುಕೊಂಡು ದಾಖಲೆಗಳ ದೃಢೀಕರಣಕ್ಕೆ ಆಧಾರ್ ಕಾರ್ಡ್ ಬಳಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
|
ಬ್ಯಾಂಕುಗಳು ಗ್ರಾಹಕರ ಒಪ್ಪಿಗೆಯನ್ನು ಪಡೆದುಕೊಂಡು ದಾಖಲೆಗಳ ದೃಢೀಕರಣಕ್ಕೆ ಆಧಾರ್ ಕಾರ್ಡ್ ಬಳಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಖಾತೆ ತೆರೆಯುವುದು ಒಳಗೊಂಡಂತೆ ವಿವಿಧ ಸೇವೆ ನೀಡುವ ಸಂದರ್ಭದಲ್ಲಿ ಬ್ಯಾಂಕ್/ಹಣಕಾಸು ಸಂಸ್ಥೆಗಳು ಗ್ರಾಹಕರಿಂದ ಅಗತ್ಯ ಮಾಹಿತಿ ಪಡೆದುಕೊಳ್ಳಬೇಕು. ಇದಕ್ಕಾಗಿ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ನಿಯಮ ಜಾರಿ ತಂದಿದೆ.
ಗ್ರಾಹಕರು ಹಣಕಾಸು ವ್ಯವಹಾರ ಮತ್ತು ಮೊಬೈಲ್ ಸಿಮ್ ಕಾರ್ಡ್ ಸೇವೆಯ ಸಂದರ್ಭದಲ್ಲಿ ಗುರುತಿನ ಉದ್ದೇಶಕ್ಕಾಗಿ ಸ್ವಯಂ ಪ್ರೇರಿತರಾಗಿ ಆಧಾರ್ ನಂಬರ್ ನೀಡುತ್ತಿದ್ದರೆ ಅಂತಹ ಗ್ರಾಹಕರ ಆಧಾರ್ ದೃಢೀಕರಣ ಕೈಗೊಳ್ಳಬಹುದು ಎಂದು ಕೆವೈಸಿ ಹೊಸ ನಿಯಮದಲ್ಲಿ ತಿಳಿಸಲಾಗಿದೆ.
ನೇರ ನಗದು ವರ್ಗಾವಣೆ (ಡಿಬಿಟಿ) ಯೋಜನೆ ಅಡಿಯಲ್ಲಿ ಗ್ರಾಹಕರು ಸರ್ಕಾರದಿಂದ ಯಾವುದೇ ಸಬ್ಸಿಡಿ ಪ್ರಯೋಜನ ಪಡೆಯಬೇಕಾದರೆ ಆಧಾರ್ ನಂಬರ್ ಒದಗಿಸಿ, ಕೆವೈಸಿ ದೃಢೀಕರಣ ನಡೆಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
English summary
RBI Throws Open Aadhaar KYC Mechanism For Banks
Story first published: Friday, May 31, 2019, 11:08 [IST]