ವಸೂಲಾಗದ ಸಾಲ (ಎನ್ಪಿಎ) 9.34 ಲಕ್ಷ ಕೋಟಿಗೆ ಇಳಿಕೆ
ಸರ್ಕಾರವು ಕೈಗೊಂಡ ಕ್ರಮಗಳ ಹಿನ್ನಲೆಯಲ್ಲಿ ವಾಣಿಜ್ಯ ಬ್ಯಾಂಕುಗಳು ಹೊಂದಿರುವ ವಸೂಲಾಗದ ಸಾಲವು 2018-19ರ ಆರ್ಥಿಕ ವರ್ಷದಲ್ಲಿ ರೂ. 1.02 ಲಕ್ಷ ಕೋಟಿಯಿಂದ ರೂ. 9.34 ಲಕ್ಷ ಕೋಟಿಗೆ ಇಳಿದಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸರ್ಕಾರವು ಕೈಗೊಂಡ ಕ್ರಮಗಳ ಹಿನ್ನಲೆಯಲ್ಲಿ ವಾಣಿಜ್ಯ ಬ್ಯಾಂಕುಗಳು ಹೊಂದಿರುವ ವಸೂಲಾಗದ ಸಾಲವು 2018-19ರ ಆರ್ಥಿಕ ವರ್ಷದಲ್ಲಿ ರೂ. 1.02 ಲಕ್ಷ ಕೋಟಿಯಿಂದ ರೂ. 9.34 ಲಕ್ಷ ಕೋಟಿಗೆ ಇಳಿದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ದೇಶದ ವಾಣಿಜ್ಯ ಬ್ಯಾಂಕುಗಳು ಹೊಂದಿರುವ ಒಟ್ಟು ವಸೂಲಾಗದ ಸಾಲದ ಮೊತ್ತದಲ್ಲಿ ಇಳಿಕೆಯಾಗಿದ್ದು, ಪ್ರಸ್ತುತ ಬ್ಯಾಂಕುಗಳಲ್ಲಿ ರೂ. 9.34 ಲಕ್ಷ ಕೋಟಿ ಎನ್ಪಿಎ ಇದೆ. ವಸೂಲಾಗದಿರುವ ಸಾಲಗಳ ನಿರ್ವಹಣೆಗೆ ಸರಕಾರ ಕೈಗೊಂಡಿರುವ ಕ್ರಮಗಳು ಫಲಿತಾಂಶ ಕೊಡುತ್ತಿವೆ ಎಂದು ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಬ್ಯಾಂಕಿಂಗ್ ವಲಯವನ್ನು ಕಾಡುತ್ತಿದ್ದ ವಸೂಲಾಗದಿರುವ ಸಾಲದ ಹೊರೆ ನಿಯಂತ್ರಿಸಲು ನಾಲ್ಕು ಕಾರ್ಯತಂತ್ರಗಳನ್ನು ಅನುಸರಿಸಿತ್ತು. ವಸೂಲಾಗದ ಸಾಲಗಳನ್ನು (ಎನ್ಪಿಎ) ಪಾರದರ್ಶಕವಾಗಿ ಗುರುತಿಸುವುದು, ವಿಲೇವಾರಿಯ ನಿರ್ಧಾರ ಮತ್ತು ಎನ್ಪಿಎಯ ಮೌಲ್ಯ ನಿಗದಿ, ಸಾರ್ವಜನಿಕ ಬ್ಯಾಂಕುಗಳಿಗೆ ಮರು ಬಂಡವಾಳ ಮತ್ತು ಸಾರ್ವಜನಿಕ ಬ್ಯಾಂಕ್ಗಳ ಸುಧಾರಣೆಯಂತ ಪ್ರಮುಖ ಕಾರ್ಯತಂತ್ರಗಳನ್ನು ಅನುಸರಿಸಿತ್ತು.
ಕಂಪನಿಗಳ ದಿವಾಳಿತನ ನೀತಿ ಸಂಹಿತೆ (ಐಬಿಸಿ) ಅಸ್ತಿತ್ವಕ್ಕೆ ಬಂದ ನಂತರ ಸಾಲದ ವಹಿವಾಟಿನಲ್ಲಿ ಸಾಕಷ್ಟು ಬದಲಾವಣೆಗಳುಂಟಾಗಿವೆ. ಬ್ಯಾಂಕು ಹಾಗೂ ಸಾಲಗಾರರ ಸಂಬಂಧಗಳಲ್ಲಿ ಪರಿವರ್ತನೆಯಾಗುತ್ತಿದ್ದು, ಸಾಲ ಮರುಪಾವತಿಸದೆ ಸುಸ್ತಿ ಸಾಲಗಾರರಾಗಿರುವ ಉದ್ಯಮಿಗಳಿಗೆ ಅವರ ಕಂಪನಿಗಳ ಮಾಲಿಕತ್ವ/ನಿಯಂತ್ರಣ ಕೈತಪ್ಪುವ ಭೀತಿ ಇರುವುದರಿಂದ ಸಾಲ ಮರುಪವತಿ ಅಥವಾ ಇತ್ಯರ್ಥಕ್ಕೆ ಸ್ವಯಂ ಮುಂದಾಗುತ್ತಿದ್ದಾರೆ.
2018-19ರ ಅವಧಿಯಲ್ಲಿ, 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಒಳಗೊಂಡ ಗರಿಷ್ಠ ಸಂಖ್ಯೆಯ ವಂಚನೆಗಳ ಪೈಕಿ ಐಸಿಐಸಿಐ ಬ್ಯಾಂಕ್ ನಲ್ಲಿ 374 ಗರಿಷ್ಠ ವಂಚನೆ ವರದಿಯಾಗಿವೆ. ನಂತರ ಕೋಟಕ್ ಮಹೀಂದ್ರಾ ಬ್ಯಾಂಕ್ (338), ಎಚ್ಡಿಎಫ್ಸಿ ಬ್ಯಾಂಕ್ (273), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (273), ಆಕ್ಸಿಸ್ ಬ್ಯಾಂಕ್ (195) ಮತ್ತು ಅಮೇರಿಕನ್ ಎಕ್ಸ್ ಪ್ರೆಸ್ ಬ್ಯಾಂಕಿಂಗ್ ಕಾರ್ಪೊರೇಷನ್ (190) ವಂಚನಾ ಪ್ರಕರಣಗಳು ವರದಿಯಾಗಿವೆ.
More From GoodReturns

Ugadi 2026: ಯುಗಾದಿ ನಂತರ ಈ ರಾಶಿಯವರಿಗೆ ಹಣವೋ ಹಣ; ನೀವೂ ಇದ್ದೀರಾ ನೋಡಿ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications