For Quick Alerts
For Daily Alerts
ಆಧಾರ್ ಕಾರ್ಡ್ ಬಳಕೆದಾರರಿಗೆ ಗುಡ್ ನ್ಯೂಸ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಡೆದ ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಮಹತ್ವದ ಮಸೂದೆ ಪಾಸ್ ಮಾಡಲಾಗಿದೆ.
|
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಮಹತ್ವದ ಮಸೂದೆ ಪಾಸ್ ಮಾಡಲಾಗಿದೆ. ಇದರ ಪ್ರಕಾರ ಬ್ಯಾಂಕ್ ಖಾತೆ ತೆರೆಯಲು, ಸಿಮ್ ಕಾರ್ಡ್ ಪಡೆಯಲು ಆಧಾರ್ ಅನಿವಾರ್ಯವಲ್ಲ. ಆದರೆ ಗ್ರಾಹಕರು ಸ್ವಯಂಪ್ರೇರಿತರಾಗಿ ಆಧಾರ್ ನ್ನು ಪುರಾವೆಯಾಗಿ ಬ್ಯಾಂಕುಗಳು ಮತ್ತು ಟೆಲಿಕಾಂ ಕಂಪನಿಗಳಿಗೆ ಸಲ್ಲಿಸಬಹುದಾಗಿದೆ.
ಸಿಮ್ ಕಾರ್ಡ್ ಖರೀದಿಸುವಾಗ ಇಲ್ಲವೇ ಬ್ಯಾಂಕುಗಳಲ್ಲಿ ಖಾತೆ ತೆರೆಯುವಾಗ ಆಧಾರ್ ಕಾರ್ಡ್ ನ್ನು ಪುರಾವೆಯಾಗಿ ಕೇಳಿದರೆ ಅದನ್ನು ತಿರಸ್ಕರಿಸುವ ಹಕ್ಕು ನಿಮಗಿದೆ. ಒಂದು ವೇಳೆ ಆಧಾರ್ ಕಾರ್ಡ್ ಗಾಗಿ ಒತ್ತಾಯ ಮಾಡಿದರೆ ಕೋರ್ಟ್ ಗೆ ಹೋಗಬಹುದು.
ಆಧಾರ್ ಕಾರ್ಡನ್ನು ತಪ್ಪಾಗಿ ಬಳಕೆ ಮಾಡುವುದು ಅಪರಾಧ. ಇದು ಸಾಬೀತಾದರೆ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಗ್ರಾಹಕರ ಇಚ್ಛೆಯಂತೆ ಬ್ಯಾಂಕುಗಳು ಖಾತೆ ತೆರೆಯಲು ಆಧಾರ್ ಕಾರ್ಡನ್ನು ದಾಖಲೆಯಾಗಿ ಪಡೆಯಬಹುದು.ಆದರೆ ಆಧಾರ್ ಕಾರ್ಡ್ ಗಾಗಿ ಒತ್ತಾಯ ಮಾಡುವಂತಿಲ್ಲ.
ಜೂನ್ 17 ರಿಂದ ಪ್ರಾರಂಭವಾಗುವ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಸರ್ಕಾರ ಈ ಮಸೂದೆಯನ್ನು ಪರಿಚಯಿಸಲಿದೆ. ಖಾಸಗಿ ಸಂಸ್ಥೆಗಳು ಆಧಾರ್ ಬಳಸಲು ಅನುಮತಿಸುವ ಆಧಾರ್ ಕಾಯ್ದೆಯ ಸೆಕ್ಷನ್ 57 ಅನ್ನು ತೆಗೆದು ಹಾಕಲು ಮಸೂದೆಯು ಪ್ರಸ್ತಾಪಿಸಿದೆ. ಆದರೆ ಆಧಾರ್ ಉಲ್ಲಂಘನೆಯಾದರೆ ದಂಡವನ್ನು ಸಹ ಭರಿಸಬೇಕಾಗುತ್ತದೆ.
ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ?
English summary