ಜೆಟ್ ಏರ್ ವೇಸ್ ವಿಮಾನ ಯಾನ ಕಂಪೆನಿಯ ಷೇರುಗಳು ಒಂದೇ ದಿನ ಶೇಕಡಾ 53ರಷ್ಟು ಕುಸಿತ ಕಂಡಿದೆ. ಏಪ್ರಿಲ್ 18ನೇ ತಾರೀಕಿನ ಮಂಗಳವಾರದಂದು ವಾರ್ಷಿಕ ಕನಿಷ್ಠ ಮಟ್ಟವಾದ 32.25 ರುಪಾಯಿಯನ್ನು ಈ ಷೇರು ತಲುಪಿತು. ಜೆಟ್ ಏರ್ ವೇಸ್ ನಿಂದ ಬರಬೇಕಾದ ಬಾಕಿ ಮೊತ್ತದ ವಸೂಲಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ದಿವಾಳಿ ಅರ್ಜಿ ಹಾಕಲಾಗಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಷೇರು ಮೌಲ್ಯ ನೆಲ ಕಚ್ಚಿದೆ.
ಕಳೆದ ಏಳು ದಿನದಲ್ಲಿ ಕಂಪೆನಿಯು ತನ್ನ ಶೇಕಡಾ 73ರಷ್ಟು ಮೌಲ್ಯವನ್ನು ಕಳೆದುಕೊಂಡಿದೆ. ಸಾಲ ನೀಡಿರುವ ಬ್ಯಾಂಕ್ ಗಳ ಒಕ್ಕೂಟದ ಪರವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಮುಂಬೈನಲ್ಲಿರುವ ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯೂನಲ್ ಮೊರೆ ಹೋಗಿದೆ. ಜೆಟ್ ಏರ್ ವೇಸ್ ವಿರುದ್ಧ ದಿವಾಳಿ ಅರ್ಜಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಕಿದೆ.
ಜೆಟ್ ಏರ್ವೇಸ್ ಗೆ ಮತ್ತೆ ಆಘಾತ: ಮುಖ್ಯ ಹಣಕಾಸು ಅಧಿಕಾರಿ ರಾಜೀನಾಮೆ
ಇಪ್ಪತ್ತಾರು ಬ್ಯಾಂಕ್ ಗಳ ಒಕ್ಕೂಟವು ಸೋಮವಾರದಂದು ಈ ನಿರ್ಧಾರ ಕೈಗೊಂಡಿವೆ ಎಂದು ಎಸ್ ಬಿಐ ತಿಳಿಸಿದೆ. ದಿವಾಳಿ ಕಾನೂನಿನ ಅಡಿಯಲ್ಲಿ ಕೆಲವು ವಿನಾಯಿತಿಯನ್ನು 'ಸೆಬಿ'ಯಿಂದ ನೀಡಿದರೆ ಹೂಡಿಕೆದಾರರು ಜೆಟ್ ಏರ್ ವೇಸ್ ಖರೀದಿಗೆ ಮುಂದಾಗಬಹುದು ಎಂಬ ನಿರೀಕ್ಷೆ ಇದೆ. ಏಪ್ರಿಲ್ ಹದಿನೇಳನೇ ತಾರೀಕು ಜೆಟ್ ಏರ್ ವೇಸ್ ವಿಮಾನಗಳ ಹಾರಾಟ ನಿಲ್ಲಿಸಿದೆ. ಅದಾಗಿ ಎರಡು ತಿಂಗಳಿಗೆ ಈ ನಿರ್ಧಾರಕ್ಕೆ ಬರಲಾಗಿದೆ.

ಎಥಿಹಾದ್- ಹಿಂದುಜಾ ಒಕ್ಕೂಟದಿಂದ ಜೆಟ್ ಏರ್ ವೇಸ್ ಖರೀದಿಗೆ ಆಸಕ್ತಿ ತೋರಿದರೂ ಗಟ್ಟಿಯಾದ ಪ್ರಸ್ತಾವವನ್ನು ಇನ್ನೂ ಮುಂದಿಟ್ಟಿಲ್ಲ. ಸಾಲ ನೀಡಿರುವವರಿಂದ ವಿನಾಯಿತಿಯನ್ನು ಕೇಳುತ್ತಿದ್ದಾರೆ. ಆಪರೇಷನಲ್ ಸಾಲಗಾರರ ಅಹವಾಲನ್ನು ಮೊದಲಿಗೆ ಟ್ರಿಬ್ಯೂನಲ್ ಜೂನ್ ಇಪ್ಪತ್ತರಂದು ಆಲಿಸಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಇಪ್ಪತ್ತಾರು ಬ್ಯಾಂಕ್ ಗಳ ಒಕ್ಕೂಟಕ್ಕೆ ಜೆಟ್ ಏರ್ ವೇಸ್ ಎಂಟು ಸಾವಿರ ಕೋಟಿ ರುಪಾಯಿ ಸಾಲ ನೀಡಬೇಕಾಗಿದೆ. ಅದರ ಒಟ್ಟಾರೆ ನಷ್ಟ ಹದಿಮೂರು ಸಾವಿರ ಕೋಟಿ, ಸಿಬ್ಬಂದಿ ವೇತನ ಮೂರು ಸಾವಿರ ಕೋಟಿ, ಇನ್ನು ಉಳಿದಂತೆ ಹತ್ತು ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದೆ.
ಜೆಟ್ ಏರ್ವೇಸ್ ಷೇರು ಮಾರಾಟ: ಖರೀದಿಗೆ ಭಾರತೀಯರ ನಿರಾಸಕ್ತಿ
ಇಪ್ಪತ್ತೈದು ವರ್ಷಗಳ ಹಿಂದೆ ನರೇಶ್ ಗೋಯಲ್ ಅವರಿಂದ ಆರಂಭವಾದ ಅತಿ ದೊಡ್ಡ ಖಾಸಗಿ ಏರ್ ಲೈನ್ಸ್ ಜೆಟ್ ಏರ್ ಲೈನ್ಸ್. ಕಳೆದ ಏಪ್ರಿಲ್ ಹದಿನೇಳನೇ ತಾರೀಕು ನೂರಕ್ಕೂ ಹೆಚ್ಚು ವಿಮಾನಗಳ ಹಾರಾಟ ನಿಲ್ಲಿಸಿತು. ಮಂಗಳವಾರ ಮಧ್ಯಾಹ್ನ 3.15ರ ಹೊತ್ತಿಗೆ ಜೆಟ್ ಏರ್ ವೇಸ್ ಷೇರಿನ ಬೆಲೆ ನಿಫ್ಟಿ ಸೂಚ್ಯಂಕದಲ್ಲಿ ರು.40.30ರಲ್ಲಿ ವಹಿವಾಟು ಆಗುತ್ತಿತ್ತು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications